ಪಡುಬಿದ್ರಿ: ಸಾರ್ವಜನಿಕರಲ್ಲಿ ಗೊಂದಲ


Team Udayavani, Oct 30, 2018, 2:50 AM IST

navayug-29-10.jpg

ಪಡುಬಿದ್ರಿ: ನಾಲ್ಕು ಪಥಗಳ ಹೆದ್ದಾರಿ ಕಾಮಗಾರಿಯನ್ನಷ್ಟೇ ಪಡುಬಿದ್ರಿ ಭಾಗದಲ್ಲಿ ತುರ್ತಾಗಿಯೇ ಮುಗಿಸಿರುವ ನವಯುಗ ನಿರ್ಮಾಣ ಕಂಪೆನಿಯು ಇದೀಗ ಪಡುಬಿದ್ರಿ ಆಸುಪಾಸಲ್ಲಿ ಸರ್ವೀಸ್‌ ರಸ್ತೆ ಕಾಮಗಾರಿಗೆ ಮುಂದಾಗಿಲ್ಲ. ಕೇವಲ ಪಡುಬಿದ್ರಿಯ ಕೇಂದ್ರ ಭಾಗದಿಂದ ದಕ್ಷಿಣಕ್ಕೆ ಪೂರ್ವಭಾಗದಲ್ಲಷ್ಟೇ ಒಳ ಚರಂಡಿ ಕಾಮಗಾರಿಯನ್ನು ನಿರ್ವಹಿಸುತ್ತಿದೆ. ಸ್ಥಳೀಯರು, ಸಾರ್ವಜನಿಕರಂತೂ ಧೂಳುಮಯ ಕಚ್ಚಾ ರಸ್ತೆಗಳನ್ನೇ ಇದೀಗ ತಮ್ಮ ಸಂಪರ್ಕ ರಸ್ತೆಯನ್ನಾಗಿ ಬಳಸಿಕೊಳ್ಳುತ್ತಿದ್ದು ಇವರ ಪರಿಪಾಟಲು ಹೇಳತೀರದಾಗಿದೆ.

ಒಳ ಚರಂಡಿ – ಸರ್ವಿಸ್‌ ರಸ್ತೆ ವಿಳಂಬ
ಹೊಟೇಲ್‌ ಅಮರ್‌ ಕಾಂಫರ್ಟ್ಸ್ ಬಳಿ ಸರ್ವಿಸ್‌ ರಸ್ತೆಗಾಗಿ ಹೆದ್ದಾರಿ ಪಶ್ಚಿಮ ಬದಿ ಒಂದು ದಿನವಷ್ಟೇ ಕಾಮಗಾರಿಯನ್ನು ನಿರ್ವಹಿಸಲಾಗಿದ್ದು ಇಲ್ಲೂ ದೊಡ್ಡ ಕುಳಿಯನ್ನು ನಿರ್ಮಿಸಿ ಕೈಬಿಡಲಾಗಿದೆ. ಎರಡೂ ಭಾಗಗಳಲ್ಲೂ ಪಂಚಾಯತ್‌ ನೀರಿನ ಪೈಪ್‌ಲೈನ್‌ ಕಾಮಗಾರಿಯನ್ನು ನವಯುಗ ನಿರ್ಮಾಣ ಕಂಪೆನಿಯು ಪಂಚಾಯತ್‌ ಪ್ರಸ್ತಾವನೆಗೆ ಒಪ್ಪಿಕೈಗೊಳ್ಳಬೇಕಿದೆ. ಇದಿನ್ನೂ ಪೂರ್ಣಗೊಂಡಿಲ್ಲ. ಮಳೆ ನೀರು ಪೂರ್ಣ ಒತ್ತಡದೊಂದಿಗೆ ಹರಿದು ಬರುವ ಹೆದ್ದಾರಿ ಪಶ್ಚಿಮ ಭಾಗದಲ್ಲಿನ ಒಳಚರಂಡಿ ವ್ಯವಸ್ಥೆಯನ್ನು ಇದುವರೆಗೂ ಒಂದಿನಿತೂ ಹೆದ್ದಾರಿ ಚತುಃಷ್ಪಥ ಗುತ್ತಿಗೆದಾರ ನವಯುಗ ನಿರ್ಮಾಣ ಕಂಪೆನಿಯು ನಿರ್ವಹಿಸಿಲ್ಲ.

