ಇನ್ನೂ ಕಾರ್ಯಾರಂಭಿಸದ ವಾಯುಗುಣಮಟ್ಟ ಮಾಪನ ಕೇಂದ್ರ


Team Udayavani, Apr 10, 2018, 6:15 AM IST

040418use4.jpg

ಉಡುಪಿ: ಪರಿಸರದಲ್ಲಿ ಸೇರಿರಬಹುದಾದ ಮಲಿನಕಾರಕಗಳ ಪ್ರಮಾಣ ಮಾಪನ ಮಾಡುವ ಉದ್ದೇಶದಿಂದ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗ ಸೂಚಿಯಂತೆ ಉಡುಪಿಯಲ್ಲಿ ಆರಂಭಿಸಲಾಗಿರುವ ವಾಯು ಗುಣಮಟ್ಟ ಮಾಪನ ಕೇಂದ್ರ ನಗರದ ಬೋರ್ಡ್‌ ಹೈಸ್ಕೂಲ್‌ ಆವರಣದಲ್ಲಿ ಉದ್ಘಾಟನೆಗೊಂಡು ತಿಂಗಳಾಗುತ್ತಾ ಬರುತ್ತಿದ್ದರೂ ಕಾರ್ಯ ಆರಂಭಿಸಿಲ್ಲ.
 
ರಾಜ್ಯದ ಎಲ್ಲ  ಜಿಲ್ಲೆಗಳಲ್ಲಿಯೂ ಇಂತಹ ಕೇಂದ್ರ ಸ್ಥಾಪಿಸಲು ಮಂಡಳಿ ನಿರ್ಧರಿಸಿದ್ದು ಅದರಂತೆ  ಉಡುಪಿಯಲ್ಲಿಯೂ ಸ್ಥಾಪಿಸ ಲಾಗಿದೆ. ಕೇಂದ್ರ ಸ್ಥಾಪನೆಗೆ 1.36 ಕೋ.ರೂ. ವೆಚ್ಚ ಮಾಡಿದ್ದು 5 ವರ್ಷಗಳ ಕಾಲ ನಿರ್ವಹಣೆಗೆ ಒಂದು ಕೋ.ರೂ. ವೆಚ್ಚವಾಗುತ್ತದೆ.

ಈ ಕೇಂದ್ರ ಕಾರ್ಯಾರಂಭ ಮಾಡಿದ ಅನಂತರ  24 ಗಂಟೆಗಳ ಕಾಲ ನಿರಂತರ  ಕಾರ್ಯನಿರ್ವಹಿಸಲಿದೆ. ವಾರಕ್ಕೆ 2 ಬಾರಿ ಮಾಪನ ಮಾಡಲಾಗುತ್ತದೆ. ಯಾವುದೇ ಸಮಯದಲ್ಲಿ ಕೂಡ ಮಾಹಿತಿ ಪಡೆದುಕೊಳ್ಳಬಹುದು. ಗಾಳಿಯ ವೇಗ,ದಿಕ್ಕು, ಒತ್ತಡ, ವಾತಾವರಣದ ತೇವಾಂಶ, ಉಷ್ಣತೆ ಕೂಡ ಇದರಲ್ಲಿ ಮಾಪನ ಮಾಡಲು ಸಾಧ್ಯ. ಸಾರ್ವಜನಿಕರು, ವಿದ್ಯಾರ್ಥಿಗಳು ಕೂಡ ಇದರಿಂದ ಮಾಹಿತಿ ಪಡೆದುಕೊಳ್ಳಬಹುದಾಗಿದೆ. 

ಪರಿಸರ ಸಹ್ಯ  ಕೊಡುಗೆ ಈ ಕೇಂದ್ರದಿಂದ ದೊರೆಯುವ ದತ್ತಾಂಶಗಳಿಂದ ನಗರದ ಪರಿಸರ ಸಹ್ಯ ಅಭಿವೃದ್ಧಿಗೂ ಅನುಕೂಲವಾಗಲಿದೆ. ಉದಾಹರಣೆಗೆ ವಾಹನಗಳ ದಟ್ಟಣೆ ಅತಿಯಾಗಿರುವ ರಸ್ತೆಗಳಲ್ಲಿ ವಾಹನಗಳು ನಿಧಾನವಾಗಿ ಚಲಿಸಬೇಕಾಗುತ್ತದೆ. ಆಗ ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗುತ್ತದೆ. ಈ ರೀತಿಯ ಮಾಹಿತಿಯನ್ನು ಖಚಿತಪಡಿಸಿಕೊಳ್ಳಲು ಮಾಪನ ಕೇಂದ್ರ ನೆರವಾಗುತ್ತದೆ. ಮಾಲಿನ್ಯ ಕಡಿಮೆ ಮಾಡಲು ಅಗಲವಾದ ರಸ್ತೆ ಅಥವಾ ಫ್ಲೈ ಒವರ್‌ ನಿರ್ಮಿಸುವ ಯೋಜನೆ ಕೈಗೆತ್ತಿಕೊಳ್ಳಲು ಮಾಪಕದ ವರದಿಯೂ ಪೂರಕವಾಗಿರುತ್ತದೆ. ಅದೇ ರೀತಿ ನಿರ್ದಿಷ್ಟ ವ್ಯಾಪ್ತಿಯೊಳಗೆ ವಾತಾವರಣವನ್ನು ಕಲುಷಿತಗೊಳಿಸುವ ಚಟುವಟಿಕೆಗಳು ನಡೆಯುವುದು ಗಮನಕ್ಕೆ ಬಂದರೆ ಅದನ್ನು ತಡೆಯುವುದಕ್ಕೂ ಇಂತಹ ಮಾಪಕಗಳ ವರದಿಗಳು ಪೂರಕವಾಗಿರುತ್ತವೆ. ಮಾಲಿನ್ಯದ ಪ್ರಮಾಣವನ್ನು ಮಾಪಕ ಕೇಂದ್ರ ತೋರಿಸಿಕೊಡುತ್ತದೆ. ಆದರೆ ಮಾಲಿನ್ಯ ನಿಯಂತ್ರಣವನ್ನು ಸಂಬಂಧಪಟ್ಟ ಇಲಾಖೆಗಳು, ಇತರ ಆಡಳಿತ ಸಂಸ್ಥೆಗಳು ಮಾಡಬೇಕಾಗುತ್ತದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.
 
