ಕೊಳಚೆ ಪ್ರದೇಶಗಳಲ್ಲಿ ಕೆನಾ ಪ್ಲಾಂಟ್‌ ಬೆಳೆಸಲು ಜಿ.ಪಂ. ಉತ್ತೇಜನ


Team Udayavani, Jun 13, 2018, 4:10 AM IST

gida-12-6.jpg

ಉಡುಪಿ: ಮಳೆಗಾಲದಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಹಾಗೂ ಹೆಚ್ಚಿನೆಲ್ಲ ಮನೆಗಳಲ್ಲಿ ಬಚ್ಚಲು ಮನೆಯ ಕೊಳಚೆ ನೀರು ನಿಂತು ಪರಿಸರ ಕೆಡಲು ಕಾರಣವಾಗುತ್ತದೆ. ಇದಕ್ಕಾಗಿ ಕೊಳಚೆ ನೀರನ್ನು ಹಿರಿಕೊಳ್ಳುವ ವಿಶಿಷ್ಟ ಗುಣ ಹೊಂದಿರುವ ಕೆನಾ ಗಿಡಗಳನ್ನು ಬೆಳೆಸಲು ಆಯಾಯ ಗ್ರಾ.ಪಂ.ಗಳು ಮುತುವರ್ಜಿ ವಹಿಸಿಕೊಳ್ಳಲು ಜಿ.ಪಂ. ಉತ್ತೇಜನ ಕೊಟ್ಟಿದೆ. ಈಗಾಗಲೇ ಜಿಲ್ಲಾಡಳಿತ, ಜಿ.ಪಂ. ಮತ್ತು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆ (SLRM) ಯೋಜನೆಯಡಿ ದೊಡ್ಡಣಗುಡ್ಡೆಯಲ್ಲಿರುವ ತೋಟಗಾರಿಕಾ ಇಲಾಖೆ ಜಾಗದಲ್ಲಿ ಕೆನಾ ಪ್ಲಾಂಟೇಶನ್‌ ಅನ್ನು ನಿರ್ಮಿಸಿ ಕೆನಾ ಗಿಡಗಳನ್ನು ಬೆಳೆಸಲಾಗುತ್ತಿದೆ. ಈ ಗಿಡಗಳನ್ನು ಕೊಳಚೆ ನಿಲ್ಲುವ ಎಲ್ಲ ಮನೆಯವರೂ ನೆಟ್ಟು ಕೊಳಚೆ ಮುಕ್ತ ಪರಿಸರಕ್ಕೆ ಸಹಕರಿಸಬೇಕು. ಆಯಾಯ ಪಂಚಾಯತ್‌ಗಳು ಕೂಡ ಉತ್ತೇಜಿಸಬೇಕಿದೆ ಎಂದು ಜಿ.ಪಂ. ಹೇಳಿದೆ.