ಕಾರ್ಕಳ – ಪಡುಬಿದ್ರಿ ಸಂಧಿಭಾಗ ಅಪಘಾತ ವಲಯ
ಹೆದ್ದಾರಿ ಚತುಷ್ಪಥದ ನಡುವೆ 1.6ಮೀಟರ್‌ ಅಗಲದ ರಸ್ತೆ ವಿಭಾಜಕವನ್ನು ನಿರ್ಮಿಸಲಾಗಿದ್ದು ಇದರ ನಿರ್ವಹಣೆಯನ್ನೂ ಇನ್ನೂ ಪೂರ್ಣಗೊಳಿಸಲಾಗಿಲ್ಲ. ಹೆದ್ದಾರಿ ಭಾಗವು ರಾತ್ರಿಯ ವೇಳೆ ಪೂರ್ಣ ಕತ್ತಲು ಮಯವಾಗಿದೆ. ಹೆದ್ದಾರಿ ದೀಪಗಳ ವ್ಯವಸ್ಥೆಯನ್ನು ಕಲ್ಪಿಸುವಲ್ಲೂ ನವಯುಗ ಕಂಪೆನಿ ಹಿಂದೆ ಬಿದ್ದಿದೆ. ಕಾರ್ಕಳ ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಸಂಧಿ ಭಾಗವು ಪೂರ್ಣ ಅಯೋಮಯವಾಗಿದ್ದು ಮತ್ತೂಂದು ಕಟಪಾಡಿ ಜಂಕ್ಷನ್‌ ತರಹವೆಂಬಂತೆ ಪೂರ್ಣ ಅಪಘಾತ ವಲಯವಾಗಿಯೇ ಪರಿವರ್ತನೆಗೊಂಡಿದೆ. 

ಬಸ್‌ ನಿಲ್ದಾಣವಿಲ್ಲದೇ ಗೊಂದಲದ ಗೂಡು
ಹೆದ್ದಾರಿ ಬಸ್‌ ನಿಲ್ದಾಣಗಳೂ ಗೊಂದಲದ ಗೂಡಾಗಿ ಮಾರ್ಪಟ್ಟಿದೆ. ಕಾರ್ಕಳ ಭಾಗಕ್ಕೆ ಹೋಗಬೇಕಾದ ಬಸ್‌ ನಿಲ್ದಾಣ ಮತ್ತು ಮಂಗಳೂರು ಕಡೆಯ ಬಸ್‌ ನಿಲ್ದಾಣಗಳ ಮಧ್ಯೆ ಸುಮಾರು ಅರ್ಧ ಕಿ.ಮೀ. ಅಂತರವಿದ್ದು ಪ್ರಯಾಣಿಕರ ಅಲ್ಲಿಗೆ ಹೆದ್ದಾರಿ ದಾಟಿ ತೆರಳುವ ವೇಳೆಯಲ್ಲೇ ಎರಡು ಕಾರ್ಕಳದ ಬಸ್‌ಗಳು ಮಿಸ್‌ ಆಗಿರುತ್ತವೆ. ಹಾಗೆಯೇ ಕಾರ್ಕಳ ಕಡೆಯಿಂದ ಬರುವ ಪ್ರಯಾಣಿಕರಿಗೆ ಮೂರು – ನಾಲ್ಕು ಉಡುಪಿ ಮಣಿಪಾಲದ ಬಸ್‌ಗಳು ತೆರಳಿರುತ್ತವೆ. ರಾತ್ರಿ ವೇಳೆಯಲ್ಲಂತೂ ಈ ಬಸ್‌ ನಿಲ್ದಾಣಗಳಲ್ಲಿ ಕಗ್ಗತ್ತಲೆ ಕವಿದಿರುತ್ತದೆ. 

