ಪದವಿ ಕಾಲೇಜುಗಳಲ್ಲಿ ಬಿಕಾಂ, ಬಿಸಿಎಗೆ ಬೇಡಿಕೆ

ಬಿಎಸ್ಸಿ ಮಧ್ಯಮ, ಬಿಎ ಗಂಡಾಂತರ

Team Udayavani, Jun 4, 2019, 6:00 AM IST

COLLAGE

ಅಂತರ್ಜಾಲ ಚಿತ್ರ.

ಉಡುಪಿ: ಪಿಯುಸಿ, ಸಿಇಟಿ ಪರೀಕ್ಷೆ ಫ‌ಲಿತಾಂಶ ಬಂದು ಪದವಿ ಕಾಲೇಜುಗಳಿಗೆ ಪ್ರವೇಶ ನಡೆಯುತ್ತಿದೆ. ಪ್ರಸ್ತುತ ಸನ್ನಿವೇಶದಲ್ಲಿ ಕಾಲೇಜುಗಳಲ್ಲಿ ಬಿಕಾಂ, ಬಿಬಿಎಂ, ಬಿಸಿಎ ಪದವಿಗಳಿಗೆ ಹೆಚ್ಚಿನ ಬೇಡಿಕೆ ಕುದುರಿದೆ. ಜೂ. 20ಕ್ಕೆ ಕಾಲೇಜುಗಳ ತರಗತಿಗಳು ಆರಂಭಗೊಳ್ಳುತ್ತವೆ. ಜೂ. 30ರ ವರೆಗೆ ಪ್ರವೇಶಾವಕಾಶವಿದೆ.


ಬಿಕಾಂ, ಬಿಬಿಎಂ, ಬಿಸಿಎಗಳಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶ ಸಿಕ್ಕಿದೆ. ಬಹುತೇಕ ಎಲ್ಲ ಕಾಲೇಜುಗಳಲ್ಲಿ ಬಿಕಾಂ ಕೋರ್ಸ್‌ ಹೌಸ್‌ಫ‌ುಲ್‌ ಆಗಿದೆ. ಇಲ್ಲಿ ಶೇ.80 ಅಂಕಕ್ಕಿಂತ ಹೆಚ್ಚಿಗೆ ಪಡೆದವರಿಗೆ ಮಾತ್ರ ಪ್ರವೇಶ ಸಿಕ್ಕಿದೆ. ಬಿಎಸ್ಸಿ ಪದವಿಗೆ ಬೇಡಿಕೆ ಅಷ್ಟಕ್ಕಷ್ಟೆ ಇದೆ. ಸಿಇಟಿಯಲ್ಲಿ ಹೆಚ್ಚು ಅಂಕ ಗಳಿಸಲಾಗದ ವಿದ್ಯಾರ್ಥಿಗಳು ಬಿಎಸ್ಸಿಗೆ ಸೇರ್ಪಡೆಯಾಗಿರುವುದರಿಂದ ಮತ್ತು ನೀಟ್‌ ಪರೀಕ್ಷಾ ಫ‌ಲಿತಾಂಶ ಇನ್ನಷ್ಟೇ ಬರಬೇಕಾಗಿರುವುದರಿಂದ ಬಿಎಸ್ಸಿ ಉಪನ್ಯಾಸಕರು ಸ್ವಲ್ಪ ನಿಟ್ಟುಸಿರು ಬಿಡುತ್ತಿದ್ದಾರೆ. ದ್ವಿತೀಯ ಪಿಯುಸಿ ಮರು ಪರೀಕ್ಷಾ ಫ‌ಲಿತಾಂಶವೂ ಬರ ಬೇಕಾಗಿರುವುದರಿಂದ ಉಪನ್ಯಾಸಕರಲ್ಲಿ ನಿರೀಕ್ಷೆಗಳಿವೆ.

