ಡಾ| ವೆಂಕಟರಾಯ ಪ್ರಭು ಮಾಹೆ ಸಹಕುಲಪತಿ


Team Udayavani, Dec 31, 2021, 12:34 AM IST

ಡಾ| ವೆಂಕಟರಾಯ ಪ್ರಭು ಮಾಹೆ ಸಹಕುಲಪತಿ

ಉಡುಪಿ: ಮಂಗಳೂರು ಕಸ್ತೂರ್ಬಾ ಮೆಡಿಕಲ್‌ ಕಾಲೇಜಿನ ಡೀನ್‌ ಡಾ| ವೆಂಕಟರಾಯ ಎಂ. ಪ್ರಭು ಅವರನ್ನು ಮಾಹೆ ಆರೋಗ್ಯ ವಿಜ್ಞಾನಗಳ ಸಹಕುಲಪತಿಗಳನ್ನಾಗಿ ಜ. 1ರಿಂದ ನೇಮಿಸಲಾಗಿದೆ ಎಂದು ಮಾಹೆ ಪ್ರಕಟಿಸಿದೆ.

ಮಂಗಳೂರಿನಲ್ಲಿ ಜನಿಸಿದ ಡಾ| ಪ್ರಭು ಅವರು ಕೆಎಂಸಿ ಮಣಿಪಾಲ/ಮಂಗಳೂರಿನ 1976ರ  ಎಂಬಿಬಿಎಸ್‌ ಬ್ಯಾಚ್‌ನ ಹಳೆ ವಿದ್ಯಾರ್ಥಿಯಾಗಿದ್ದು, ಪದವಿ ಮತ್ತು ಸ್ನಾತಕೋತ್ತರ (ಎಂಡಿ ಜನರಲ್‌ ಮೆಡಿಸಿನ್‌) ಎರಡರಲ್ಲೂ ವಿಶಿಷ್ಟ ವೃತ್ತಿಜೀವನವನ್ನು ಹೊಂದಿದವರು. 1985ರಿಂದ ಮಣಿಪಾಲ ಸಂಸ್ಥೆಯೊಂದಿಗೆ ನಂಟನ್ನು ಹೊಂದಿರುವ ಇವರು ಮಂಗಳೂರು ಕೆಎಂಸಿ ವೈದ್ಯಕೀಯ ವಿಭಾಗದ ವಿವಿಧ ಬೆಳವಣಿಗೆಯಲ್ಲಿ ಜತೆಯಾದವರು. ಪ್ರಾಧ್ಯಾಪನ ವೃತ್ತಿಯಿಂದ ಪ್ರಾರಂಭಿಸಿ ಪ್ರಾಧ್ಯಾಪಕ ಹುದ್ದೆವರೆಗೆ ಮುಂದುವರಿದು 2001ರಿಂದ ಒಂದು ದಶಕದವರೆಗೆ ಇಲ್ಲಿನ ಅಸೋಸಿಯೇಟ್‌ ಡೀನ್‌ ಆಗಿ ಮತ್ತು  2011ರಿಂದ ಇನ್ನೊಂದು ದಶಕದವರೆಗೆ ಡೀನ್‌ ಆಗಿ ಸೇವೆ ಸಲ್ಲಿಸಿದ್ದಾರೆ.

ಮಂಗಳೂರಿನ ಕೆಎಂಸಿ ಡೀನ್‌ ಹುದ್ದೆಯನ್ನು ಅಲಂ ಕರಿಸಿದ ಮೊದಲ ಕೆಎಂಸಿ ಹಳೆ ವಿದ್ಯಾರ್ಥಿ ಎಂಬ ವಿಶಿಷ್ಟ ಹೆಗ್ಗಳಿಕೆ ಇವರದ್ದು ಮತ್ತು ಅಸೋಸಿಯೇಟ್‌ ಡೀನ್‌ ಮತ್ತು ಡೀನ್‌ ಆಗಿ ಕಾಲೇಜಿನಲ್ಲಿ ದೀರ್ಘ‌ಕಾಲ ಸೇವೆ ಸಲ್ಲಿಸಿದ ಆಡಳಿತಗಾರ ಎಂಬ ಹೆಗ್ಗಳಿಕೆಗೆ ಇವರು ಪಾತ್ರರು.

