ಸಂಕಲಕರಿಯ: ಹೀಗೊಂದು ನಾಟಿ ಸ್ಪೆಷಲಿಸ್ಟ್‌ ಮಹಿಳಾ ತಂಡ !


Team Udayavani, Jul 18, 2017, 2:50 AM IST

Naaati-Specialist-17-7.jpg

ಬೆಳ್ಮಣ್‌: ಕೂಲಿ ಕಾರ್ಮಿಕರ ಕೊರತೆಯಿಂದ ಕೃಷಿಕ ಕಂಗೆಟ್ಟು ನಮ್ಮ ರೈತರು ಎಕರೆಗಟ್ಟಲೆ ಜಮೀನುಗಳನ್ನು  ಹಡೀಲು ಬಿಟ್ಟಿರುವಾಗ ಮುಂಡ್ಕೂರು ಸಂಕಲಕರಿಯದ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕ ಮುಂಡ್ಕೂರು ದೊಡ್ಡಮನೆ ಭಾಸ್ಕರ ಶೆಟ್ಟಿಯವರ ಜಮೀನಿನಲ್ಲಿ ದಾಮಸ್ಕಟ್ಟೆ ಶಾಂತಿಪಲ್ಕೆಯ ಮಹಿಳೆಯರ ತಂಡವೊಂದು ಕಡಿಮೆ ಅವಧಿಯಲ್ಲಿ, ಕಡಿಮೆ ಖರ್ಚಿನಲ್ಲಿ ನೇಜಿ ತೆಗೆದು ನಾಟಿ ಮಾಡಿ ಭಾರೀ ಸುದ್ದಿ ಮಾಡಿದೆ.

ತಂಡಕ್ಕೆ ಸಮ್ಮಾನ
ತನ್ನ ಈ ವರ್ಷದ ಸಾಗುವಳಿಯನ್ನು ಹೆಚ್ಚೇನೂ ಚಿಂತೆಯಿಲ್ಲದೆ ಪೂರೈಸಿದ ಭಾಸ್ಕರ ಶೆಟ್ಟಿ ಈ ತಂಡವನ್ನು ಮನೆಯಂಗಳದಲ್ಲಿಯೇ ಸಮ್ಮಾನಿಸಿದ್ದಾರೆ. ತಂಡದ ಮುಖ್ಯಸ್ಥೆ ಪದ್ಮಾವತಿ ಈ ಸಮ್ಮಾನ ಸ್ವೀಕರಿಸಿದರು. ಊಟ ತಿಂಡಿ ಕೊಟ್ಟು 300 ರೂಪಾಯಿಯ ದಿನಗೂಲಿಯಲ್ಲಿ  ಬೆಳಗ್ಗೆ 8ರಿಂದ ಸಂಜೆ 6 ಗಂಟೆಯವರೆಗೆ ದುಡಿಯುವ ಮಹಿಳೆಯರ ಈ ತಂಡ ಈಗಾಗಲೇ ಸಂಕಲಕರಿಯ, ಏಳಿಂಜೆ, ಐಕಳ ಮತ್ತಿನ್ನಿತರ ಪರಿಸರದಲ್ಲಿ ಬಹಳಷ್ಟು ಹೆಸರು ಮಾಡಿದೆ. ತಲಾ 15 ಮಂದಿಯ ಎರಡು ತಂಡಗಳಿದ್ದು ಕರೆದಲ್ಲಿಗೆ ತತ್‌ಕ್ಷಣ ಈ ತಂಡಗಳು ಸ್ಪಂದಿಸುತ್ತದೆ.

ಕೃಷಿ ಬದುಕಿಗೆ ಪೂರಕ
ಕೃಷಿ ಚಟುವಟಿಕೆಗಳಲ್ಲಿ ಬಹಳಷ್ಟು ಆಸಕ್ತಿ ಹೊಂದಿರುವ ಈ ಮಹಿಳೆಯರ ತಂಡ ಹಳ್ಳಿಯ ಕೃಷಿಕರಿಗೆ ಹೊಸ ಹುಮ್ಮಸ್ಸು ತಂದಿದೆ. ಕೂಲಿ ಕಾರ್ಮಿಕರ ಕೊರತೆಯಿಂದ ಕಂಗೆಟ್ಟು ಯಂತ್ರೀಕೃತ ಕೃಷಿ ಉಪಕರಣ ಬಳಕೆಯ ಜತೆ ತೋಟಗಾರಿಕೆ ಮತ್ತಿನ್ನಿತರ‌ ಕೃಷಿಗಳತ್ತ ವಾಲುತ್ತಿರುವಾಗ ಪದ್ಮಾವತಿಯವರ ತಂಡ‌ ಕೃಷಿ ಬದುಕಿಗೆ ಪೂರಕವೆನಿಸುವ ಕೆಲಸ ಮಾಡಿದೆ.

ಈ ಹಿಂದೆ 15 ದಿನಗಳಲ್ಲಿಯೂ ಮುಗಿಯದ ನಾಟಿ ಕಾರ್ಯ ಈ ವರ್ಷ ಪದ್ಮಾವತಿಯವರ ತಂಡದ ನೆರವಿನಿಂದ 5 ದಿನಗಳಲ್ಲೇ ಮುಗಿದಿದೆ. ನಮ್ಮಂತಹ ಕೃಷಿಕರ ಭವಿಷ್ಯ ಇಂತಹ ಮಹಿಳೆಯರ ಕೈಯಲ್ಲಿದೆ.
– ಮುಂಡ್ಕೂರು ದೊಡ್ಡಮನೆ ಭಾಸ್ಕರ ಶೆಟ್ಟಿ, ಕಾರ್ಕಳ ತಾ| ಉತ್ತಮ ಕೃಷಿಕ ಪ್ರಶಸ್ತಿ ಪುರಸ್ಕೃತರು 

ಪ್ರಾಮಾಣಿಕವಾದ ದುಡಿಮೆ ಮಾಡುತ್ತಿದ್ದೇವೆ, ಕೃಷಿಕರ ಬವಣೆಗಳನ್ನು ಚೆನ್ನಾಗಿ ಅರಿತಿದ್ದೇವೆ. ಎರಡೆರರಡು ತಂಡಗಳ ಮೂಲಕ ಕರೆದಲ್ಲಿಗೆ ಹೋಗಿ ನಾಟಿ ಮಾಡುತ್ತೇವೆ.
– ಪದ್ಮಾವತಿ ಶಾಂತಿಪಲ್ಕೆ, ತಂಡದ ಮುಖ್ಯಸ್ಥೆ

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.