ಹೆಚ್ಚಿದ ತಾಪಮಾನ: ಕುಡಿಯುವ ನೀರಿಗೆ ಹಾಹಾಕಾರ


Team Udayavani, Apr 27, 2017, 5:02 PM IST

water.jpg

ಕುಂದಾಪುರ: ತಾಲೂಕಿನಲ್ಲಿ ಬಿಸಿಲ ಬೇಗೆಯಿಂದ ಜನರು ಕೆಂಗೆಟ್ಟಿದ್ದಾರೆ. ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದ್ದು, ಮೋಡ ಕವಿದ ವಾತಾವರಣವಾಗುತ್ತಿದ್ದರೂ  ಮಳೆಯ ಛಾಯೆ ಕಂಡುಬಂದಿಲ್ಲ. ತಾಲೂಕಿನ ಹಲವೆಡೆ ನೀರಿಗೆ ಹಾಹಾಕಾರ ಎದ್ದಿದ್ದು ಜನರು ಬಿಸಿಲ ಬೇಗೆಯೊಂದಿಗೆ ನೀರಿನ ಬರವನ್ನು ಎದುರಿಸುತ್ತಿದ್ದಾರೆ.

ಹಗಲು ವೇಳೆ 32ಡಿಗ್ರಿಯಿಂದ 36 ಡಿಗ್ರಿ ತ‌ನಕ ಉಷ್ಣಾಂಶವಿದ್ದರೆ ರಾತ್ರಿ 26 ಡಿಗ್ರಿಯಷ್ಟು ಉಷ್ಣಾಂಶ ಕಂಡು ಬಂದಿದ್ದು, ಕಳೆದ ಕೆಲವು ದಿನಗ‌ ಹಿಂದೆ ಬೀಸುತ್ತಿದ್ದ  ತಂಗಾಳಿಯು ಮಾಯವಾಗಿ ಬಿಸಿಗಾಳಿ ಆವರಿಸಿದೆ. ಸ್ವಲ್ಪ ಮಟ್ಟಿನ ಮಳೆಯಾಗಿದ್ದರೆ ಈ ಬಿಸಿಲ ಧಗೆ ಸ್ವಲ್ಪ ದಿನಗಳ ಮಟ್ಟಗೆ ಮಾಯವಾಗುತ್ತಿತ್ತು ಕಳೆದ ಕೆಲವು ದಿನಗಳಿಂದ ಮೋಡ ಹಾಗೂ ಬಿಸಿಲು ಕಣ್ಣು ಮುಚ್ಚಾಲೆಯಾಡುತ್ತಿದ್ದು, ಜನರು ಮಳೆಗಾಗಿ ಹಾತೊರೆಯುತ್ತಿದ್ದಾರೆ. ಮೋಡ ಮುಸುಕಿದ ವಾತಾವರಣದಿಂದಾಗಿ ತಾಪಮಾನ ಏರಿಕೆಯಾಗುತ್ತಿದೆ.

ಕುಡಿಯುವ ನೀರಿಗೆ ಬರ
ಗ್ರಾಮೀಣ ಭಾಗದ  ಕೆರೆ ಬಾವಿಗಳು ಬತ್ತಿ  ನೀರಿನ ಬರವನ್ನು ಕಾಣುತ್ತಿವೆ. ಮಾರ್ಚ್‌ ತಿಂಗಳ ಮೊದಲಲ್ಲೇ  ಮದಗ ಕೆರೆಗಳು ಬಾಯೆ¤ರೆದು ನಿಂತಿವೆ. ತಾಲೂಕಿನ ವಿಸ್ತಾರವಾದ ಕೆರೆಗಳು, ಮದಗಗಳು ನೀರಿಲ್ಲದೇ ಬತ್ತಿಹೋಗಿವೆೆ. ತಾಲೂಕಿನ ಕೆಲವು ಕೆರೆಗಳು ಬತ್ತಿಹೋಗಿರುರುವುದರಿಂದ  ಪರಿಸರದ  ಬಾವಿಗಳಲ್ಲಿ  ನೀರಿನ  ಸೆಲೆಗಳು ಕಳೆದುಕೊಂಡು ಕುಡಿಯುವ ನೀರಿಗಾಗಿ ಹಪಹಪಿಸುವ ಕಾಲ ಒಂದಿದೆ.

