ಬೇಳಂಜೆ ಸೇತುವೆ ದುರಸ್ತಿ ಕಾರ್ಯ ಆರಂಭ
Team Udayavani, May 19, 2019, 6:10 AM IST
ಹೆಬ್ರಿ: ಚಾರ ಗ್ರಾ.ಪಂ. ವ್ಯಾಪ್ತಿಯ ಹೆಬ್ರಿ-ಕುಂದಾಪುರ ಮಾರ್ಗದ ನವೋದಯ ಶಾಲೆ ಬಳಿ ಇರುವ ಹೆಬ್ರಿ ಬೇಳಂಜೆ ಸೇತುವೆ ಅಪಾಯದ ಅಂಚಿನಲ್ಲಿದ್ದು ಇದೀಗ ದುರಸ್ತಿ ಕಾರ್ಯ ಆರಂಭಗೊಂಡಿದೆ.
1958ರಲ್ಲಿ ನಿರ್ಮಾಣವಾದ ಈ ಸೇತುವೆಯ ಪ್ರಮುಖ ಪಿಲ್ಲರ್ಗಳ ಬುಡದಲ್ಲಿಯೇ ಕಲ್ಲುಗಳು ಕುಸಿದಿದ್ದು ಈ ಬಗ್ಗೆ ಉದಯವಾಣಿ ಎ. 29ರಂದು ಅಪಾಯದ ಅಂಚಿನಲ್ಲಿ ಹೆಬ್ರಿ-ಬೇಳಂಜೆ ಸೇತುವೆ ಎಂಬ ಲೇಖನ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿದ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಲಾಯಡ್ ನೇತೃತ್ವದಲ್ಲಿ ತಾತ್ಕಾಲಿಕ ದುರಸ್ತಿ ಕಾರ್ಯ ಆರಂಭಗೊಂಡಿದೆೆ.
ಪ್ರಮುಖ ಪಿಲ್ಲರ್ನ ಬುಡದಲ್ಲಿ ಬೃಹತ್ ಕಲ್ಲುಗಳು ಉರುಳಿದ್ದು ಈ ಭಾಗಕ್ಕೆ ಬುಡದಿಂದ ಕಾಂಕ್ರಿಟ್ ಕಾಮಗಾರಿ ನಡೆಯುತ್ತಿದೆ. ಈ ಬಾರಿ ಸೀತಾನದಿ ಪೂರ್ಣ ಬತ್ತಿಹೋಗಿದ್ದು, ನೀರಿಲ್ಲದ ಕಾರಣ ದುರಸ್ತಿಗೆ ಅನುಕೂಲವಾಗಿದೆ. ಪ್ರಮುಖ ಪಿಲ್ಲರ್ ಜತೆ ಇನ್ನೊಂದು ಪಿಲ್ಲರ್ ಕೂಡ ಹಾನಿಗೊಂಡಿದ್ದು ಅದನ್ನೂ ಈಗಲೇ ದುರಸ್ತಿಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