ಕೆನಾ ಗಿಡಗಳ ವೈಶಿಷ್ಟ್ಯ

ತನ್ನಷ್ಟಕ್ಕೇ ಬೆಳೆಯುತ್ತಿದ್ದ ಹಾಗೂ ಹಿಂದೆ ಹಳ್ಳಿ ಪ್ರದೇಶಗಳಲ್ಲಿ ಎಲ್ಲೆಡೆ ಕಂಡುಬರುತ್ತಿದ್ದ ಈ ಗಿಡಗಳು ಇಂದು ಅಪರೂಪದಂತಾಗಿವೆ.  ಕೆಸರು, ಮಲಿನಯುಕ್ತ ನೀರು ನಿಲ್ಲುವ ಜಾಗಗಳಲ್ಲಿ ಕೆನಾ ಗಿಡಗಳಿದ್ದರೆ ತುಂಬಾ ಪ್ರಯೋಜನಕಾರಿ. ನೀರನ್ನು ಬಹುಬೇಗನೆ ಹೀರಿಕೊಳ್ಳುತ್ತವೆೆ. ಬ್ಯಾಕ್ಟೀರಿಯಾಗಳು ಉತ್ಪಾದನೆಯಾಗದಂತೆ ತಡೆಯುತ್ತವೆ. ಒಂದು ಗಿಡ ಇದ್ದರೆ ಬೇರಿನಲ್ಲಿರುವ ಗೆಡ್ಡೆಗಳ ಮೂಲಕ ಗಿಡಗಳ ಸಂಖ್ಯೆ ದ್ವಿಗುಣಗೊಳ್ಳುತ್ತಾ ಹೋಗುತ್ತದೆ. ಒಂದು ಗಿಡ ನೆಟ್ಟರೆ ಕೆಲವೇ ಸಮಯಗಳಲ್ಲಿ ಹತ್ತಾರು ಆಗುತ್ತದೆ. ಇವುಗಳಿರುವ ಪ್ರದೇಶದಲ್ಲಿ ಸೊಳ್ಳೆಗಳು ಕೂಡ ಉತ್ಪಾದನೆಯಾಗುವುದಿಲ್ಲ. ಕಿತ್ತಳೆ ಹಳದಿ ಕೆಂಪು ಮಿಶ್ರಿತ ಅಂದವಾದ ಹೂವುಗಳನ್ನೂ ಇದು ಬಿಟ್ಟು ಪರಿಸರ ಸುಂದರವಾಗಿ ಕಾಣುವಂತೆ ಮಾಡುತ್ತದೆ.

ಶೇ. 50 ರಿಯಾಯಿತಿ
ದೊಡ್ಡಣಗುಡ್ಡೆಯಲ್ಲಿ ಕೆನಾ ಗಿಡದ ಪ್ಲಾಂಟೇಶನ್‌ ನಿರ್ಮಿಸಲಾಗಿದ್ದು, ಸಾಕಷ್ಟು ಗಿಡಗಳನ್ನು ಇಲ್ಲಿ ಬೆಳೆಸಲಾಗಿದೆ. ಮಲಿನ ಮುಕ್ತಕ್ಕೆ ಈ ಗಿಡಗಳು ಸಹಕಾರಿಯಾಗಿವೆ. ಇದಕ್ಕೆ ಹಳ್ಳಿಯಲ್ಲಿ ಕಾಬಾಳೆ ಎನ್ನುತ್ತಾರೆ. ಒಂದು ಗಿಡಕ್ಕೆ 20 ರೂ. ದರವಿದೆ. ಪರಿಸರ ದಿನಾಚರಣೆಯ ಪ್ರಯುಕ್ತ ಜಿ.ಪಂ., ಜಿಲ್ಲಾಡಳಿತದ ನಿರ್ದೇಶನದಲ್ಲಿ ಕೆಲ ದಿನಗಳವರೆಗೆ ಇದನ್ನು 10 ರೂ. ದರಕ್ಕೆ ಮಾರಾಟ ಮಾಡುತ್ತಿದ್ದೇವೆ. ಗ್ರಾ.ಪಂ. ಮಟ್ಟದಲ್ಲಿ ಉತ್ತಮ ಸ್ಪಂದನೆ ಇದೆ. ಅರಿವು ಮೂಡಿಸುವ ಕಾರ್ಯ ಹೆಚ್ಚಾಗಿ ಆಗಬೇಕಿದೆ. ಉಡುಪಿ ಸುತ್ತಮುತ್ತಲ ಕೆಲ ಗ್ರಾ.ಪಂ. ವ್ಯಾಪ್ತಿಯ ಕೊಳಚೆ ಪ್ರದೇಶದಲ್ಲಿ ಈಗಾಗಲೇ ಈ ಗಿಡವನ್ನು ನೆಡುತ್ತಿದ್ದೇವೆ ಎಂದು ಎಸ್‌ಎಲ್‌ಆರ್‌ಎಂ ಉತ್ಪನ್ನ ತಯಾರಿ ಮತ್ತು ಮಾರಾಟ ಮಳಿಗೆಯ ಭಾಸ್ಕರ್‌ ಶೆಟ್ಟಿ ತಿಳಿಸಿದ್ದಾರೆ.