ಬಿಎ ಪದವಿ ಇತ್ತೀಚಿನ ಟ್ರೆಂಡ್‌ನೆ ಅನುಭವಿಸುತ್ತಿದೆ. 1960-70ರ ದಶಕಗಳಲ್ಲಿ ಬಿಎ ಪದವಿಯಲ್ಲಿ ಇಂಗ್ಲಿಷ್‌, ಕನ್ನಡ ಮೇಜರ್‌ ವಿಷಯ ತೆಗೆದುಕೊಳ್ಳುವುದೆಂದರೆ ಘನತೆ ಎಂದು ಪರಿಗಣಿಸಲಾಗುತ್ತಿತ್ತು. ಆ ಕಾಲದ ಉಪನ್ಯಾಸಕರು ತಮ್ಮ ವಿದ್ವತ್ತಿನಿಂದಲೇ ಕಾಲೇಜಿನಲ್ಲಿ ಪ್ರಾಂಶುಪಾಲರಿಗೆ ತತ್ಸಮಾನವಾದ ಗೌರವ ಹೊಂದಿದ್ದರು. ಆಗ ಪ್ರಾಂಶುಪಾಲರಾಗಿ ನೇಮಕ ಗೊಳ್ಳುವವರಲ್ಲಿ ಹೆಚ್ಚಿನವರು ಇಂಗ್ಲಿಷ್‌ ಪ್ರಾಧ್ಯಾಪಕರಾಗಿರುತ್ತಿದ್ದರು. ಬಹುತೇಕ ಹೆಸರಾಂತ ಸಾಹಿತಿಗಳು ಕಾಲೇಜುಗಳ ಪ್ರಾಧ್ಯಾಪಕರು, ಪ್ರಾಂಶುಪಾಲ ರಾಗಿರುತ್ತಿದ್ದರು. ಈಗ ಶೇ.50 ಅಂಕ ಗಳಿಸಿದ ವಿದ್ಯಾರ್ಥಿಗಳಾದರೂ ಸಿಕ್ಕಿದರೆ ಸಾಕು ಎಂಬ ಸ್ಥಿತಿಯಲ್ಲಿ ಇಂಗ್ಲಿಷ್‌, ಕನ್ನಡದಂತಹ ಮೇಜರ್‌ ವಿಷಯಗಳಿವೆ. ವಾಸ್ತವದಲ್ಲಿ ಇಂಗ್ಲಿಷ್‌ ಕಾವ್ಯವನ್ನು ಜೀರ್ಣಿಸಿಕೊಳ್ಳಬೇಕಾದರೆ ಶೇ.75 ಅಂಕ ಗಳಿಸಿದ ಬುದ್ಧಿವಂತಿಕೆಯಾದರೂ ಬೇಕು.