ಕೆರೆಗಳ ಅಂತರ್ಜಲ  ಕುಸಿತ ಗೊಂಡಿರುವುದರಿಂದ ಭೂಮಿಯಲ್ಲಿ ತಂಪಿರದೇ ಇರುವುದರಿಂದ ಉಷ್ಣಾಂಶದಲ್ಲಿ ಏರಿಕೆಯಾಗುತ್ತಿದೆ. ತಾಲೂಕಿನ ಕೆಲವು ಭಾಗಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದ್ದು ಈ ಭಾಗಗಳಿಗೆ ಆಯಾ ಗ್ರಾ.ಪಂ.ನಿಂದ ಟ್ಯಾಂಕರ್‌ ಮೂಲಕ ನೀರು ಸರಬರಾಜಿಗೆ  ತಾಲೂಕು ಆಡಳಿತ ವ್ಯವಸ್ಥೆ  ಮಾಡಲಾಗುತ್ತಿದೆ. ಹಕ್ಲಾಡಿ ಗ್ರಾಮದ ತೊಪುÉ, ಬಗ್ವಾಡಿ, ಸೇನಾಪುರ, ಆಲೂರು,  ಕರ್ಕುಂಜೆ ಗ್ರಾ.ಪಂ. ವ್ಯಾಪ್ತಿಯ ನೇರಳಕಟ್ಟೆ, ಗುಲ್ವಾಡಿ  ಬಿಜೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕಳಿಹಿತ್ಲು , ಯಡ್ತರೆ ಗ್ರಾ.ಪಂ., ಬೆಳ್ವೆ ಗ್ರಾ.ಪಂ., ಕಾವ್ರಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಈಗಾಗಲೇ ಕುಡಿಯುವ ನೀರಿನ ಅಭಾವ ಕಂಡು ಬಂದಿದೆ. ಈ ಹಿಂದಿನ ಸಾಲಿನಲ್ಲಿ ತಾಲೂಕಿನ ಸುಮಾರು 31 ಗ್ರಾ.ಪಂ. ವ್ಯಾಪ್ತಿಯಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗಿತ್ತು.