ಡೀನ್‌ ಆಗಿ ಅಧಿಕಾರ ವಹಿಸಿ ಕೊಂಡ ತರುವಾಯ ಶ್ರೇಯಾಂಕ ರಹಿತವಾಗಿದ್ದ ಕೆಎಂಸಿ ಮಂಗಳೂರು 2018ರಿಂದ ಇಲ್ಲಿಯವರೆಗೆ ಸತತವಾಗಿ ನಾಲ್ಕು ವರ್ಷ ನೂರಾರು ವೈದ್ಯಕೀಯ ಕಾಲೇಜುಗಳು ಪ್ರತೀ ವರ್ಷವೂ ಆಶಿಸುವ ಎನ್‌ಐಆರ್‌ಎಫ್ ಶ್ರೇಯಾಂಕಗಳ ಘೋಷಿತ ಶ್ರೇಣಿಗಳಲ್ಲಿ ಅಗ್ರ 25ರೊಳಗೆ ಸ್ಥಾನ ಪಡೆದುಕೊಂಡಿರುವುದು ಅವರ ಗಮನಾರ್ಹ ಸಾಧನೆಯಾಗಿದೆ.

ಡಾ| ಪ್ರಭು ಅವರು 2003- 2004ರಲ್ಲಿ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಎರಡು ಬಾರಿ ಐಎಂಎ ದ.ಕ. ಶಾಖೆಯ ಅತ್ಯುತ್ತಮ ಕಾರ್ಯದರ್ಶಿ ಪ್ರಶಸ್ತಿ ಯನ್ನು 1990 ಮತ್ತು 1995ರಲ್ಲಿ ಪಡೆದು ಕೊಂಡಿದ್ದಾರೆ. ಅವರು 2000- 2001ರಲ್ಲಿ ಅಸೋಸಿಯೇಶನ್‌ ಫಿಸಿಶಿಯನ್ಸ್ ಆಫ್ ಇಂಡಿಯಾ, ದ.ಕ. ಚಾಪ್ಟರ್‌ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯಎಪಿಐ ಕಾನ್ಫರೆನ್ಸ್ 2013 ರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಜೀವಮಾನದ ಸಾಧನೆಗಾಗಿ ಗೌರವವನ್ನು ಪಡೆದಿದ್ದಾರೆ.

2010ರಿಂದ ಇಲ್ಲಿಯವರೆಗೆ ಐಎಎಂಆರ್‌ಎ (ಇಂಟರ್‌ನ್ಯಾಶನಲ್‌ ಅಸೋಸಿಯೇಶನ್‌ ಆಫ್ ಮೆಡಿಕಲ್‌ ರೆಗುಲೇಟರಿ ಅಥಾರಿಟೀಸ್‌) ಸದಸ್ಯರಾಗಿ ಫಿಲಡೆಲ್ಫಿಯಾ (2010), ಒಟ್ಟಾವಾ (2012), ಲಂಡನ್‌ (2014)ನಲ್ಲಿ ನಡೆದ ಅಂತಾರಾಷ್ಟ್ರೀಯ ದ್ವೈವಾರ್ಷಿಕ ಸಮ್ಮೇಳನಗಳಲ್ಲಿ ಮಾಹೆಯನ್ನು ಪ್ರತಿನಿಧಿಸಿದ್ದಾರೆ.

ಟಾಪ್ ನ್ಯೂಸ್

Revanna 2

Bail; ಎಚ್.ಡಿ.ರೇವಣ್ಣ ಅವರಿಗೆ ಷರತ್ತು ಬದ್ದ ಜಾಮೀನು ಮಂಜೂರು

1-wewqeqe

Rahul Gandhi ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಲಿಲ್ಲ: ಶಾ ವಾಗ್ದಾಳಿ

Gangavathi ಖಾಸಗಿ ಶಾಲೆಗಳಿಂದ ಪ್ರವೇಶ ನೆಪದಲ್ಲಿ ಲಕ್ಷಾಂತರ ರೂ.ವಸೂಲಿ ಖಂಡಿಸಿ ಪ್ರತಿಭಟನೆ

Gangavathi ಖಾಸಗಿ ಶಾಲೆಗಳಿಂದ ಪ್ರವೇಶ ನೆಪದಲ್ಲಿ ಲಕ್ಷಾಂತರ ರೂ.ವಸೂಲಿ ಖಂಡಿಸಿ ಪ್ರತಿಭಟನೆ

siddanna

Eknath Shinde ಭ್ರಮೆಯಲ್ಲಿದ್ದಾರೆ, ನಮ್ಮ ಶಾಸಕರು ಮಾರಾಟವಾಗಲು ಸಿದ್ದರಿಲ್ಲ: ಸಿದ್ದರಾಮಯ್ಯ

Kharge (2)