ಕಾಲ ಕೂಡಿ ಬಂದಿಲ್ಲ
ಮಾಪನ ಕೇಂದ್ರ ಚುನಾವಣೆ ನೀತಿ ಸಂಹಿತೆಗಿಂತ ಮೊದಲೇ ಉದ್ಘಾಟನೆ ಗೊಳ್ಳಬೇಕೆಂಬ ಉದ್ದೇಶದಿಂದ ಅಧಿಕಾರಿ ಗಳು ಅತ್ಯುತ್ಸಾಹ ತೋರಿಸಿದ್ದರು. ಅದರ ಪರಿಣಾಮವಾಗಿ ನಿರ್ಮಾಣ ಕಾಮಗಾರಿಯೂ ವೇಗವಾಗಿ ಸಾಗಿತ್ತು. ಅನಂತರ ಡಿಸ್‌ಪ್ಲೇ ಸಾಧನವನ್ನು ಕೂಡ ಅಳವಡಿಸಿ ಈಗ ಅದರ ಸುತ್ತ ಆವರಣ ಬೇಲಿ ರಚನೆಯ ಕೆಲಸವೂ ನಡೆಯುತ್ತಿದೆ. ಆದರೆ ಕೇಂದ್ರ ಕಾರ್ಯಾರಂಭಕ್ಕೆ ಕಾಲ ಇನ್ನೂ ಕೂಡಿ ಬಂದಿಲ್ಲ. 

“ಒಂದು ತಾಂತ್ರಿಕ ಕಾರಣಕ್ಕಾಗಿ ವಿಳಂಬವಾಗಿದೆ’ ಎಂಬುದು ಅಧಿಕಾರಿಗಳ ಪ್ರತಿಕ್ರಿಯೆ. ಕೋಟಿ ಖರ್ಚು ಮಾಡಿ ನಿರ್ಮಾಣಗೊಂಡ ಮಾಪನ ಕೇಂದ್ರ ನಿಷ್ಪ್ರಯೋಜಕವಾಗಿ ಉಳಿಯದಿರಲಿ. 

ದತ್ತಾಂಶ ಸಂಗ್ರಹ 
ಈ ಕೇಂದ್ರವು ಸುತ್ತಲಿನ ಸುಮಾರು 1 ಕಿ.ಮೀ. ವ್ಯಾಪ್ತಿಯಲ್ಲಿ ಗಾಳಿ/ಪರಿಸರದಲ್ಲಿರಬಹುದಾದ ಮಲಿನಕಾರಕಗಳಾದ ಗಂಧಕದ ಡೈ ಆಕ್ಸೆ„ಡ್‌, ಸಾರಜನಕದ ಡೈ ಆಕ್ಸೆ„ಡ್‌, ಧೂಳಿನ ಕಣಗಳು, ಇಂಗಾಲದ ಮೊನಾಕ್ಸೆ„ಡ್‌, ಓಝೋನ್‌(ಒ3), ಅಮೋನಿಯಾ,  ಬೆನ್‌ಜಿàನ್‌ ಸೇರಿದಂತೆ 8 ಅಂಶಗಳನ್ನು ಮಾಪನ ಮಾಡಿ ದತ್ತಂಶಗಳನ್ನು ಸಂಗ್ರಹಿಸಿ ಅದನ್ನು ಬೆಂಗಳೂರು ಮತ್ತು ಹೊಸದಿಲ್ಲಿಯ ತನ್ನ ಕೇಂದ್ರಗಳಿಗೆ ಕಳುಹಿಸಿಕೊಡುತ್ತದೆ.

ಕೇಬಲ್‌ನಿಂದಾಗಿ ಬಾಕಿ !
ಕೇಂದ್ರದ ಕೆಲಸಗಳು ಪೂರ್ಣಗೊಂಡಿವೆ. ಆದರೆ ಮಾಹಿತಿಯನ್ನು ಪ್ರದರ್ಶಿ ಸುವುದಕ್ಕಾಗಿ ಫೊಟೋ ಕ್ಯೂಬ್‌ ಕೇಬಲ್‌ವೊಂದರ ಅವಶ್ಯಕತೆ ಇದೆ. ಇದನ್ನು ಮುಂಬೈನಿಂದ ತರಬೇಕಾಗಿದೆ ಎಂದು ಕೇಂದ್ರದ ನಿರ್ವಹಣೆ ಹೊತ್ತಿರುವ ಚೆನ್ನೈ ಮೂಲದ ಸಂಸ್ಥೆಯವರು ತಿಳಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಮಾಪನ ಕೇಂದ್ರ ಕಾರ್ಯಾರಂಭ ಮಾಡುವ ವಿಶ್ವಾಸವಿದೆ.
– ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ, ಉಡುಪಿ

– ಸಂತೋಷ್‌ ಬೊಳ್ಳೆಟ್ಟು 

ಟಾಪ್ ನ್ಯೂಸ್

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.