ಅನುಷ್ಠಾನಕ್ಕೆ ಬಾರದ ಬಹುಗ್ರಾಮ ನೀರು ಸರಬರಾಜು ಯೋಜನೆ:  ತಾಲೂಕಿನ ಹತ್ತು ಗ್ರಾಮಗಳಿಗೆ 11 ತೆರೆದ ಬಾವಿ 140 ಕೊಳವೆ ಬಾವಿ ಹಾಗೂ 21 ನೀರು ಸರಬರಾಜು ಟ್ಯಾಂಕ್‌ಗಳು ಇದ್ದರೂ  ಕೂಡಾ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಾ ಬಂದಿದ್ದೇವೆ. ಈ ಹತ್ತು ಗ್ರಾಮಗಳಲ್ಲಿ ನದಿ ಹರಿದುಹೋಗುತ್ತಿದ್ದು ಅವುಗಳಿಗೆ ಗುಳ್ಳಾಡಿ ಹಾಗೂ  ಹೆಮ್ಮಾಡಿ, ಬಳ್ಕೂರು ನಲ್ಲಿ   ಉಪ್ಪುನೀರಿನ ತಡೆಗೋಡೆಯನ್ನು ನಿರ್ಮಿಸಲಾಗಿದೆ.  ಇದರ ನೀರನ್ನು ಬಹುಗ್ರಾಮ ನೀರು ಸರಬರಾಜು ಯೋಜನೆಯಲ್ಲಿ ಸೇರಿಸಿ ಕೊಂಡರೆ ಖಂಡಿತಾ ಬೇಕಾದಷ್ಟು ನೀರನ್ನು ಪಡೆಯಬಹುದಾಗಿದೆ.  ಕರ್ಕುಂಜೆ ಗ್ರಾಮದ ಕೌಂಚೂರು ಬಳಿ ಪಂಪ್‌ ಅಳವಡಿಸಿ ಸೌಕೂರು ದೇವಸ್ಥಾನದ ಬಳಿಯಲ್ಲಿ ನೀರು ಶುದ್ದೀಕರಣ ಘಟಕವನ್ನು  ನಿರ್ಮಿಸಿದಲ್ಲಿ  ಅಲ್ಲಿಂದ ಈಗಾಗಲೇ ರಸ್ತೆ ಬದಿಯಲ್ಲಿ  ಪಂಚಾಯತ್‌ನವರು ಅಳವಡಿಸಿರುವ ಪೈಪ್‌ಲೈನುಗಳ ಮೂಲಕ ನೀರು ಸರಬರಾಜು ಮಾಡಿ ಪ್ರತಿ ಗ್ರಾ.ಪಂ.ನವರು ಟ್ಯಾಂಕ್‌ ಮೂಲಕ ಸ್ಟೋರ್‌ ಮಾಡುವ  ಕುಡಿಯುವ ನೀರಿನ ಹಾಹಾಕಾರವನ್ನು ತಡೆಯಬಹುದಾಗಿದೆ ಎನ್ನುವುದು ತಜ್ಞರ ಅಭಿಪ್ರಾಯ. ಆದರೆ ಬಹಳಷ್ಟು ವರ್ಷಗಳ ಹಿಂದೆಯೇ ಈ ಬಗ್ಗೆ ಚರ್ಚೆಗಳು ನಡೆಯಿತ್ತಾದರೂ ಅನುಷ್ಠಾನಕ್ಕೆ ಬರಲಿಲ್ಲ.

ಬಹುಗ್ರಾಮ ಕುಡಿಯುವ ನೀರಿನ ಪ್ರಸ್ತಾವನೆ ಹಾಗೂ ಬೇಡಿಕೆಯನ್ನು   ಈಗಾಗಲೇ ಇಲಾಖೆಗೆ  ನೀಡಿದ್ದರೂ ಈ ತನಕ ಯಾವುದೇ ಫಲ ದೊರಕಿಲ್ಲ. ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ಟ್ಯಾಂಕ್‌ಗಳನ್ನು ಬಳಸಿಕೊಂಡು  ಪೈಪ್‌ಲೈನ್‌ಗಳ ಮೂಲಕ ನೀರು ಸರಬರಾಜು ಮಾಡುವ ಯೋಜನೆಯನ್ನು ಸಿದ್ಧಪಡಿಸಿದ್ದಲ್ಲಿ ಮುಂದಿನ ವರ್ಷಕ್ಕಾದರೂ ಕುಡಿಯುವ ನೀರಿನ ಸಮಸ್ಯೆಯನ್ನು ತಡೆಯಬಹುದಾಗಿದೆ. ತಜ್ಞರ ಅಭಿಪ್ರಾಯಗಳನ್ನು  ತೆಗೆದುಕೊಂಡು  ನೀರಿನ ಸೆಲೆಯಿರುವ ಪ್ರದೇಶಗಳಿಂದ ನೀರು ಅಭಾವವಿರುವ ಪ್ರದೇಶಗಳಿಗೆ  ಸರಬರಾಜು ಮಾಡುವ ಸಂಕಲ್ಪವನ್ನು ಮಾಡಬೇಕು.
ಧಿಧಿ- ಕೆಂಚನೂರು ಸೋಮಶೇಖರ ಶೆಟ್ಟಿ,  ಪ್ರಗತಿಪರ ಕೃಷಿಕ

– ಉದಯ ಆಚಾರ್‌ ಸಾಸ್ತಾನ

ಟಾಪ್ ನ್ಯೂಸ್

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.