ಹತಾಶೆಯಿಂದ ಪಕ್ಷೇತರಳಾಗಿ ಸ್ಪರ್ಧಿಸಿದೆ; ಗುರಿ ಸಾಧಿಸಿದ ತೃಪ್ತಿ ಇದೆ
Team Udayavani, Apr 19, 2018, 6:00 AM IST
ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದು 23ರ ಹರೆಯದಲ್ಲೇ ಜನಪ್ರತಿನಿಧಿಯಾಗಿ ಆಯ್ಕೆಯಾಗಿ, 2004ರಲ್ಲಿ ಪಕ್ಷ ಮತ್ತು ಪಕ್ಷದ ಶಾಸಕರ ನಡೆಯಿಂದ ಬೇಸತ್ತು ಬಂಡಾಯವೆದ್ದು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ತಾನೂ ಸೋಲುಂಡು; ಕಾಂಗ್ರೆಸ್ಸನ್ನೂ ಸೋಲಿಸಿದವರು ಗ್ಲಾಡಿಸ್ ಡಿ’ ಅಲ್ಮೇಡಾ. ಮಾತಿನ ಮತದಲ್ಲಿ ಗ್ಲಾಡಿಸ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ…
ರಾಜಕೀಯಕ್ಕೆ ಬಂದ ಬಗೆ …?
ಎಳವೆಯಲ್ಲೇ ನನಗೆ ರಾಜಕೀಯದತ್ತ ಒಲವಿತ್ತು. 23ನೇ ವರ್ಷದಲ್ಲಿ ಮಂಡಲ ಪಂಚಾಯತ್ ಸದಸ್ಯೆಯಾಗಿ ಆಯ್ಕೆಯಾಗಿದ್ದು, ಬಳಿಕ ಗ್ರಾ.ಪಂ. ಸದಸ್ಯೆಯಾಗಿಯೂ ಕಾರ್ಯ ನಿರ್ವಹಿಸಿದ್ದೇನೆ. 2000ನೇ ಇಸವಿಯಲ್ಲಿ ಜಿ.ಪಂ. ಸದಸ್ಯೆ ಯಾಗಿ ಆಯ್ಕೆಯಾದೆ. 2004ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡೆ.ಶಾಸಕ ವಸಂತ ವಿ. ಸಾಲ್ಯಾನ್ ಅವರಿಗೆ ಮೊದಲ ಬಾರಿಗೆ ಸೋಲಿನ ರುಚಿಯುಣಿಸಿದ ಸಮಾಧಾನ ನನಗಿದೆ. ಬಳಿಕ 2005ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡೆ. ಅನಂತರ ಎಲ್ಲೂರು ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಸ್ಪರ್ಧಿಸಿ ಜಿ.ಪಂ. ಸದಸ್ಯೆಯಾಗಿ, ಜಿ.ಪಂ. ಅಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸಿದ್ದೇನೆ.
ಪಕ್ಷೇತರಳಾಗಿ ಸ್ಪರ್ಧಿಸಲು ಕಾರಣ ?
ಕಾಪು ಶಾಸಕರ ಮೇಲಿನ ಬೇಸರ, ಕೋಪ ಮತ್ತು ಹತಾಶೆಯಿಂದಾಗಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸು ವಂತಾಯಿತು. ಗೆಲ್ಲುವ ಉದ್ದೇಶದೊಂದಿಗೆ ಚುನಾವಣೆಗೆ ಸ್ಪರ್ಧಿಸಿದ್ದಲ್ಲ. ನನ್ನ ಗುರಿಯಿದ್ದದ್ದು ಸಾಲ್ಯಾನ್ರನ್ನು ಸೋಲಿಸುವುದಷ್ಟೇ ಆಗಿತ್ತು. ಗುರಿಸಾಧಿಸಿದ್ದೇನೆ. ಅಂದಿನ ರಾಜಕೀಯ ದ್ವೇಷ ಸಾಧನೆಯ ಮನಃಸ್ಥಿತಿ ಇಂದು ದೂರವಾಗಿದೆ. ನಾವೆಲ್ಲರೂ ಈಗ ಜತೆಗಿದ್ದೇವೆ.
ಅಂದಿನ ನಿಮ್ಮ ಮನಃಸ್ಥಿತಿ ಹೇಗಿತ್ತು ?
ಪಕ್ಷೇತರಳಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ ಬಳಿಕ ಹಲವು ರೀತಿಯ ಮಾನಸಿಕ ವೇದನೆಗಳನ್ನು ಎದುರಿಸ ಬೇಕಾಯಿತು. ಆ ಸಂದರ್ಭದಲ್ಲಿ ನನ್ನ ಕೈ ಹಿಡಿದಿದ್ದು ಬಿಜೆಪಿ. ಅವರು ಕರೆದು ಜಿ.ಪಂ. ಟಿಕೆಟ್ ಕೊಟ್ಟರು. ಗೆದ್ದ ಬಳಿಕ ಮೀಸಲಾತಿಯ ಕೃಪೆಯಿಂದಾಗಿ ಕಾಂಗ್ರೆಸ್ ಕೈಯಲ್ಲಿದ್ದ ಜಿ.ಪಂ. ಆಡಳಿತವನ್ನು ಬಿಜೆಪಿಗೆ ತಂದುಕೊಟ್ಟು ಪಕ್ಷದ ಋಣ ತೀರಿಸುವ ಕೆಲಸ ಮಾಡಿದ್ದೇನೆ.
ರಾಜಕೀಯ ಜೀವನ ತೃಪ್ತಿ ನೀಡಿದೆಯೇ?
ನಾನೆಂದೂ ಹಣ ಮತ್ತು ಜಾತಿ ಬಲದ ರಾಜಕೀಯ ಮಾಡಿಲ್ಲ. ರಾಜಕೀಯ ಇರುವುದು ನಾಯಕತ್ವಕ್ಕಾಗಿ. ಜನರ ಸೇವೆ ಮಾಡುವುದಕ್ಕಾಗಿ. ಅದೇ ಉದ್ದೇಶವನ್ನು ಇಟ್ಟುಕೊಂಡು ಜನಸೇವೆ ಮಾಡಿದ್ದೇನೆ. ಸುದೀರ್ಘ ಅವಧಿಯ ರಾಜಕೀಯ ಜೀವನದಲ್ಲಿ ಎರಡು ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡು ಮಹತ್ವದ ಹುದ್ದೆಗಳನ್ನು ಅನುಭವಿಸಿದ್ದರೂ ಎಲ್ಲೂ ಹಣ ಮತ್ತು ಜಾತಿ ಬಲದ ರಾಜಕೀಯ ಮಾಡಿಲ್ಲ. ರಾಜಕೀಯದಲ್ಲಿ ನಾನು ಸಂತೃಪ್ತಿಯನ್ನು ಹೊಂದಿದ್ದೇನೆ.ಕಾಂಗ್ರೆಸ್ ಪಕ್ಷದಲ್ಲಿರು ವಾಗ ಮಾನಸಿಕ ಹಿಂಸೆಯಾಗುತ್ತಿತ್ತು. ರಾಜಕೀಯ ತಂತ್ರಗಾರಿಕೆಗೆ ನಮ್ಮನ್ನು ಬಲಿಪಶುಗಳನ್ನಾಗಿಸುತ್ತಿದ್ದರು. ವ್ಯಕ್ತಿಗತವಾಗಿ ನೋವುಂಡಿದ್ದೇನೆ. ಬಿಜೆಪಿಯಲ್ಲೀಗ ಸಂತೃಪ್ತಳಾಗಿದ್ದೇನೆ.
– ರಾಕೇಶ್ ಕುಂಜೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