ಹಟ್ಟಿಕುದ್ರು- ಆನಗಳ್ಳಿ: ಪರ್ಯಾಯ ಮಾರ್ಗಕ್ಕೆ ಗ್ರಾಮಸ್ಥರ ಮನವಿ
Team Udayavani, Apr 28, 2017, 12:40 PM IST
ಕುಂದಾಪುರ: ಬಸ್ರೂರು ಸಮೀಪದ ಆನಗಳ್ಳಿಯಿಂದ ಹಟ್ಟಿಕುದ್ರುಗೆ ತೆರಳಲು ಈಗಿರುವ ಕೊಂಕಣ ರೈಲು ಮಾರ್ಗದ ಬದಿಯಲ್ಲಿರುವ ಕಾಲುದಾರಿಯನ್ನೇ ಅವಲಂಬಿಸಿದ ಗ್ರಾಮಸ್ಥರಿಗೆ ಕೆಲವು ದಿನಗಳಿಂದ ಈ ಮಾರ್ಗದಲ್ಲಿ ಸಂಚರಿಸಲು ರೈಲು ಇಲಾಖೆಯವರು ನಿರ್ಬಂಧ ಹೇರಿರುವುದರಿಂದ ಸಂಚಾರಕ್ಕೆ ತೊಡಕು ಅನುಭವಿಸುತ್ತಿರುವ ಗ್ರಾಮಸ್ಥರು ತಮಗೆ ಪರ್ಯಾಯ ಮಾರ್ಗವನ್ನು ಕಲ್ಪಿಸಿಕೊಡಬೇಕು ಮತ್ತು ಈ ಮಾರ್ಗದಲ್ಲಿಯೇ ಸಂಚರಿಸುವ ಅವಕಾಶ ಕಲ್ಪಿಸಬೇಕು ಎಂದು ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಅವರಿಗೆ ಮನವಿಯನ್ನು ಸಲ್ಲಿಸಿದರು.
ಎ.25ರಂದು ಸಂಜೆ ಹಟ್ಟಿಕುದ್ರುವಿಗೆ ಆಗಮಿಸಿದ ಹೆಗ್ಡೆ ಅವರಲ್ಲಿ ಮನವಿ ಮಾಡಿಕೊಂಡ ಹಟ್ಟಿಕುದ್ರು ಜನತೆ ಈ ಹಿಂದೆ ಪ್ರಸ್ತಾವಿಸಲಾದ ಹಟ್ಟಿಕುದ್ರು-ಬಸ್ರೂರು ಸೇತುವೆಯ ನಿರ್ಮಾಣ ಮಾಡುವುದರಿಂದ ಇದಕ್ಕೆ ಸೂಕ್ತ ಪರಿಹಾರ ಎಂದರು.ಗ್ರಾಮಸ್ಥರ ಮನವಿಗೆ ಉತ್ತರಿಸಿದ ಹೆಗ್ಡೆ ಅವರು ಈ ಹಿಂದೆ ನಾನು ಸಂಸದನಾಗಿದ್ದಾಗ ಹಟ್ಟಿಕುದ್ರು ಹಾಗೂ ಬಸೂÅರು ನಡುವೆ ಸೇತುವೆ ನಿರ್ಮಾಣದ ಪ್ರಸ್ತಾವನೆಯನ್ನು ಇಲಾಖೆಗೆ ಕಳುಹಿಸಲಾಗಿದೆ. ಮುಂದೆ ಈ ಪ್ರಸ್ತಾವನೆಯ ಅಂದಾಜುಪಟ್ಟಿಯನ್ನು ಪರಿಷ್ಕರಿಸಿ ಇಲಾಖೆಗೆ ಕಳುಹಿಸಲಾಗುವುದು ಎಂದು ಭರವಸೆ ನೀಡಿದರು.
ಬಿ. ಅಪ್ಪಣ್ಣ ಹೆಗ್ಡೆ, ಮಾಜಿ ತಾ.ಪಂ.ಸದಸ್ಯ ಬಾಬು ಪೂಜಾರಿ ಹಟ್ಟಿಕುದ್ರು , ಬಸ್ರೂರು ಗ್ರಾ.ಪಂ. ಅಧ್ಯಕ್ಷ ಸಂತೋಷ ಕುಮಾರ, ಗೋಪಾಲ ಕಳಿಂಜೆ , ಕಿಶೋರ ಕುಮಾರ, ರಾಜೇಶ ಕಾವೇರಿ, ಮೇರ್ಡಿ ಸತೀಶ ಹೆಗ್ಡೆ, ಸುರೇಶ ಆರ್. ನಾಯಕ್ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