ಕನ್ನಡ ಸಾಹಿತ್ಯದ್ದೂ ಇದೇ ಕಥೆ…
ಈ ಪರದಾಟಕ್ಕೆ ಕಾರಣವೆಂದರೆ ಕನಿಷ್ಠ 15 ವಿದ್ಯಾರ್ಥಿಗಳು ಸತತ ಮೂರು ವರ್ಷ ಇಲ್ಲದಿದ್ದರೆ ಆ ಉಪನ್ಯಾಸಕರನ್ನು (ಅನುದಾನಿತ) ಬೇರೆ ಕಾಲೇಜು ಗಳಿಗೆ ವರ್ಗಾಯಿಸಲಾಗುವುದೆಂಬ ಕಾನೂನು ಇದೆ. ಇವರೇನೂ ಆಡಳಿತ ಮಂಡಳಿ ನೇಮಿಸಿಕೊಂಡ ತಾತ್ಕಾಲಿಕ ಉಪನ್ಯಾಸಕರಲ್ಲ. ಯುಜಿಸಿ ಶ್ರೇಣಿ ವೇತನ ಪಡೆಯುವ “ಘನತೆ’ಯ ಪ್ರಾಧ್ಯಾಪಕರು. ಈ ಘನವೆತ್ತ ಪ್ರಾಧ್ಯಾಪಕರು ಬೇರೆಡೆ ವರ್ಗಾವಣೆಯಾಗುವುದೆಂಬ ಭಯ ದಲ್ಲಿ ಕೈಗೆ ಸಿಕ್ಕಿದ ವಿದ್ಯಾರ್ಥಿಗಳನ್ನು ಬುಟ್ಟಿಗೆ ಹಾಕಿಕೊಳ್ಳುವ “ದುಃಸ್ಥಿತಿ’ ಯಲ್ಲಿದ್ದಾರೆ. ಇಂತಹವರ ಗುರಿ ತಾವು ನಿವೃತ್ತಿಯಾಗುವವರೆಗೆ ಈ ಕೋರ್ಸ್‌ ಇದ್ದರೆ ಸಾಕಪ್ಪ ಎಂಬುದಕ್ಕೆ ಮಾತ್ರ ಸೀಮಿತ. ಬಹುತೇಕ ಅನುದಾನಿತ ಕಾಲೇಜುಗಳು ಬಿಎ ಪದವಿಯನ್ನು ನಿಃಶುಲ್ಕದಲ್ಲಿ ನೀಡುತ್ತೇವೆಂದರೂ ವಿದ್ಯಾರ್ಥಿಗಳು ಸಿಗುತ್ತಿಲ್ಲ. ಹಾಗಂತ ಮನಃಶಾಸ್ತ್ರ, ಮಾಧ್ಯಮ ಇತ್ಯಾದಿ ಹೊಸ ಕಾಂಬಿನೇಶನ್‌ ಮಾಡೋಣವೆಂದರೆ ಈಗಿರುವ ಯುಜಿಸಿ ಶ್ರೇಣಿಯವರು ಒಪ್ಪುತ್ತಿಲ್ಲ ಎನ್ನಲಾಗುತ್ತಿದೆ. ಒಟ್ಟಾರೆ ಇಂತಹ ಕಡೆ ಹೊಸ ಕಾಂಬಿನೇಶನ್‌ ಕೋರ್ಸ್‌ ಆರಂಭಿಸಲು ಗಂಭೀರ ಪ್ರಯತ್ನಗಳು ನಡೆಯುತ್ತಿವೆ.

ಹೆಮ್ಮಕ್ಕಳಿಗೆ ಶುಲ್ಕ ವಾಪಸು
ಅನುದಾನಿತ ಕಾಲೇಜುಗಳಲ್ಲಿ ಬಿಕಾಂ, ಬಿಬಿಎಂ, ಬಿಸಿಎಗಳಂತಹ ಕೋರ್ಸ್‌ಗಳಿಗೆ 20ರಿಂದ 30,000 ರೂ.ವರೆಗೆ ಶುಲ್ಕ ವಿಧಿಸಲಾಗುತ್ತಿದೆ. ಸರಕಾರಿ ಕಾಲೇಜುಗಳಲ್ಲಿ ಬಿಕಾಂ, ಬಿಸಿಎ, ಬಿಎಸ್ಸಿ, ಬಿಎ ಹೀಗೆ ಯಾವುದೇ ಪದವಿಗಳಿಗೆ ಸುಮಾರು 3,000 ರೂ. ಶುಲ್ಕವಿದೆ. ಇಷ್ಟು ಮಾತ್ರವಲ್ಲ ಹೆಮ್ಮಕ್ಕಳಿಗೆ ಇಷ್ಟೂ ಶುಲ್ಕ ವಾಪಸು ಸಿಗುತ್ತದೆ. ಇದಲ್ಲದೆ ವಿವಿಧ ಬಗೆಯ ವಿದ್ಯಾರ್ಥಿವೇತನ ಸಿಗುತ್ತದೆ.

-ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.