ಹುಣ್ಸೆಕಟ್ಟೆ : ಅಪಾಯಕಾರಿ ಬಾವಿಗೆ ದಂಡೆ ನಿರ್ಮಾಣ
Team Udayavani, Jun 4, 2019, 6:00 AM IST
ಕುಂದಾಪುರ: ಪುರಸಭೆ ವ್ಯಾಪ್ತಿಯ ಹುಣ್ಸೆಕಟ್ಟೆಯಲ್ಲಿ ಕುಂದಾಪುರ – ಶಿವಮೊಗ್ಗ ರಾಜ್ಯ ಹೆದ್ದಾರಿಯ ಬಲ ಬದಿಯಲ್ಲಿ ರಸ್ತೆಗೆ ತಾಗಿಕೊಂಡೇ ಇರುವ ಅಪಾಯಕಾರಿ ಬಾವಿಯ ಕುಸಿದ ದಂಡೆಯನ್ನು ದುರಸ್ತಿ ಮಾಡಲಾಗಿದೆ.
ರಾಜ್ಯ ಹೆದ್ದಾರಿಗೆ ತಾಗೀಕೊಂಡೆ ಇರುವ ಈ ಅಪಾಯಕಾರಿ ಬಾವಿಯ ದಂಡೆಗೆ ಕಾರೊಂದು ಢಿಕ್ಕಿಯಾಗಿ ಅದು ಕುಸಿದಿತ್ತು. ಈ ಬಗ್ಗೆ “ಉದಯವಾಣಿ’ಯು ಮೇ 27 ರಂದು ಅಪಾಯ ಆಹ್ವಾನಿಸುತ್ತಿರುವ ಬಾವಿ ಎನ್ನುವ ವರದಿ ಮೂಲಕ ಗಮನಸೆಳೆದಿತ್ತು. ಇದಕ್ಕೆ ಸ್ಪಂದಿಸಿದ ಸ್ಥಳೀಯ ಹುಂಚಾರುಬೆಟ್ಟು ವಾರ್ಡಿನ ಪುರಸಭೆ ಸದಸ್ಯ ಶೇಖರ್ ಪೂಜಾರಿಯವರು, ಅಲ್ಲೇ ಪಕ್ಕದಲ್ಲಿ ಈ ಬಾವಿಯ ನೀರಿನ ಪ್ರಯೋಜನ ಪಡೆದುಕೊಂಡು, ರಿಂಗ್ ಕೆಲಸ ಮಾಡುತ್ತಿರುವ ಅನಿಲ್ ಎಂಬುವರಿಗೆ ತಿಳಿಸಿ, ಬಾವಿಗೆ ದಂಡೆ ನಿರ್ಮಿಸಲು ಶ್ರಮಿಸಿದ್ದಾರೆ.
ಬಾವಿಯ ದಂಡೆಯ ಒಂದು ಬದಿ ಕುಸಿದಿದ್ದುರಿಂದ ವಾಹನ ಸವಾರರಿಗೆ ಮತ್ತಷ್ಟು ಅಪಾಯಕಾರಿಯಾಗುವ ಸಂಭವವಿತ್ತು. ಸಕಾಲಿಕವಾಗಿ ವರದಿ ಪ್ರಕಟಿಸಿ, ಸಂಬಂಧಪಟ್ಟವರ ಗಮನಸೆಳೆಯುವ ಮೂಲಕ ಬಾವಿಗೆ ದಂಡೆ ನಿರ್ಮಾಣವಾಗಿದೆ. ಇದರಿಂದ ಮತ್ತೂಂದು ಅವಘಡ ಸಂಭವಿಸುವ ಮುನ್ನ ಎಚ್ಚೆತ್ತುಕೊಂಡಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