ನ‌ದಿಗಳಲ್ಲಿ ಸೃಷ್ಟಿಯಾಗಿದೆ ಮರಳು ದಿಬ್ಬ: ಕಾದಿದೆ ಅಪಾಯ


Team Udayavani, Sep 19, 2017, 4:14 PM IST

19-kk-1.jpg

ಕುಂದಾಪುರ:  ಪಶ್ಚಿಮಘಟ್ಟಗಳ ಮೂಲದಿಂದ ಪಶ್ಚಿಮಾಭಿಮುಖವಾಗಿ ಹರಿಯುವ ಪಂಚಗಂಗಾವಳಿ ನದಿ ಸೇರಿದಂತೆ ಇತರ ನದಿಯಲ್ಲಿ   ಮರಳುಗಾರಿಕೆಯ ನಿಷೇಧದಿಂದಾಗಿ  ನದಿಗಳಲ್ಲಿ  ಕಾಲಕಾಲಕ್ಕೆ ಹೂಳು ತೆಗೆಯದೇ  ಮರಳ ದಿಬ್ಬಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾ ಹೋಗಿ ಪ್ರಸ್ತುತ  ಕಡಲಸೇರುವ ನದಿಗಳು ಅಪಾಯದ ಅಂಚಿನಲ್ಲಿವೆೆ. ನದಿಯಲ್ಲಿ ಈ ಹಿಂದೆ ಎಂದೂ ಕಾಣದ   ಮರಳಿನ ಸಣ್ಣ ಸಣ್ಣ ದಿಬ್ಬಗಳು ಹಾಗೂ ಅದರಲ್ಲಿ  ಬೆಳೆದುನಿಂತ ಸಸ್ಯಗಳು ದಿಬ್ಬಗಳನ್ನು ಇನ್ನಷ್ಟು ವಿಸ್ತಾರಗೊಳಿಸುತ್ತಾ ಇವೆ.

ಮುಚ್ಚಿಹೋಗುವ ಪರಿಸ್ಥಿತಿ
ವಿಸ್ತರಣೆ ಹೆಚ್ಚುತ್ತಾ ಹೋದಂತೆ ಪ್ರಸ್ತುತ  ಇಳಿತದ ಸಮಯದಲ್ಲಿ ಬರೇ ಮರಳಿನ ಕುದುರುಗಳೇ ಕಂಡುಬರುತ್ತಿದೆ. ಇದರಿಂದಾಗಿ ನದಿಯ ನೀರು ಸರಾಗವಾಗಿ  ಹರಿಯಲು ಅವಕಾಶವಿಲ್ಲದೇ ನದಿಯೇ ಮುಚ್ಚಿಹೋಗುವ ಪರಿಸ್ಥಿತಿ ಉಂಟಾಗಿದೆ.

ಅಪಾಯಕಾರಿ ಬೆಳವಣಿಗೆ
ಕುಂದಾಪುರದ ಪಂಚಗಂಗಾವಳಿ ನದಿಯಲ್ಲಿ ರುವ ಬಬ್ಬುಕುದ್ರು ಪ್ರದೇಶಕ್ಕೆ ಹೆಚ್ಚಿನ ಮರಳ ದಿಬ್ಬಗಳು ಸಾಲು ಸಾಲಾಗಿ ಸೇರಿ ಗಂಗೊಳ್ಳಿ  ಮತ್ತು ಕುಂದಾಪುರ ಪ್ರತ್ಯೇಕಿಸುವ ಲಕ್ಷಣಗಳು ಕಂಡು ಬರುತ್ತಿವೆೆ. ಮೀನುಗಾರರಿಗೆ ದೋಣಿ ಸಂಚಾರಕ್ಕೆ  ಅಡಚಣೆ ಉಂಟಾಗಿದೆ. ಭವಿಷ್ಯದ ದೃಷ್ಟಿಯಲ್ಲಿ  ಅಪಾಯಕಾರಿ ಬೆಳವಣಿಗೆ. 

ಮರಳುಗಾರಿಕೆ ನಿಷೇಧವೇ ಕಾರಣ
ಜಿಲ್ಲೆಯ  ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಿಷೆಧ ಹೇರಿ ಹಲವಾರು ತಿಂಗಳುಗಳು ಕಳೆದಿವೆ.  ಕುಂದಾಪುರ – ಗಂಗೊಳ್ಳಿ ನಡುವಿನ ಪಂಚಗಂಗಾವಳಿ ಹೊಳೆಯಲ್ಲಿರುವ ಮರಳು ನೇರವಾಗಿ ಗಂಗೊಳ್ಳಿ ಅಳಿವೆ ಬಾಗಿಲನ್ನು ಸೇರಿಕೊಳ್ಳುವುದರ ಜೊತೆಗೆ  ನದಿಯಲ್ಲಿ ಅಲ್ಲಲ್ಲಿ ಶೇಖರಣೆಯಾಗುತ್ತಾ ದಿಬ್ಬಗಳಾಗುತ್ತಿವೆೆ. ಇಲ್ಲಿ ಮರಳುಗಾರಿಕೆಗೆ ಅವಕಾಶ ನೀಡಿದ್ದಲ್ಲಿ   ಈ ಮರಳು ದಿಬ್ಬಗಳ ನಿರ್ಮೂಲನೆ ಸಾಧ್ಯ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.   ನದಿಯಲ್ಲಿ  ಅಲ್ಲಲ್ಲಿ  ಮರಳದಿಬ್ಬ  ಸೃಷ್ಟಿಯಾಗುತ್ತಾ ಹೋಗಿ  ನದಿ ಪಾತ್ರವನ್ನೇ ಬದಲಿಸಿ ಬಿಟ್ಟಿದೆ. ದಿಬ್ಬಗಳಲ್ಲಿ ಗಿಡಗಳು ಬೆಳೆದು ಕಾಡಾಗುತ್ತಿದೆ.

