ಓಟಿಗೆ ಸ್ಪರ್ಧಿಸಲು ಮನೆ ಬಿಟ್ಟಿದ್ದೆ !


Team Udayavani, Apr 17, 2018, 6:00 AM IST

Bg-Mohandas.jpg

ಬೈಂದೂರು ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಪ್ರಥಮ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಘಟಾನುಘಟಿ ಮುತ್ಸದ್ದಿಗಳ ನಡುವೆ ರಾಜಕೀಯ ಅಖಾಡದಲ್ಲಿ ಹೋರಾಟ ನಡೆಸಿ ಪ್ರಥಮ ಬಾರಿಗೆ ಕಾಂಗ್ರೆಸ್‌ ಗೆಲುವಿಗೆ ಅಂಕುಶ ಹಾಕಿ ಕೇವಲ 23 ಮತಗಳಿಂದ ಜನತಾದಳ ವಿಜಯ ಸಾಧಿಸಲು ಕಾರಣರಾದವರು ಬಿ.ಜಿ. ಮೋಹನ್‌ದಾಸ್‌. ವೈದ್ಯಕೀಯ, ಔಷಧಾಲಯ ಶಾಸ್ತ್ರ ವಿಭಾಗದಲ್ಲಿ ಉನ್ನತ ಶಿಕ್ಷಣ ಪಡೆದಿರುವ ಇವರ ರಾಜಕೀಯ ಎಂಟ್ರಿ ಬಹಳ ರೋಚಕವಾಗಿದೆ.

ರಾಜಕೀಯ ಪ್ರವೇಶಿಸಲು ಕಾರಣ ?
     ನನ್ನ ತಂದೆ ವೃತ್ತಿಯಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಿದ್ದವರು.ಅವರ ವರ್ಗಾವಣೆಯಾದಂತೆ ಬೇರೆ ಬೇರೆ ಕಡೆ ಶಾಲೆಗೆ ಹೋಗಬೇಕಾದ ಅನಿವಾರ್ಯತೆ. ಕಾಲೇಜು ದಿನಗಳಲ್ಲೇ ನಾಯಕತ್ವ ಮೈಗೂಡಿಸಿಕೊಂಡಿದ್ದ ನನಗೆ ಊರಿನ ಪರಿಸ್ಥಿತಿ ಬಗ್ಗೆ ಬೇಸರವಿದ್ದಿತ್ತು. ಸೌದಿ ಆರೇಬಿಯಾದಲ್ಲಿ ಒಂದೂವರೆ ವರ್ಷ ಉದ್ಯೋಗ ಮಾಡಿ ಭಾರತಕ್ಕೆ ವಾಪಸಾದೆ. ಅದೇ ಸಮಯದಲ್ಲಿ ಊರಿನಲ್ಲಿ ಚುನಾವಣೆ ಪ್ರಾರಂಭವಾಗಿತ್ತು. ಕೈಯಲ್ಲಿ ದುಡಿದ ಹಣವಿತ್ತು. ಊರಿನ ಅಭಿವೃದ್ಧಿ ಮಾಡಲು ಅವಕಾಶ ಉಪಯೋಗಿಸಿಕೊಳ್ಳಬೇಕು ಎಂದು ಪಕ್ಷೇತರವಾಗಿ ರಾಜಕೀಯ ಪ್ರವೇಶಿಸಿದೆ.

ಕುಟುಂಬದವರ ರಾಜಕೀಯ ಹಿನ್ನೆಲೆ ಬಗ್ಗೆ
          ಕುಟುಂಬದಲ್ಲಿ ರಾಜಕೀಯ ಹಿನ್ನೆಲೆಯಿಲ್ಲ. ನನ್ನ ತಂದೆ ತುಂಬಾ ಕಟ್ಟುನಿಟ್ಟು. ಉತ್ತಮ ಕೃಷಿಕ. ರಾಜಕೀಯ ಅವರಿಗೆ ಇಷ್ಟ ಇರಲಿಲ್ಲ. ನಾನು ಚುನಾವಣೆಗೆ ಸ್ಪರ್ಧಿಸುವುದಾದರೆ ಮನೆ ಬಿಡಬೇಕು ಎಂದರು. ರಾಜಕೀಯಕ್ಕೋಸ್ಕರ ಮನೆಬಿಟ್ಟು ಅಜ್ಜಿ ಮನೆಯಲ್ಲಿ ವಾಸ ಮಾಡಿದೆ.

ನಿಮ್ಮ ರಾಜಕೀಯ ಪ್ರಚಾರ ಹೇಗಿತ್ತು?
      ಆ ಸಮಯದಲ್ಲಿ ಜನರಿಗೆ ಕಾಂಗ್ರೆಸ್‌ ಬಿಟ್ಟರೆ ಇನ್ನೊಂದು ಪಕ್ಷ ಗೊತ್ತಿರಲಿಲ್ಲ. ನಾನು ಪಕ್ಷೇತರನಾಗಿದ್ದೆ. ಆದರೂ ನನ್ನ ಉದಯ ಸೂರ್ಯ ಚಿಹ್ನೆ ಹೆಸರುವಾಸಿಯಾಯಿತು.

ಅಂದು ರಾಜಕೀಯ ಪೈಪೋಟಿ ಹೇಗಿತ್ತು?
      ಬೈಂದೂರಿನಲ್ಲಿ ಜಿ.ಎಸ್‌. ಆಚಾರ್‌, ಯಡ್ತರೆ ಮಂಜಯ್ಯ ಶೆಟ್ಟಿಯಂತಹ ನಾಯಕರ ಜತೆಗೆ ಅಪ್ಪಣ್ಣ ಹೆಗ್ಡೆ ಪ್ರತಿ ಸ್ಪರ್ಧಿ ಯಾಗಿದ್ದರು. ನಾನು ಬೈಂದೂರು ಜಂಕ್ಷನ್‌ ಬಳಿ ಪ್ರಚಾರದ ಚಪ್ಪರ ನಿರ್ಮಿಸುವಾಗ ವೀರಪ್ಪ ಮೊಲಿ ನನ್ನನ್ನು ನೋಡಿ ಆಸ್ಕರ್‌ ಫೆರ್ನಾಂಡಿಸ್‌ ಅವರಿಗೆ ನನ್ನ ಬಗ್ಗೆ ಹೇಳಿದ್ದರು. “ಯಾರೋ ಮಣಿಪಾಲದ ಹುಡುಗ. ಬೈಂದೂರಲ್ಲಿ ಪಕ್ಷೇ ತರನಾಗಿ ಸ್ಪರ್ಧಿಸಿದ್ದಾನೆ; ಅವನಿಗೆ ಸ್ವಲ್ಪ ಹೇಳಿ’ ಎಂದಿದ್ದರು.

ಫಲಿತಾಂಶದ  ಬಳಿಕ ಅನುಭವ ಹೇಗಿತ್ತು?
         ಆವತ್ತು ಬಿಸಿ ರಕ್ತದ ಯುವಕರ ಪಡೆ, ಸೌದಿ ಅರೇಬಿಯಾ ದಲ್ಲಿ ದುಡಿದ ಸ್ವಲ್ಪ ಹಣ ಇತ್ತು. ಚುನಾವಣೆಯಲ್ಲಿ ಜಯ ಗಳಿಸದಿದ್ದರೂ ಸಮರ್ಥ ಸ್ಪರ್ಧೆ ನೀಡಿರುವ ಸಮಾಧಾನ ಇದೆ. ನನ್ನ ಸ್ಪರ್ಧೆಯಿಂದಾಗಿ ಕಾಂಗ್ರೆಸ್‌ ಕೇವಲ 23 ಮತಗಳ ಅಂತರದಲ್ಲಿ ಸೋಲುವಂತಾಯಿತು. ಸ್ವಲ್ಪ ದಿನದಲ್ಲೇ ರಾಜಕೀಯಕ್ಕೆ ಗುಡ್‌ಬೈ ಹೇಳಿ ಮತ್ತೆ ವಿದೇಶಕ್ಕೆ ಹೋದೆ.ಈಗಿನ ರಾಜಕೀಯ ಅನ್ನೋದು ವ್ಯವಹಾರ ಆಗಿದೆ. ಅಂದು ನಾನು ಸ್ಪರ್ಧೆ ಮಾಡಿದ್ದು ಕ್ಷೇತ್ರದಲ್ಲಿ   ಮೂಲಸೌಲಭ್ಯಗಳನ್ನು ಕಲ್ಪಿಸಬೇಕು ಎಂಬ ಕಾರಣಕ್ಕೆ.

– ಅರುಣ ಶಿರೂರು

ಟಾಪ್ ನ್ಯೂಸ್

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

accident

Kunigal; ಬೈಕ್‌ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.