20 ವರ್ಷಗಳಲ್ಲಿ 1.18 ಲಕ್ಷ ಜನಸಂಖ್ಯೆ ವೃದ್ಧಿ


Team Udayavani, Aug 22, 2017, 8:40 AM IST

udupi-sambrama.jpg

ಉಡುಪಿ ಜಿಲ್ಲೆಯಾಗಿ ರೂಪುಗೊಂಡು 20 ವರ್ಷಗಳಲ್ಲಿ 1,18,078 ಜನಸಂಖ್ಯೆ ವೃದ್ಧಿಯಾಗಿದೆ. ಉಡುಪಿ ಜಿಲ್ಲೆ 1997 ರಲ್ಲಿ ಜನ್ಮತಾಳುವಾಗ ಅಂದಾಜು ಜನಸಂಖ್ಯೆ 11,35,888. 2017ರ ಅಂದಾಜು ಜನಸಂಖ್ಯೆ 12,53,966 2021ರಲ್ಲಿ ಈ ಜನಸಂಖ್ಯೆ 13,26,053ಕ್ಕೆ ಏರಬಹುದು ಎಂದು ಅಂದಾಜಿಸಲಾಗಿದೆ. 

ಉಡುಪಿ: ಪ್ರತಿ ಹತ್ತು ವರ್ಷಗಳಿಗೊಮ್ಮೆ ಜನಸಂಖ್ಯಾ ಗಣತಿ ನಡೆಯುತ್ತದೆ. ಪ್ರತಿವರ್ಷವೂ ಹಿಂದಿನ ಸಂಖ್ಯಾ ಹೆಚ್ಚಳವನ್ನು ಗಮನಿಸಿ ಸರಾಸರಿ ಲೆಕ್ಕವನ್ನೂ ಅಂಕಿಸಂಖ್ಯೆಗಳ ನಿರ್ದೇಶನಾಲಯ ಪ್ರಕಟಿಸುತ್ತದೆ. 

1991ರ ಜನಗಣತಿ ಪ್ರಕಾರ ಉಡುಪಿ ಜಿಲ್ಲೆಯ ಒಟ್ಟು ಜನಸಂಖ್ಯೆ 10,38,099. ಇದರಲ್ಲಿ ನಗರವಾಸಿಗಳ ಸಂಖ್ಯೆ 2,29,152, ಗ್ರಾಮೀಣ ವಾಸಿಗಳ ಸಂಖ್ಯೆ 8,08,947. ಒಟ್ಟು ಪುರುಷರ ಸಂಖ್ಯೆ 4,86,409, ಮಹಿಳೆಯರ ಸಂಖ್ಯೆ 5,51,690.

ತಾಲೂಕುವಾರು ವಿವರ ಇಂತಿದೆ: ಕುಂದಾಪುರ 3,51,673, ಕಾರ್ಕಳ 1,90,660, ಉಡುಪಿ 4,95,766. 

2011 ರ ಜನಗಣತಿ ವಿವರ ಇಂತಿದೆ: ಉಡುಪಿ ಜಿಲ್ಲೆಯ ಒಟ್ಟು ಜನಸಂಖ್ಯೆ 11,77,361. ಇವರಲ್ಲಿ 5,62,131 ಪುರುಷರು, 6,15,230 ಮಹಿಳೆಯರು. ಇವರಲ್ಲಿ ನಗರವಾಸಿಗಳು 3,34,061, ಗ್ರಾಮೀಣವಾಸಿಗಳು 8,43,300. ಕುಂದಾಪುರ ತಾಲೂಕಿನ ಜನಸಂಖ್ಯೆ 3,68,027. ಉಡುಪಿ ತಾಲೂಕಿನ ಜನಸಂಖ್ಯೆ 4,22,370. ಕಾರ್ಕಳ ತಾಲೂಕಿನ ಜನಸಂಖ್ಯೆ 1,90,291.

2011ರಲ್ಲಿ ಉಡುಪಿ ನಗರಸಭೆ ಜನಸಂಖ್ಯೆ 1,44,960, ಕುಂದಾಪುರ ಪುರಸಭೆ ಜನಸಂಖ್ಯೆ 30,444, ಕಾರ್ಕಳ ಪುರಸಭೆ ಜನಸಂಖ್ಯೆ 6,881. ಸಾಲಿಗ್ರಾಮದ ಜನಸಂಖ್ಯೆ 7,183. ಇದರಲ್ಲಿ ಅಧಿಸೂಚಿತ ಪ್ರದೇಶಗಳನ್ನು ಸೇರಿಸಿದರೆ ಇನ್ನಷ್ಟು ಹೆಚ್ಚಿಗೆ ಇದೆ. 2001ರ ಜನಗಣತಿಯಂತೆ ಉಡುಪಿ ನಗರದ ಜನಸಂಖ್ಯೆ 1,13,039.