ನಿಯಮಾವಳಿ ತಡೆಯಾಗದು
ಸಿ.ಆರ್‌.ಝಡ್‌ ನಿಯಮಾವಳಿಗಳ ನೆಪ ಮುಂದಿಟ್ಟು  ಅಧಿಕಾರಿಗಳು ಹಲವೆಡೆ ಮರಳುಗಾರಿಕೆಗೆ ಆಕ್ಷೇಪ ವ್ಯಕ್ತ ಪಡಿಸುತ್ತಿದ್ದರೂ, ಪ್ರಾಕೃತಿಕ ದುರಂತ ತಪ್ಪಿಸುವ ಉದ್ದೇಶದಿಂದ ಕ್ರಮ ಕೈಗೊಳ್ಳಲು ಯಾವುದೇ ನಿಯಮಾವಳಿಗಳು ಅಡ್ಡ ಬರುವುದಿಲ್ಲ ಎಂದು ತಿಳಿಯಬೇಕಾಗಿದೆ.

ಅಧ್ಯಯನ ಅಗತ್ಯ
ಪಂಚ ಮಹಾನದಿಗಳು  ಕುಂದಾಪುರ ಕಡೆ ಹರಿದು ನದಿ ಸೇರುವ ಈ ಹಾದಿಯಲ್ಲಿ  ಮರಳಿನಿಂದ ತುಂಬಿ ಹೋಗಿರುವುದರಿಂದ ನದಿ ಉತ್ತರಕ್ಕೆ ತಿರುಗಿ ಸೌರ್ಪರ್ಣಿಕಾ ನದಿಯೊಂದಿಗೆ ಸೇರಿ ಸಮುದ್ರ ಸೇರುವ ಹಂತದಲ್ಲಿದೆ.  ಹೀಗಾಗಿ ಈ ಐದು ನದಿಗಳು ಹರಿಯುವ ನದಿಯ ನಡುವಿನಲ್ಲಿರುವ  ಬಬ್ಬುಕುದ್ರು ಪ್ರದೇಶದ ಎಡಗಡೆಯಲ್ಲಿ ನದಿಯ ನೀರು  ಹರಿಯದಂತಾಗಿ ನದಿ ನೀರು ಕವಲಾಗಿ ಸಾಗಿ  ಗಂಗೊಳ್ಳಿ ಕಡೆ ಹರಿಯುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ. ಒಟ್ಟಾರೆ  ನದಿಯಲ್ಲಿ ಅಲ್ಲಲ್ಲಿ  ತಲೆ ಎತ್ತಿರುವ ದಿಬ್ಬಗಳನ್ನು ತೆರವಿನ ಅಗತ್ಯ ಇದೆ.

ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಿಷೇಧಿಸಲಾಗಿದೆ. ಈ ಭಾಗದ ನದಿಗಳಲ್ಲಿ ಮೀನುಗಾರಿಕಾ ದೋಣಿಗಳು ಸಂಚಾರಕ್ಕೆ  ಅಡ್ಡಿಯಾಗಿರುವ  ಮರಳು ದಿಬ್ಬಗಳನ್ನು  ಮಾತ್ರ ತೆಗೆಯಲು ಹಸುರು ಪೀಠ ಅವಕಾಶ ನೀಡಿದ್ದು, ಅದರಂತೆ ಮರಳು ದಿಬ್ಬಗಳ ತೆರವು ಕಾರ್ಯ ನಡೆಸಲಾಗುತ್ತದೆ. ದೋಣಿಗಳು ಸಂಚರಿಸಲು ಅಡ್ಡಿಯಾಗಿರುವ ಮರಳು ದಿಬ್ಬಗಳನ್ನು ಗುರುತಿಸಲಾಗಿದ್ದು ಈ ವರದಿಯಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ
ಪ್ರಮೋದ್‌ ಮಧ್ವರಾಜ್‌, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ

ಉದಯ ಆಚಾರ್‌ ಸಾಸ್ತಾನ

ಟಾಪ್ ನ್ಯೂಸ್

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.