ಒಮ್ಮನಸ್ಸಿನ ಕೊರತೆ ನೀಗಿಸಲು ಸಕಾಲ
Team Udayavani, Aug 29, 2017, 8:45 AM IST
ಉಡುಪಿ: ನಮ್ಮ ದೇಶ ಈಗಾಗಲೇ ಬಹಳಷ್ಟು ಎತ್ತರಕ್ಕೆ ಏರಬೇಕಾಗಿತ್ತು. ಒಮ್ಮನಸ್ಸಿನ ಕೊರತೆಯಿಂದ ಅದು ಸಾಧ್ಯವಾಗಲಿಲ್ಲ. ಆ ಕೊರತೆಯನ್ನು ನಾವು ಇನ್ನಾದರೂ ಭರ್ತಿ ಮಾಡಿಕೊಳ್ಳಬೇಕು. ಜಗತ್ತಿನಲ್ಲಿ ಎಲ್ಲಿ ಹೋದರೂ ನಮ್ಮ ದೇಶಕ್ಕೆ ಗೌರವ ಇದೆ. ದೇಶ ನಿಧಾನವಾಗಿ ಹೆಜ್ಜೆ ಮುಂದೆ ಇಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನ ಕಾರ್ಯ ದರ್ಶಿ ಸಂತೋಷ್ ಹೇಳಿದರು.ಅವರು ಸೋಮವಾರ ಕಡಿಯಾಳಿ ಕಾತ್ಯಾಯನೀ ಮಂಟಪದಲ್ಲಿ ಕಡಿಯಾಳಿಯ ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 51ನೇ ವರ್ಷದ ಗಣೇಶೋತ್ಸವ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸನಾತನವಾದ ಧರ್ಮ ನಮ್ಮದು. ಗಣಪತಿಯ ಲಕ್ಷಣವೇ ಸೃಜನ ಶೀಲತೆ. ಜಗತ್ತಿನ ವಿವಿಧೆಡೆ ಪೂಜಿಸಲ್ಪಡುವ ದೇವ ಗಣಪತಿಯಾಗಿದ್ದಾನೆ ಎಂದರು.
ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ. ವಸಂತ ಭಟ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ರಘುಪತಿ ಭಟ್, ಭಾರತ್ ವಿಕಾಸ್ ಪರಿಷತ್ ಭಾರ್ಗವ ಶಾಖೆ ಅಧ್ಯಕ್ಷ ಕೆ. ರಘುಪತಿ ಉಪಾಧ್ಯ ಉಪಸ್ಥಿತರಿದ್ದರು. ಆಸರೆಯ ಚೆಕ್ ಮತ್ತು ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ಮಾಡಲಾಯಿತು.
ಪ್ರ. ಕಾರ್ಯದರ್ಶಿ ರಾಘವೇಂದ್ರ ಕಿಣಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸತೀಶ್ ಕುಲಾಲ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