ಗ್ರಾ. ಪಂ. ಬಸ್‌ ನಿಲ್ದಾಣದ ಜಾಗದ ಗುರುತಿಸುವಿಕೆ ನಡೆಸಿಲ್ಲ
ಈ ಎಲ್ಲಾ ವಿಚಾರಗಳ ಕುರಿತಾಗಿ ನವಯುಗ ನಿರ್ಮಾಣ ಕಂಪೆನಿಯ ಯೋಜನಾ ನಿರ್ದೇಶಕ ಶಂಕರ್‌ ರಾವ್‌ ಅವರನ್ನು ಮಾತಾಡಿಸಿದಾಗ ಒಳ ಚರಂಡಿ ಕಾಮಗಾರಿಗಳು ತೀರುತ್ತಿರುವಂತೆಯೇ ತಾವು ಸರ್ವೀಸ್‌ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತೇವೆ. ಪೂರ್ವ ಬದಿಯ ಒಳ ಚರಂಡಿಯ ಕೆಲಸದ ಬಳಿಕ ಸರ್ವೀಸ್‌ ರಸ್ತೆ ಕಾಮಗಾರಿ ಆರಂಭವಾಗಲಿದೆ. ಆ ಬಳಿಕ ಪಶ್ಚಿಮ ಬದಿಯ ಒಳಚರಂಡಿ, ಸರ್ವೀಸ್‌ ರಸ್ತೆಗಳು ನಿರ್ಮಾಣಗೊಳ್ಳುತ್ತವೆ. ಹೆದ್ದಾರಿ ಮಧ್ಯೆ ರಸ್ತೆ ವಿಭಾಜಕದ ಪೂರ್ಣ ಕಾಮಗಾರಿ, ವಿದ್ಯುತ್‌ ಜೋಡಣೆಗಳು ಡಿಸೆಂಬರ್‌ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿವೆ. ಪಡುಬಿದ್ರಿಯಲ್ಲಿ ಬಸ್‌ ನಿಲ್ದಾಣಗಳನ್ನು ಎಲ್ಲಿ ನಿರ್ಮಿಸಬೇಕೆಂದು ತಾವು ಪಡುಬಿದ್ರಿ ಗ್ರಾ. ಪಂ. ಗೆ ಈಗಾಗಲೇ ಜಾಗ ಗುರುತಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದೇವೆ. ಆದರೆ ಸ್ಥಳೀಯ ಗ್ರಾ.ಪಂ. ಇದುವರೆಗೂ ಸ್ಪಂದಿಸಿಲ್ಲ ಎಂಬುದಾಗಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ

1-dubey

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ

Supreme Court

State-Governor ಕದನ: ಕೇಂದ್ರ ಸರಕಾರಕ್ಕೆ ಸುಪ್ರೀಂ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

27 ವರ್ಷದಿಂದ ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಬಂಧನ

27 ವರ್ಷದಿಂದ ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಬಂಧನ

Udupi ಕೇಂದ್ರ ಸರಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್‌ ಪ್ರತಿಭಟನೆ

Udupi ಕೇಂದ್ರ ಸರಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್‌ ಪ್ರತಿಭಟನೆ

Fraud Case ಟರಿಂಗ್‌ ವ್ಯವಹಾರದ ಕಮಿಷನ್‌ ಹೆಸರಲ್ಲಿ ವಂಚನೆ

Fraud Case ಟರಿಂಗ್‌ ವ್ಯವಹಾರದ ಕಮಿಷನ್‌ ಹೆಸರಲ್ಲಿ ವಂಚನೆ

Udupi 36 ವರ್ಷಗಳ ಹಿಂದಿನ ಆರೋಪಿ ಬಂಧನ

Udupi 36 ವರ್ಷಗಳ ಹಿಂದಿನ ಆರೋಪಿ ಬಂಧನ

Shirva: ಭಾರೀ ಗಾಳಿ ಮಳೆಗೆ ವ್ಯಾಪಕ ಹಾನಿ; ಲಕ್ಷಾಂತರ ರೂ. ನಷ್ಟ

Shirva: ಭಾರೀ ಗಾಳಿ ಮಳೆಗೆ ವ್ಯಾಪಕ ಹಾನಿ; ಲಕ್ಷಾಂತರ ರೂ. ನಷ್ಟ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.