ದಿಲ್ಲಿ: ಪೇಜಾವರ ಮಠದ ಸಂಶೋಧನ ಭವನ ಉದ್ಘಾಟನೆ
Team Udayavani, Oct 31, 2018, 10:35 AM IST
ಉಡುಪಿ: ಪೇಜಾವರ ಶ್ರೀಗಳ ನೇತೃತ್ವದ ರಾಮವಿಟuಲ ಶಿಕ್ಷಣ ಸಮಿತಿಯ ಹೊಸದಿಲ್ಲಿಯಲ್ಲಿರುವ ವೇದವೇದಾಂತ ಅಧ್ಯಯನ ಮತ್ತು ಸಂಶೋಧನ ಪ್ರತಿಷ್ಠಾನ ಭವನದ ಉದ್ಘಾಟನೆಯನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮಂಗಳವಾರ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಸಂಸ್ಕೃತದ ಮಹತ್ವ ಹಾಗೂ ಭಾರತೀಯ ಸಂಸ್ಕೃತಿಯ ಮಹತ್ವವನ್ನು ಬಣ್ಣಿಸಿ ಶ್ರೀಪಾದರ ಸಮಾಜಮುಖೀ ಸೇವೆಯನ್ನು ಶ್ಲಾ ಸಿದರು.
ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಮಾತನಾಡಿ, ಸಂಸ್ಕೃತದ ಭಾಷೆಯ ವ್ಯಾಪ್ತಿ ದೊಡ್ಡದು. ದೇಶ
ವಿದೇಶಗಳಲ್ಲಿ ಅದರ ವ್ಯಾಪ್ತಿ ವಿಸ್ತರಿಸಿದೆ ಎಂದರು. ಸಾಫ್ಟ್ವೇರ್ ನಿರ್ಮಾಣದಲ್ಲಿ ಸಂಸ್ಕೃತದ ಪಾತ್ರದ ಕುರಿತು ತಿಳಿಸಿದರು.
ಪೇಜಾವರ ಶ್ರೀಗಳು ಆಶೀರ್ವಚನ ನೀಡಿ, ಸಂಸ್ಕೃತ ಅಧ್ಯಯನದಿಂದ ಸಂಸ್ಕೃತಿಯ ಅಭ್ಯುದಯವಾಗುತ್ತದೆ ಎಂದರಲ್ಲದೆ ಜಗದ್ಗುರು ಮಧ್ವಾಚಾರ್ಯರ ಕರ್ಮ ಮತ್ತು ಭಕ್ತಿ ಸಿದ್ಧಾಂತದ ಪ್ರಸ್ತುತತೆಯನ್ನು ವಿವರಿಸಿದರು. ಈ ಸಂಸ್ಥೆಯ ಮೂಲಕ ಸಂಸ್ಕೃತ-ಯೋಗ -ತತ್ವಶಾಸ್ತ್ರಗಳ ವಿಶಿಷ್ಟ ಪರಿಚಯವನ್ನು ಹಿಂದಿ ಭಾಷೆಯ ಮೂಲಕ ಮಾಡುವ ಸಂಕಲ್ಪವನ್ನು ಪ್ರಕಟಿಸಿದರು.
ಸಹಾಯಕ ಸಚಿವ ವಿಜಯ್ ಗೋಯಲ್, ಡಿ.ಪಿ. ಅನಂತ, ವಿಷ್ಣುಮೂರ್ತಿ ಆಚಾರ್ಯ ಉಪಸ್ಥಿತರಿದ್ದರು. ಡಾ| ಬಿ.ಡಿ. ಪಾಟೀಲ್ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