ಅಕ್ರಮ ಮರಳುಗಾರಿಕೆ: 7 ಮಂದಿ ಸೆರೆ
Team Udayavani, Mar 9, 2019, 1:10 AM IST
ಕಾರ್ಕಳ: ಪರವಾನಿಗೆರಹಿತವಾಗಿ ಮುಂಡ್ಕೂರು ಗ್ರಾಮದ ಪೊಸ್ರಾಲಿನ ಶಾಂಭವಿ ನದಿಯಿಂದ ಮರಳು ತೆಗೆಯುತ್ತಿದ್ದ 7 ಮಂದಿಯನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಸಂದೀಪ್ ಶೆಟ್ಟಿ,ಮಂಜುನಾಥ ಪೂಜಾರಿ,ವಿಲ್ಫ್ರೆಡ್ ಮಸ್ಕರೇನ್ಹಸ್,ಭೀಮಪ್ಪ,ಮರಿಯಪ್ಪ,ವಾಲ್ಟರ್,ಲಕ್ಷಣ್ ಬಂಧಿತರು. ಇನ್ನ ದೀಪಕ್ ಕೋಟ್ಯಾನ್ ತಲೆಮರೆಸಿಕೊಂಡಿದ್ದಾನೆ.
ಎಎಸ್ಪಿ ಕೃಷ್ಣಕಾಂತ್ ನೇತೃತ್ವದಲ್ಲಿ ಮಾ.8ರ ಬೆಳಗ್ಗೆ 3 ಗಂಟೆಗೆ ಮರುಳುಗಾರಿಕೆ ಅಡ್ಡೆಗೆ ದಾಳಿ ನಡೆಸಲಾಗಿದೆ. ಅಲ್ಲಿಂದ 5 ಟಿಪ್ಪರ್, 1 ಬೈಕ್ ಹಾಗೂ ಮರಳು ತೆಗೆಯಲು ಬಳಸುತ್ತಿದ್ದ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ.