ಮಲ್ಪೆ: ಮತದಾನ ಜಾಗೃತಿಗೆ ಮರಳು ಶಿಲ್ಪ
Team Udayavani, Apr 16, 2018, 11:54 AM IST
ಮಲ್ಪೆ: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಲ್ಪೆ ಸಮುದ್ರ ತೀರದಲ್ಲಿ ರವಿವಾರ ಉಡುಪಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಮೂಡಿಸುವ ಆಕರ್ಷಕ ಮರಳು ಶಿಲ್ಪವನ್ನುರಚಿಸಲಾಯಿತು. ಮಣಿಪಾಲದ ಸ್ಯಾಂಡ್ ಆರ್ಟ್ ಕಲಾವಿದರಾದ ಶ್ರೀನಾಥ್ ಮಣಿಪಾಲ, ರಾಘವೇಂದ್ರ ಅಮೀನ್, ರವಿ ಹಿರೇಬೆಟ್ಟು, ಚಂದಪ್ಪ ಅಮ್ಮುಂಜೆ ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ವಿಧಾನ ಸೌಧದ ಮಾದರಿ ಹಾಗೂ ಜಾಗೃತಿ ಫಲಕಗಳನ್ನು ಮರಳಿನಲ್ಲಿ ಮೂಡಿಸಿದರು.