ಸಂಪೂರ್ಣ ಹದಗೆಟ್ಟ ಮಾಸ್ತಿಕಟ್ಟೆ-ಮಾವಿನಕಾರು ರಸ್ತೆ
Team Udayavani, Nov 27, 2019, 4:07 AM IST
ಕೊಲ್ಲೂರು: ಕೊಲ್ಲೂರಿನ ಮಾಸ್ತಿಕಟ್ಟೆಯಿಂದ ಮಾವಿನಕಾರು ಎಂಬಲ್ಲಿಗೆ ಸಾಗುವ 2 ಕಿ.ಮೀ. ದೂರ ವ್ಯಾಪ್ತಿಯ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು ವಾಹನ ಚಾಲಕರು ಹರಸಾಹಸ ಮಾಡಿ ಸಾಗಬೇಕಾದ ಪರಿಸ್ಥಿತಿ ಎದುರಾಗಿದೆ. ಕೊಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾವಿನಕಾರು ಹಾಗೂ ಬಾವಡಿಗೆ ಸಾಗುವ ಮಣ್ಣು ರಸ್ತೆಯು ಮಳೆಗಾಲದಲ್ಲಿ ಸಂಪೂರ್ಣವಾಗಿ ಕೆಸರು ಮಯವಾಗಿ ಪಾದಚಾರಿಗಳ ಸಹಿತ ವಾಹನಗಳು ಸಾಗುವುದು ಕಷ್ಟ ಸಾಧ್ಯವಾಗಿದೆ. ಅದೇ ರೀತಿ ಬೇಸಗೆಯ ಈ ಸಂದರ್ಭದಲ್ಲಿ ಈ ಮಾರ್ಗವು ಭಾರೀ ಹೊಂಡಗಳಿಂದ ಕೂಡಿದ್ದು ನಿತ್ಯ ಪ್ರಯಾಣಿಕರ ಗೋಳು ಹೇಳತಿರದು.
70 ಮನೆಗಳಿದ್ದು 400 ಮಂದಿ ವಾಸ್ತವ್ಯ
ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾಕರು ವಾಸವಾಗಿರುವ ಈ ಭಾಗದಲ್ಲಿ 70 ಮನೆಗಳಿದ್ದು, ಸುಮಾರು 400 ಮಂದಿ ವಾಸ್ತವ್ಯ ವಿದ್ದಾರೆ. ಇಷ್ಟೆಲ್ಲ ಮಂದಿ ಇದ್ದರೂ ಕೂಡ ಇಲ್ಲಿನ ಮುಖ್ಯ ರಸ್ತೆಗೆ ಈ ವರೆಗೆ ಡಾಮರು ಕಾಣುವ ಭಾಗ್ಯ ಲಭಿಸಿಲ್ಲ. ನೌಕರರು, ಕಾರ್ಮಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ವಾಸವಾಗಿರುವ ಇಲ್ಲಿ ಅಭಯಾರಣ್ಯದ ಕಾನೂನು ಮೂಲ ಸೌಕರ್ಯಗಳಿಗೆ ತೊಡಕಾಗಿದೆ.
ಗ್ರಾ.ಪಂ.ನಲ್ಲಿ ಸಂಪನ್ಮೂಲ ಕೊರತೆ
ಲಕ್ಷಾಂತರ ರೂ. ವೆಚ್ಚದ ಡಾಮರು ಕಾಮಗಾರಿಗೆ ಕೊಲ್ಲೂರು ಗ್ರಾ.ಪಂ.ನಲ್ಲಿ ಆರ್ಥಿಕ ವ್ಯವಸ್ಥೆಯ ಕೊರತೆ ಇದೆ. ಹಾಗಾಗಿ ಬೇಸಗೆಯಲ್ಲಿ ಕೇವಲ ಮಣ್ಣು ತುಂಬಿ ಹೊಂಡ ಮುಚ್ಚುವ ಕಾರ್ಯಕ್ಕೆ ಸೀಮಿತವಾಗಿರುವ ಗ್ರಾ.ಪಂ.ಗೆ ಕೈಚೆಲ್ಲಿ ಕುಳಿತು ಕೊಳ್ಳಬೇಕಾದ ಅನಿವಾರ್ಯ ಎದುರಾಗಿದೆ.
