ವೇಷಧಾರಿ ರವಿ ಕಟಪಾಡಿ ಅವರಿಂದ 20 ಮಕ್ಕಳ ಚಿಕಿತ್ಸೆಗೆ 33 ಲ.ರೂ. ಸಹಾಯ


Team Udayavani, Oct 24, 2018, 10:23 AM IST

ravi.jpg

ಉಡುಪಿ: ಕಳೆದ 5 ವರ್ಷಗಳಿಂದ ಅಷ್ಟಮಿ ಸಮಯದಲ್ಲಿ ವೇಷ ಧರಿಸಿ ಅನಾರೋಗ್ಯ ಪೀಡಿತ ಮಕ್ಕಳಿಗಾಗಿ ಹಣ ಸಂಗ್ರಹಿಸುತ್ತಿರುವ ರವಿ ಕಟಪಾಡಿ ಅವರು ಇದುವರೆಗೆ ಒಟ್ಟು 33.18 ಲ.ರೂ.ಗಳನ್ನು ಸಂಗ್ರಹಿಸಿದ್ದಾರೆ.

ಕಳೆದ 5 ವರ್ಷಗಳಲ್ಲಿ ವೇಷ ಧರಿಸಿ ಒಟ್ಟು 19,33,810 ರೂ.ಗಳನ್ನು ಸಂಗ್ರಹಿಸಿ ಅದನ್ನು 20 ಮಕ್ಕಳಿಗೆ ನೀಡಿದ್ದಾರೆ. ಇವರ ಸೇವಾ ಕಾರ್ಯಕ್ಕೆ ಜತೆಯಾದ ಮಿಲಾಪ್‌ ಸರಕಾರೇತರ ಸೇವಾ ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ ರವಿ ಕಟಪಾಡಿ ಅವರ ಸೇವಾಕಾರ್ಯದ ಕುರಿತು ವೀಡಿಯೋ ಮೂಲಕ ಜನರ ಗಮನ ಸೆಳೆದಿದ್ದು 1.7 ಕೋ. ಜನ ವೀಕ್ಷಿಸಿದ್ದಾರೆ.  ಅನಿವಾಸಿ ಭಾರತೀಯರು ಸೇರಿದಂತೆ  ಹಲವಾರು ಮಂದಿ ಸ್ಪಂದಿಸಿದ್ದು ಈ ಮೂಲಕ 13.85 ಲ.
ರೂ. ಸಂಗ್ರಹವಾಗಿದೆ. ಈ ಬಾರಿ ಅಷ್ಟಮಿ ಸಂದರ್ಭ ಸಂಗ್ರಹವಾದ 5,32,000 ರೂ.ಗಳನ್ನು 5 ಮಕ್ಕಳಿಗೆ ನೀಡಲಾಗಿದೆ. ಇವರ ಚಿಕಿತ್ಸೆಗೆ ಮತ್ತಷ್ಟುಮೊತ್ತ ಅವಶ್ಯ ಇರುವುದರಿಂದ 13.85 ಲ.ರೂ.ಗಳನ್ನು ಅದೇ 5 ಮಕ್ಕಳಿಗೆ ಹಾಗೂ ಹೊಸದಾಗಿ ಬೇಡಿಕೆ ಬಂದಿರುವ ತೀರಾ ಅಗತ್ಯವಿರುವ ಇಬ್ಬರು ಮಕ್ಕಳಿಗೆ ಹಂಚಲಾಗುವುದು  ಎಂದು ಮಿಲಾಪ್‌ ಸಂಸ್ಥೆಯ ಕೆ. ಮಹೇಶ್‌ ಶೆಣೈ ಪತ್ರಿಕಾಗೋಷ್ಠಿಯಲ್ಲಿ  ತಿಳಿಸಿದ್ದಾರೆ.

ಈ ಅಭಿಯಾನಕ್ಕೆ ಉಡುಪಿ ಜಿಲ್ಲೆಯ ನಾಗರಿಕರು ಮಾತ್ರವಲ್ಲದೆ ವಿದೇಶದಲ್ಲಿರುವವರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ಅಭಿಯಾನ ಮುಂದುವರಿಸಲು  ಮನವಿ ಮಾಡಿದ್ದಾರೆ. ಹಾಗಾಗಿ ಮತ್ತೆ ತಿಂಗಳ ಕಾಲ ಮುಂದುವರಿಸಿ ಬಡಮಕ್ಕಳ ಚಿಕಿತ್ಸೆಗೆ ಹಣ ನೀಡ ಲಾಗುತ್ತದೆ. ಹಣವನ್ನು ನೇರವಾಗಿ ಖಾತೆಗೆ  ವರ್ಗಾಯಿಸಲಾಗುತ್ತದೆ. ತೀರಾ ಅಗತ್ಯ ಇರುವವರಿಗೆ ತಲುಪಿಸುವ ಉದ್ದೇಶ ರವಿ ಕಟಪಾಡಿ ಮತ್ತು ಅವರ ಸ್ನೇಹಿತರದ್ದಾಗಿದೆ ಎಂದು ಮಹೇಶ್‌ ತಿಳಿಸಿದರು.

ಸಹಾಯ ಮಾಡುತ್ತಿರುವವರಲ್ಲಿ ಹೆಚ್ಚಿನ ಮಕ್ಕಳು ಕ್ಯಾನ್ಸರ್‌, ಕಿಡ್ನಿ ಸಮಸ್ಯೆಯವರು. ಸದ್ಯ ನಾವು ಮಕ್ಕಳಿಗೆ ಮಾತ್ರ ಸಹಾಯ ಮಾಡುತ್ತಿದ್ದೇವೆ. ಸ್ನೇಹಿತರು ಮತ್ತು ಎಲ್ಲ ಜನತೆಯ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ರವಿ ಕಟಪಾಡಿ ಹೇಳಿದರು. ತಂಡ ಸದಸ್ಯ ರಕ್ಷಿತ್‌ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಯಾವ ವರ್ಷ ಎಷ್ಟು  ಸಂಗ್ರಹ
ಮೊದಲ ವರ್ಷ     1,04,810 ರೂ.   –    1 ಮಗುವಿಗೆ
ಎರಡನೇ ವರ್ಷ    3,65,000 ರೂ.   –     4 ಮಕ್ಕಳಿಗೆ
ಮೂರನೇ ವರ್ಷ   4,20,000 ರೂ.   –    3 ಮಕ್ಕಳಿಗೆ
ನಾಲ್ಕನೇ ವರ್ಷ       5,12,000 ರೂ.   –    7 ಮಕ್ಕಳಿಗೆ
ಐದನೇ ವರ್ಷ         5,32,000 ರೂ.   –     5 ಮಕ್ಕಳಿಗೆ
ಮಿಲಾಪ್‌ ಸಂಸ್ಥೆಯ ಮೂಲಕ ಸಂಗ್ರಹ  ರೂ.    –    13,85,000

ಟಾಪ್ ನ್ಯೂಸ್

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.