Modi ಗೆದ್ದರೆ ಭವಿಷ್ಯದಲ್ಲಿ ಚುನಾವಣೆಗಳೇ ಇರುವುದಿಲ್ಲ: ಖರ್ಗೆ ವಾಗ್ದಾಳಿ

ಟೀಂ ಇಂಡಿಯಾದಲ್ಲೂ ರೋಹಿತ್ ಕೆರಿಯರ್ ಮುಗಿಸಿದ್ರಾ ಹಾರ್ದಿಕ್ ಪಾಂಡ್ಯ? ಏನಿದು ವರದಿ

ಟೀಂ ಇಂಡಿಯಾದಲ್ಲೂ ರೋಹಿತ್ ಕೆರಿಯರ್ ಮುಗಿಸಿದ್ರಾ ಹಾರ್ದಿಕ್ ಪಾಂಡ್ಯ? ಏನಿದು ವರದಿ

cbsc

CBSE Results:10ನೇ ತರಗತಿಯಲ್ಲಿ 93%,12 ರಲ್ಲಿ ಶೇ 87.98 ವಿದ್ಯಾರ್ಥಿಗಳು ಉತ್ತೀರ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MLC Election; ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಪಕ್ಷೇತರ ಸ್ಪರ್ಧೆಗೆ ರಘುಪತಿ ಭಟ್ ನಿರ್ಧಾರ

MLC Election; ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಪಕ್ಷೇತರ ಸ್ಪರ್ಧೆಗೆ ರಘುಪತಿ ಭಟ್ ನಿರ್ಧಾರ

Violinist Ganga shashidharan event in Udupi

Ganga Shashidharan: ಉಡುಪಿಯಲ್ಲಿ ಖ್ಯಾತ ವಯೊಲಿನ್ ವಾದಕಿ ಗಂಗಾ ಶಶಿಧರನ್​

Coconut Water ಹೆಚ್ಚಿದ ಬಿಸಿಲ ಬೇಗೆ: ಎಳನೀರಿಗೆ 60 ರೂ.!

Coconut Water ಹೆಚ್ಚಿದ ಬಿಸಿಲ ಬೇಗೆ: ಎಳನೀರಿಗೆ 60 ರೂ.!

ಈ ದೇವಸ್ಥಾನದಲ್ಲಿ ನಡೆಯುತ್ತದೆ ನೂರಾರು ಪ್ರೇತ ಮದುವೆ!

ಈ ದೇವಸ್ಥಾನದಲ್ಲಿ ನಡೆಯುತ್ತದೆ ನೂರಾರು ಪ್ರೇತ ಮದುವೆ!

Road Mishap; ಬೈಕ್‌ ಅಪಘಾತ ಸವಾರ ಸಾವು

Road Mishap; ಬೈಕ್‌ ಅಪಘಾತ ಸವಾರ ಸಾವು

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Revanna 2

Bail; ಎಚ್.ಡಿ.ರೇವಣ್ಣ ಅವರಿಗೆ ಷರತ್ತು ಬದ್ದ ಜಾಮೀನು ಮಂಜೂರು

qpl

Queen Premier League; ಸಿನಿಮಾ ಸೀರಿಯಲ್ ನಟಿಯರ ಕ್ರಿಕೆಟ್ ಪಂದ್ಯಾವಳಿ

1-wewqeqe

Rahul Gandhi ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಲಿಲ್ಲ: ಶಾ ವಾಗ್ದಾಳಿ

Gangavathi ಖಾಸಗಿ ಶಾಲೆಗಳಿಂದ ಪ್ರವೇಶ ನೆಪದಲ್ಲಿ ಲಕ್ಷಾಂತರ ರೂ.ವಸೂಲಿ ಖಂಡಿಸಿ ಪ್ರತಿಭಟನೆ

Gangavathi ಖಾಸಗಿ ಶಾಲೆಗಳಿಂದ ಪ್ರವೇಶ ನೆಪದಲ್ಲಿ ಲಕ್ಷಾಂತರ ರೂ.ವಸೂಲಿ ಖಂಡಿಸಿ ಪ್ರತಿಭಟನೆ

Bidar: ಕಳ್ಳತನವಾಗಿದ್ದ 52 ಮೊಬೈಲ್ ಗಳನ್ನು ಪತ್ತೆ ಮಾಡಿದ ಜಿಲ್ಲಾ ಪೊಲೀಸ್

Bidar: ಕಳ್ಳತನವಾಗಿದ್ದ 52 ಮೊಬೈಲ್ ಗಳನ್ನು ಪತ್ತೆ ಮಾಡಿದ ಜಿಲ್ಲಾ ಪೊಲೀಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.