ರಿವಿಟ್ಮೆಂಟ್ ಇಲ್ಲದ ಸೇತುವೆ
ಸುಮಾರು 4 ವರ್ಷಗಳ ಹಿಂದೆ ಮಾವಿನಕಾರು- ಕಂಬಳಗದ್ದೆ ಎಸ್.ಟಿ. ಕಾಲನಿಗೆ ಹೋಗುವ ಮಾರ್ಗವಾಗಿ ಗಾಡಿಜೆಡ್ಡು ಎಂಬಲ್ಲಿನ ಬಾವಡಿ ಹೊಳೆಗೆ 65 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿತ್ತು ಆದರೆ ಎರಡೂ ಬದಿಗಳ ಸಂಪರ್ಕ ರಸ್ತೆಗೆ ರಿವಿಟ್ ಮೆಂಟ್ ಕಾಮಗಾರಿ ಇನ್ನೂ° ಪೂರ್ಣಗೊಳ್ಳದಿರುವುದು ಸುಗಮ ವಾಹನ ಸಂಚಾರಕ್ಕೆ ತೊಡಕಾಗಿದೆ.
ಪ್ರಯಾಸದ ಪ್ರಯಾಣ ಮಾವಿನಕಾರು-ಬಾವಡಿ ನಿವಾಸಿಗಳಿಗೆ
ದುಃಸ್ಥಿತಿಯಲ್ಲಿರುವ ರಸ್ತೆಯಿಂದಾಗಿ ಪ್ರಯಾಣ ದುಸ್ತರವಾಗಿದೆ. ಕುಂದಾಪುರ, ಕೊಲ್ಲೂರು ಮುಂತಾದೆಡೆ ಕಾರ್ಯನಿಮಿತ್ತ ತೆರಳಿ ರಾತ್ರಿ ವೇಳೆ ಹಿಂದಿರುಗುವವರಿಗೆ ಈ ಮಾರ್ಗವು ಪ್ರಯಾಸದ ಪ್ರಯಾಣದ ದಾರಿ ಆಗಿದೆ. ಇದಕ್ಕೊಂದು ಪರಿಹಾರ ಒದಗಿಸುವಲ್ಲಿ ಜನಪ್ರತಿನಿ ಧಿಗಳು ಕ್ರಮ ಕೈಗೊಳ್ಳಬೇಕು.
-ಜಯಪ್ರಕಾಶ ಶೆಟ್ಟಿ, ಗ್ರಾಮಸ್ಥರು
ಸರಕಾರದ ನೆರವು ಅಗತ್ಯ
ಮಾವಿನಕಾರು-ಬಾವಡಿ ರಸ್ತೆ ಡಾಮರು ಕಾಮಗಾರಿಗೆ ಸರಕಾರ ಕೈಜೋಡಿಸಿದಲ್ಲಿ ಆ ಭಾಗದ ನಿವಾಸಿಗಳ ಬಹುಕಾಲದ ಬೇಡಿಕೆ ಈಡೇರಿಸಬಹುದು. ಪಂ.ನಲ್ಲಿ ಅಷ್ಟೊಂದು ಮೊತ್ತ ವಿನಿಯೋಗಿಸುವುದು ಕಷ್ಟ ಸಾಧ್ಯ.
-ಎಸ್. ಕುಮಾರ್, ಅಧ್ಯಕ್ಷರು ಗ್ರಾ.ಪಂ. ಕೊಲ್ಲೂರು.
ಡಾ| ಸುಧಾಕರ ನಂಬಿಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramanagara: ಈಜಲು ಹೋಗಿದ್ದ ಮೂವರು ಮಕ್ಕಳು ನೀರುಪಾಲು
Magadi; ಕಾರಿಗೆ ಅಡ್ಡ ಬಂದ ಕುದುರೆ, ವಾಹನಗಳ ಸರಣಿ ಅಪಘಾತ; ಐವರಿಗೆ ಗಂಭೀರ ಗಾಯ
Tollywood: ಪ್ರಶಾಂತ್ ನೀಲ್ – Jr. NTR ಸಿನಿಮಾಕ್ಕೆ ಈ ಟೈಟಲ್ ಫಿಕ್ಸ್?
Kannada Cinema; ‘ಸ್ವಪ್ನ ಮಂಟಪ’ದಲ್ಲಿ ವಿಜಯ ರಾಘವೇಂದ್ರ-ರಂಜನಿ; ಬರಗೂರು ನಿರ್ದೇಶನ
AAP Leader ಬಿಭವ್ ಕುಮಾರ್ ನನ್ನ ಕೆನ್ನೆಗೆ ಹೊಡೆದು, ಎದೆಗೆ ಒದ್ದರು..; ಸ್ವಾತಿ ಮಲಿವಾಲ್