ಗ್ರಾ.ಪಂ.ಗಳಿಗೆ ನಿರ್ದೇಶನ
ನಿಟ್ಟೆ, ವಂಡ್ಸೆ, ಹೆಬ್ರಿ ಮೊದಲಾದೆಡೆಗಳಲ್ಲಿರುವ SLRM ಕೇಂದ್ರಗಳಲ್ಲಿ  ಪರಿಸರ ಸ್ನೇಹಿ ಕೆನಾ ಗಿಡಗಳನ್ನು ಬೆಳೆಸಲಾಗುತ್ತಿದೆ. ಮಾರಾಟವೂ ಪ್ರಾರಂಭವಾಗಿದೆ. ಕೆಲ ಮನೆಗಳಲ್ಲಿ ಕೆನಾ ಗಿಡಗಳಿದ್ದರೂ, ಕೊಳಚೆ ನೀರನ್ನು ಹೀರಿಕೊಳ್ಳುವ ವಿಶಿಷ್ಟ ಗುಣ ಹೊಂದಿದೆ ಎನ್ನುವ ಅರಿವು ಹಲವರಿಗಿಲ್ಲ. ಗ್ರಾ.ಪಂ. ಮೂಲಕ ಕೆನಾ ಗಿಡಗಳನ್ನು ಮನೆ ಪರಿಸರ, ಮುಖ್ಯವಾಗಿ ಕಾಲನಿಗಳನ್ನು ನೆಡಲು ನಿರ್ದೇಶನ ನೀಡಲಾಗಿದೆ. ಈಗಾಗಲೇ SLRM ಕೇಂದ್ರದವರು ಪಂಚಾಯತ್‌ಗಳ ಮೂಲಕ ಕೆಸರು ನಿಲ್ಲುವ ಪ್ರದೇಶಗಳಲ್ಲಿ ಕೆನಾ ಗಿಡ ನೆಡುವ ಕಾರ್ಯ ನಡೆಸುತ್ತಿದ್ದಾರೆ. ಈಗಷ್ಟೇ ಚಾಲನೆ ಕೊಡಲಾಗಿದೆ. ಜನರು ಪಾತ್ರೆ ತೊಳೆದ ನೀರು, ಬಚ್ಚಲು ಮನೆ ನೀರು ನಿಲ್ಲುವಲ್ಲಿ ಕೆನಾ ಗಿಡಗಳನ್ನು ನೆಟ್ಟರೆ ಆ ಭಾಗದ ಜಲಮೂಲವೂ ಶುದ್ಧವಾಗುತ್ತದೆ. ಬಾವಿಗಳಿಗೆ ಕೊಳಚೆ ನೀರು ಸೇರುವುದನ್ನು ತಪ್ಪಿಸಬಹುದು.
– ಶ್ರೀನಿವಾಸ ರಾವ್‌, ಜಿ.ಪಂ. ಮುಖ್ಯ ಯೋಜನಾಧಿಕಾರಿ

ಉತ್ತೇಜನ ಕೊಡುತ್ತೇವೆ
ದೊಡ್ಡಣಗುಡ್ಡೆಯ ತೋಟಗಾರಿಕೆ ಇಲಾಖೆ ಜಾಗದಲ್ಲಿಯೇ ಕೆನಾ ಪ್ಲಾಂಟ್‌ ಬೆಳೆಸಲು ಇಲಾಖೆಯಿಂದ ಉತ್ತೇಜನ ಕೊಡಲಾಗಿದೆ. ಪ್ರಾಥಮಿಕ ಅನುದಾನ ಒದಗಿಸಲಾಗಿದ್ದು, ಸುತ್ತ ಬೇಲಿ ಹಾಕಿ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ. SLRMನವರು ನಿರ್ವಹಣೆ ಮಾಡುತ್ತಿದ್ದು, ಅವರೇ ಮಾರಾಟ ಮಾಡುತ್ತಾರೆ.
– ನಿದೀಶ್‌, ತೋಟಗಾರಿಕಾ ಇಲಾಖೆ ತಾಂತ್ರಿಕ ಅಧಿಕಾರಿ

— ಚೇತನ್‌ ಪಡುಬಿದ್ರಿ

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.