ಅಂತಾರಾಷ್ಟ್ರೀಯ ಸಮಾವೇಶ
Team Udayavani, Jul 14, 2017, 2:40 AM IST
ಉಡುಪಿ: ಅಪ್ಲೆ„ಡ್ ಸೈನ್ಸಸ್, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ಸಮಾವೇಶ ಮಣಿಪಾಲದಲ್ಲಿ ಮಣಿಪಾಲ ವಿ.ವಿ. ಮತ್ತು ವಿಯಟ್ನಾಮ್ನ ಎನ್ಗುವೆನ್ ಟ್ಯಾಟ್ ತಾನ್ ವಿ.ವಿ. ಸಹಯೋಗದಲ್ಲಿ ನಡೆಯಿತು.
ಮಣಿಪಾಲ ವಿ.ವಿ. ಪ್ರವೇಶಾತಿ ನಿರ್ದೇಶಕ ಡಾ|ಶ್ರೀಕಾಂತ ರಾವ್ ಅವರು ಸಮ್ಮೇಳನವನ್ನು ಉದ್ಘಾಟಿಸಿದರು. ಎಂಐಟಿ ಜಂಟಿ ನಿರ್ದೇಶಕ ಡಾ|ಬಿ.ಎಚ್.ವಿ. ಪೈ ಅಧ್ಯಕ್ಷತೆ ವಹಿಸಿದ್ದರು. ವಿಯೆಟ್ನಾಮ್ನ ಡಾ|ತುವಾನ್ ಮುಖ್ಯ ಅತಿಥಿಗಳಾಗಿದ್ದರು. ಸಂಚಾಲಕ ಡಾ|ಪ್ರೇಮಾ ಕೆ.ವಿ. ಸ್ವಾಗತಿಸಿದರು. ತರ್ಮೆಕ್ಸ್ ಲಿ.ನ ಪ್ರೊ|ಡಾ|ನಾಗೇಶ್ ಕಿಣಿ ದಿಕ್ಸೂಚಿ ಭಾಷಣ ಮಾಡಿದರು. ವಿಯೆಟ್ನಾಮ್, ಸ್ವಿಟ್ಸರ್ಲಂಡ್, ಬೆಲ್ಜಿಯಮ್, ದಕ್ಷಿಣ ಕೊರಿಯ, ತೈವಾನ್, ಶಾಂಘಾಯ್ನಿಂದ 20 ಪ್ರಬಂಧಗಳು ಮಂಡನೆಯಾದವು. ಕರ್ನಾಟಕ, ಮಹಾರಾಷ್ಟ್ರ, ಸಿಕ್ಕಿಂ, ತಮಿಳುನಾಡು, ಉತ್ತರಪ್ರದೇಶದಿಂದ 50 ಪ್ರಬಂಧಗಳು ಮಂಡನೆಯಾದವು.