ಶಂಕರಪುರ ಮಲ್ಲಿಗೆ ದರ ಭಾರೀ ಕುಸಿತ; ಅಟ್ಟೆಗೆ 70 ರೂ.!


Team Udayavani, Jun 7, 2018, 2:10 AM IST

mallige-600.jpg

ಶಿರ್ವ: ಹೆಸರಾಂತ ಶಂಕರಪುರ ಮಲ್ಲಿಗೆ ಬೆಲೆ ಕಳೆದ ಮೂರ್ನಾಲ್ಕು ದಿನಗಳಿಂದ ಬೇಡಿಕೆ ಇಲ್ಲದ ಪರಿಣಾಮ ಭಾರೀ ಕುಸಿತ ಕಂಡಿದೆ. ಸೋಮವಾರ ಅಟ್ಟೆಗೆ 90 ರೂ. ಇದ್ದರೆ, ಮಂಗಳವಾರ 70 ರೂ. ಮತ್ತು ಬುಧವಾರವೂ 70 ರೂ. ದರ ಇದ್ದು, ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.

ಬೆಳೆಗಾರರ ಸಂಕಷ್ಟ
ಉಡುಪಿ ತಾಲೂಕಿನ 10 ಗ್ರಾಮಗಳಲ್ಲಿ ಸುಮಾರು 5000 ಮಲ್ಲಿಗೆ ಬೆಳೆಗಾರರಿದ್ದು, ಸುಮಾರು 103 ಹೆಕ್ಟೇರ್‌ ಪ್ರದೇಶದಲ್ಲಿ ಮಲ್ಲಿಗೆ ಬೆಳೆಯಲಾಗುತ್ತಿದೆ. ಇಲ್ಲಿ ಉತ್ತಮ ದರವಿರುವಾಗ ಬೆಳೆ ಇರುವುದಿಲ್ಲ, ಬೆಳೆ ಇರುವಾಗ ದರ ಇರುವುದಿಲ್ಲ ಹೀಗಾಗಿ ಮಲ್ಲಿಗೆ ಬೆಳೆಗಾರರಿಗೂ ಸಂಕಷ್ಟ ತಪ್ಪಿದ್ದಲ್ಲ. 800 ಹೂಗಳನ್ನು ಪೋಣಿಸಿದಾಗ 1 ಚೆಂಡು ಹೂ, 4 ಚೆಂಡು ಸೇರಿದರೆ 1 ಅಟ್ಟೆ ಹೂವು ಎಂದು ನಿಗದಿ. ಒಂದು ಅಟ್ಟೆಗೆ ಗರಿಷ್ಠ ಎಂದರೆ 820ರೂ.ಸಿಗುತ್ತದೆ. ಬೇಡಿಕೆ ಎಷ್ಟೇ ಹೆಚ್ಚಾದರೂ ಈ ದರವೇ ಅಂತಿಮ. ಆದರೆ ಕನಿಷ್ಠ ದರ ಎಂದಿಲ್ಲ. ಅತಿ ಹೆಚ್ಚು ಬೇಡಿಕೆ ಇರುವ ಸಂದರ್ಭ ಮಲ್ಲಿಗೆ ಮಾರಾಟಗಾರರು ಮಲ್ಲಿಗೆ ಹೂವನ್ನು ರೂ.1,000 ದಿಂದ 2000 ರೂ.ವರೆಗೂ ಮಾರುತ್ತಾರೆ. ಆದರೆ ಬೆಳೆಗಾರರಿಗೆ ಸಿಗುವುದು 820 ರೂ. ಮಾತ್ರ.

ದರ ಕುಸಿತ ಯಾಕೆ? 
ಮಳೆ-ಬಿಸಿಲಿನ ನಡುವೆ ಮಲ್ಲಿಗೆ ಇಳುವರಿ ಹೆಚ್ಚಾಗಿದೆ. ಈಗ ಜಾತ್ರೆ ಉತ್ಸವಾದಿಗಳಿಲ್ಲ. ಮೌಡ್ಯ ಹಿನ್ನೆಲೆಯಲ್ಲಿ ಯಾವುದೇ ಶುಭ ಸಮಾರಂಭಗಳೂ ಇಲ್ಲ. ಇನ್ನು ದೂರದ ಊರುಗಳಾದ ಮುಂಬಯಿ ವಿದೇಶಗಳಿಗೂ ಕಡಿಮೆ ಪ್ರಮಾಣದಲ್ಲಿ ರವಾನೆಯಾಗುತ್ತಿದೆ. ಆದ್ದರಿಂದ ಬೆಲೆ ವ್ಯಾಪಕ ಕುಸಿತ ಕಂಡಿದೆ.  