ಉಡುಪಿ ಜಿಲ್ಲೆಯ 1997 ರ ಅಂದಾಜು ಜನಸಂಖ್ಯೆ 11,35,888. ತಾಲೂಕುವಾರು ವಿವರ ಇಂತಿದೆ: ಕುಂದಾಪುರ ತಾಲೂಕು- 3,95,878, ಕಾರ್ಕಳ ತಾಲೂಕು – 2,06,390, ಉಡುಪಿ ತಾಲೂಕು- 5,33,742. 

ಜಿಲ್ಲೆಯ 2017 ರ ಅಂದಾಜು ಜನಸಂಖ್ಯೆ 12,53,966. ಇದರಲ್ಲಿ ಕುಂದಾಪುರ ತಾಲೂಕು- 3,97,077, ಕಾರ್ಕಳ ತಾಲೂಕು- 2,19,372, ಉಡುಪಿ ತಾಲೂಕು- 6,37,517. 2021ರಲ್ಲಿ ಈ ಜನಸಂಖ್ಯೆ 13,26,053 ಕ್ಕೆ ಏರಬಹುದು. 

ಕಾರ್ಕಳ ಸಣ್ಣ ತಾಲೂಕಾದರೂ ದೊಡ್ಡ ತಾಲೂಕು!
ಉಡುಪಿ ಜಿಲ್ಲೆಯ ವ್ಯಾಪ್ತಿಯನ್ನು ವಿವರಿಸುವಾಗ ಕಾರ್ಕಳ ತಾಲೂಕನ್ನು ಸಣ್ಣ ತಾಲೂಕು ಎನ್ನುತ್ತೇವೆ. ಇದು ಜನಸಂಖ್ಯೆ ಆಧಾರದಲ್ಲಿ. ಆದರೆ ಭೌಗೋಳಿಕವಾಗಿ ಉಡುಪಿ ತಾಲೂಕಿಗಿಂತ ಕಾರ್ಕಳ ತಾಲೂಕು ದೊಡ್ಡದಿದೆ. ತಾಲೂಕುವಾರು ಭೌಗೋಳಿಕ ವಿಸ್ತೀರ್ಣ ಇಂತಿದೆ: ಕುಂದಾಪುರ- 1,559 ಚದರ ಕಿ.ಮೀ., ಕಾರ್ಕಳ – 1,091 ಚದರ ಕಿ.ಮೀ., ಉಡುಪಿ- 925 ಚದರ ಕಿ.ಮೀ. 

ಉಡುಪಿ ಜಿಲ್ಲೆ- ನಗರಸಭೆ ಅಸ್ತಿತ್ವಕ್ಕೂ ಕಾಕತಾಳೀಯ
1935ರಲ್ಲಿ ಏಳು ಗ್ರಾಮಗಳನ್ನು ಹೊಂದಿದ 3.75 ಚದರಮೈಲಿ ವಿಸ್ತೀರ್ಣದ ಉಡುಪಿ ನಗರಸಭೆ ಅಸ್ತಿತ್ವಕ್ಕೆ ಬಂತು. ಅನಂತರ ಪುರಸಭೆಯಾಯಿತು. 20-10-1995ರಲ್ಲಿ ಮಲ್ಪೆ, ಪುತ್ತೂರು, ಶಿವಳ್ಳಿ, ಹೆರ್ಗ, 76 ಬಡಗಬೆಟ್ಟು ಗ್ರಾಮಗಳನ್ನು ಒಳಗೊಂಡು 35 ವಾರ್ಡುಗಳ ನಗರಸಭೆಯಾಗಿ ಪರಿವರ್ತನೆಗೊಂಡಿತು.  ವಿಸ್ತೀರ್ಣವು 9.6 ಚ.ಕಿ.ಮೀ.ನಿಂದ 68.28 ಚ.ಕಿ.ಮೀ.ಗೆ ವಿಸ್ತರಣೆಯಾಯಿತು. ಉಡುಪಿ ಜಿಲ್ಲೆ ಉದ್ಘಾಟನೆಗೊಂಡದ್ದು 1997ರಲ್ಲಿ. ಬೃಹತ್‌ ಉಡುಪಿಯ ನಗರಸಭೆ 1995 ರಲ್ಲಿ ಘೋಷಣೆಯಾದರೂ ನಗರಸಭೆ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದದ್ದು 1997ರಲ್ಲಿ. ಎರಡೂ ಒಂದೇ ವರ್ಷದಲ್ಲಿ ಅಸ್ತಿತ್ವಕ್ಕೆ ಬಂದುದನ್ನು ಕಾಕತಾಳೀಯ ಎನ್ನಬಹುದು. 

– ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.