ಅಸಹಾಯಕ ಗಣೇಶನಿಗೆ ಬೇಕಿದೆ ನೆರವಿನ ಹಸ್ತ
Team Udayavani, Jun 12, 2018, 6:10 AM IST
ಶಿರ್ವ: ಸುಮಾರು 12 ವರ್ಷಗಳ ಹಿಂದೆ ಉಚ್ಚಿಲದಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ವೇಳೆ ಮಹಡಿಯಿಂದ ಜಾರಿ ಬಿದ್ದು ಬೆನ್ನುಹುರಿಯ ಮೂಳೆ ಮುರಿತಕ್ಕೊಳಗಾಗಿ ಹಾಸಿಗೆ ಹಿಡಿದಿರುವ ಶಿರ್ವ ಭೂತಬೆಟ್ಟು ನಿವಾಸಿ ಬಡ ಕೂಲಿ ಕಾರ್ಮಿಕ ಕುಟುಂಬದ ಗಣೇಶ ಮೊಗೇರನಿಗೆ ಸಹೃದಯರ ಸಹಾಯ ಹಸ್ತ ಬೇಕಿದೆ.
2006ರಲ್ಲಿ ಮಹಡಿಯಿಂದ ಜಾರಿ ಬಿದ್ದ ಗಣೇಶನಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಮತ್ತು ಚೆನ್ನೈನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬೆನ್ನು ಹುರಿಯಲ್ಲಿ 12-13 ಕಡೆ ಡಿಸ್ಕ್ ಕ್ರಾಕ್ ಇದ್ದುದರಿಂದ ಅಪರೇಷನ್ ನಡೆಸಿ ಸ್ಟೀಲ್ ರಾಡ್ ಅಳವಡಿಸಲಾಗಿತ್ತು. ಆದರೆ ಪರಿಣಾಮ ಮಾತ್ರ ಶೂನ್ಯ.ಎದ್ದು ಕುಳಿತು ಕೊಳ್ಳಲಾಗದ ಗಣೇಶನ ಕಾಲುಗಳಲ್ಲಿ ಸ್ಪರ್ಶಜ್ಞಾನವಿಲ್ಲದೆ ಮಲಗಿದ್ದಲ್ಲಿಯೇ ಮಲ ಮೂತ್ರ ವಿಸರ್ಜನೆ ಮಾಡಬೇಕಿದೆ. ವೃದ್ಧಾಪ್ಯದಲ್ಲಿ ತಾಯಿಯ ಸೇವೆ ಮಾಡಬೇಕಿದ್ದ ಯುವಕ ತನ್ನ ನಿತ್ಯಕರ್ಮಕ್ಕಾಗಿ ಮಲಗಿದ್ದಲ್ಲಿಯೇ 72 ವರ್ಷದ ವೃದ್ಧ ತಾಯಿಯನ್ನು ಅವಲಂಬಿಸಬೇಕಿದೆ.
ಬಡ ಕೂಲಿ ಕುಟುಂಬ
ಶಿರ್ವ ಭೂತಬೆಟ್ಟು ಬಳಿಯ ನಿವಾಸಿ ದಿ| ಬೈಕ್ಲ ಮೊಗೇರ ಮತ್ತು ದುರ್ಗಿ ಮುಗೇತಿ ದಂಪತಿ ಪುತ್ರ ಗಣೇಶ. 5 ಸೆಂಟ್ಸ್ ಮನೆಯಲ್ಲಿ ವಾಸವಾಗಿರುವ ಬಡ ಕುಟುಂಬ ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದು. ಇದೀಗ ವೃದ್ದ ತಾಯಿ ಕೂಲಿ ಕೆಲಸ ಮಾಡಲಾಗದೆ ನೆರೆಕರೆಯಲ್ಲಿ ಮಲ್ಲಿಗೆ ಹೂ ಕಟ್ಟಿ ಜೀವನ ಸಾಗಿಸುತ್ತಿದ್ದಾರೆ.
ಬೇಕಿದೆ ನೆರವಿನ ಹಸ್ತ
ಬಡ ಕೂಲಿ ಕುಟುಂಬವಾಗಿರುವು ದರಿಂದ ಗಣೇಶನ ಚಿಕಿತ್ಸೆಗಾಗಿ ತಿಂಗಳಿಗೆ 5-6 ಸಾವಿರ ರೂ. ಖರ್ಚಾಗುತ್ತಿದ್ದು ಜೀವನ ನಿರ್ವಹಣೆ ದುಸ್ತರವಾಗಿದೆ.ಅಸಹಾಯಕ ಸ್ಥಿತಿಯಲ್ಲಿರುವ ಗಣೇಶನ ಜೀವನ ನಿರ್ವಹಣೆಗೆ ಸಹಾಯ ಮಾಡಲಿಚ್ಛಿಸುವವರು ಶಿರ್ವ ಸಿಂಡಿಕೇಟ್ ಬ್ಯಾಂಕಿನ ಖಾತೆ ನಂಬ್ರ. 01452230000659 ಜಮಾ ಮಾಡಬಹುದಾಗಿದೆ. IFSC code SYNB 0000145. ಗಣೇಶನ ಮೊಬೈಲ್ ಸಂಖ್ಯೆ:9945662307
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