ಕನಿಷ್ಠ ದರ ನಿಗದಿ ಬೇಕು 

ಮಲ್ಲಿಗೆ ಅಟ್ಟೆಗೆ ಕನಿಷ್ಠವೆಂದರೂ 200 ರೂ. ನಿಗದಿಪಡಿಸಬೇಕು ಎಂಬುದು ಕೃಷಿಕರ ಒತ್ತಾಯ. ಕಾರಣ ಹೂಕಟ್ಟುವವರ ಅಭಾವದಿಂದಾಗಿ 1 ಚೆಂಡು ಹೂವು ಕಟ್ಟಲು 20 ರೂ.ನಂತೆ 1 ಅಟ್ಟೆಗೆ 80 ರೂ. ನೀಡಬೇಕು. ಇದರ ಹಗ್ಗವೂ ದುಬಾರಿ. ಬಾಳೆಯ ಹಗ್ಗದ ಬೆಲೆಯೂ ಸೇರಿದಾಗ ಮಾರುಕಟ್ಟೆ ಬೆಲೆಗಿಂತ ಖರ್ಚು ಹೆಚ್ಚಾಗಿ ಬೆಳೆಗಾರನಿಗೆ ನಷ್ಟವೇ ಆಗುತ್ತದೆ. ಇನ್ನು ಕೃಷಿಕ ದಿನಕ್ಕೆ 5 ಗಂಟೆ ಕೆಲಸ ಮಾಡಬೇಕು. ಇದರೊಂದಿಗೆ ಗಿಡಗಳಿಗೆ ರೋಗಬಾಧೆ, ಗೊಬ್ಬರ ಪೂರೈಕೆಯೂ ಅಗತ್ಯವಿದ್ದು ಶ್ರಮಕ್ಕೆ ಪ್ರತಿಫ‌ಲವೇನು? ಎಂದು ಕೃಷಿಕರು ಪ್ರಶ್ನಿಸುತ್ತಾರೆ. ಅಲ್ಲದೇ ಇತರ ಬೆಳೆಗಳಿಗೆ ಸಿಗುವ ವಿಮಾ ಪರಿಹಾರ ಇದಕ್ಕೂ ಸಿಗಬೇಕು ಎಂದು ಕೃಷಿಕರು ಆಗ್ರಹಿಸುತ್ತಾರೆ.

ಬೇಡಿಕೆಗೆ ಅನುಗುಣವಾಗಿ ದರ
ಮಳೆ ಬಂದು ಮಲ್ಲಿಗೆ ಹೂವು ಉತ್ಪಾದನೆ ಜಾಸ್ತಿ ಆಗಿದೆ. ಶುಭ ಸಮಾರಂಭಗಳಿಲ್ಲದೆ ಹೂವಿಗೆ ಬೇಡಿಕೆ ಕಡಿಮೆಯಾಗಿ ದರ ಕುಸಿತ ಕಂಡಿದೆ. ಹೂವಿನ ಬೇಡಿಕೆಗನುಗುಣವಾಗಿ ದರ ನಿಗದಿಯಾಗುತ್ತದೆ. ಮಲ್ಲಿಗೆ ಬೆಳೆ ಕಡಿಮೆಯಾಗಿ ಶುಭ ಸಮಾರಂಭಗಳು ಪ್ರಾರಂಭವಾದಲ್ಲಿ ದರ ಹೆಚ್ಚಾಗಲಿದೆ.
– ವಿನ್ಸೆಂಟ್‌ ರೊಡ್ರಿಗಸ್‌,  ಶಂಕರಪುರ ಮಲ್ಲಿಗೆ ವ್ಯಾಪಾರಿ

ಮಧ್ಯವರ್ತಿಗಳ ಹಾವಳಿ
ಮಧ್ಯವರ್ತಿಗಳ ಹಾವಳಿಯಿಂದಾಗಿ ಬೆಳೆಗಾರರಿಗೆ ಉತ್ತಮ ದರ ಸಿಗುತ್ತಿಲ್ಲ. ಮಲ್ಲಿಗೆ ಬೆಳೆಗಾರರು ಲಾಭವಿಲ್ಲದೆ ಪರದಾಡುತ್ತಿದ್ದು ಮಾರುಕಟ್ಟೆ ವ್ಯವಸ್ಥೆ ಬದಲಾಗಬೇಕಿದೆ.
– ವೈಲೆಟ್‌ ಕ್ಯಾಸ್ತಲಿನೊ, ಪಂಜಿಮಾರು, ಮಲ್ಲಿಗೆ ಬೆಳೆಗಾರ್ತಿ

ರೈತ ಉತ್ಪಾದಕ ಕಂಪೆನಿ
ಮಲ್ಲಿಗೆ ಬೆಳೆಗಾರರ ಸಂಕಷ್ಟಕ್ಕೆ ‘ರೈತ ಉತ್ಪಾದಕ ಕಂಪೆನಿ’ ಸ್ಥಾಪಿಸುವುದರ ಮೂಲಕ ಉತ್ಪಾದನೆಗೆ ಬೇಕಾದ ತಂತ್ರಜ್ಞಾನ, ಸಹಾಯಧನ ಮತ್ತು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ಮಲ್ಲಿಗೆ ಕೃಷಿಯನ್ನು ಲಾಭದಾಯಕವನ್ನಾಗಿ ಮಾಡಬೇಕು. ಇದಕ್ಕೆ ಮಲ್ಲಿಗೆ ಬೆಳೆಗಾರರ ಸಹಕಾರ ಬೇಕಿದೆ.
– ಸಂಜೀವ ನಾಯ್ಕ, ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಉಡುಪಿ

ಮಲ್ಲಿಗೆ ದರ (ಅಟ್ಟೆಗೆ)
ಸೋಮವಾರ :
90 ರೂ.
ಮಂಗಳವಾರ : 70 ರೂ.
ಬುಧವಾರ : 70 ರೂ.

— ಸತೀಶ್ಚಂದ್ರ ಶೆಟ್ಟಿ, ಶಿರ್ವ

ಟಾಪ್ ನ್ಯೂಸ್

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.