ಮಾದರಿಯಾಗಿ ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇಗುಲ ನಿರ್ಮಾಣ
Team Udayavani, May 24, 2022, 12:41 AM IST
ಉಡುಪಿ: ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇಗುಲದಲ್ಲಿ ಜೂ. 1ರಿಂದ 10ರ ತನಕ ನಡೆಯ ಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಗತಕಾಲದ ಇತಿಹಾಸ ಮರುಕಳಿಸುವಂತೆ ಅತ್ಯಂತ ವೈಭವೋ
ಪೇತವಾಗಿ ಸಮಗ್ರ ಜೀರ್ಣೋ ದ್ಧಾರ ಕಾಮಗಾರಿ ಸಾಗುತ್ತಿದೆ.
ಇತಿಹಾಸ
ತೌಳವ ರಾಜ ರಾಮಭೋಜ ಪುತ್ರಕಾ ಮೇಷ್ಠಿ ಮಾಡಿದ್ದು, ಆಗ ಪ್ರೇರಣೆಯಾದಂತೆ ನಾರಾಯಣನ ವಿಶೇಷ ಸಾನ್ನಿಧ್ಯ
ವನ್ನು ಪ್ರತಿಷ್ಠಾಪನೆ ಮಾಡಿದರು. ಅದು ಅನಂತೇಶ್ವರ ದೇಗುಲ. ಅಲ್ಲದೆ ಅನಂತೇಶ್ವರ ದೇಗುಲದ ಸುತ್ತಮುತ್ತ ನಾಲ್ಕು ದುರ್ಗೆಯ ದೇವಾಲಯಗಳನ್ನು ಸ್ಥಾಪಿಸಿದ. ಅದರಲ್ಲೊಂದು ಕಡಿಯಾಳಿ ದೇಗುಲ ಎನ್ನುವುದು ಪ್ರತೀತಿ. ಬೈಲೂರು ಮಹಿಷಮರ್ದಿನೀ, ಕನ್ನರ್ಪಾಡಿ ಜಯದುರ್ಗೆ, ಪುತ್ತೂರು ದುರ್ಗಾ ಪರಮೇಶ್ವರೀ ಉಳಿದ ಮೂರು ದೇಗುಲಗಳು.
ಕೃಷ್ಣಮಠದ ನಂಟು
ಉಡುಪಿ ಶ್ರೀಕೃಷ್ಣ ಮಠಕ್ಕೂ ಕಡಿಯಾಳಿ ದೇಗುಲಕ್ಕೂ ನಿಕಟ ಸಂಬಂಧವಿದೆ. ಪರ್ಯಾಯ ಪೀಠ ವನ್ನೇರುವ ಸ್ವಾಮಿಗಳು ಮೊದಲು ತಾಯಿಯ ಬಳಿ ಬಂದು ಪ್ರಾರ್ಥನೆ ಸಲ್ಲಿಸುವುದು ಸಂಪ್ರ ದಾಯ. ಪ್ರತೀ ಶುಕ್ರವಾರ 12 ಸುವಾಸಿನಿಯರ ಸಮಾರಾಧನೆಯನ್ನು ಈ ದೇಗುಲದಲ್ಲಿ ನಡೆಸಿಕೊಂಡು ಬಂದಿದ್ದಾರೆ.
ಜೀರ್ಣೋದ್ಧಾರ ಪ್ರಕ್ರಿಯೆ
2018ರ ಜ. 24ರಂದು ಹಿಂದಿನ ಜೀರ್ಣೋದ್ಧಾರ ಸಮಿತಿಯಿಂದ ಪ್ರಾರಂಭಗೊಂಡು ದೇವಸ್ಥಾನದ ಸುತ್ತು ಪೌಳಿ, ಹೊರಾಂಗಣ, ಸುಬ್ರಹ್ಮಣ್ಯ ಗುಡಿ, ನಾಗಬನ, ನಂದಿ ಕೋಣ ಗುಡಿಯನ್ನು ಸಂಪೂರ್ಣ ಕೆಡವಲಾಗಿತ್ತು. ಇದರಲ್ಲಿ ನಂದಿಕೋಣ ಗುಡಿಯನ್ನು ನವೀಕರಿಸ ಲಾಗಿದೆ. ಆದರೆ ಅತೀ ಪ್ರಮುಖವಾದ ಸುತ್ತು ಪೌಳಿ, ಪ್ರಾಂಗಣದ ಕಾಮಗಾರಿಯು ಪ್ರಾರಂಭವಾಗದೆ ಭಕ್ತರಿಗೆ ಭಾರೀ ತೊಂದರೆಯಾಗುತ್ತಿತ್ತು. ಹೀಗಾಗಿ ನೂತನ ದೇವಸ್ಥಾನ ಸಮಿತಿಯ ಕೋರಿಕೆಯಂತೆ ಸಮಸ್ತ ಗ್ರಾಮಸ್ಥರ ಸಭೆ ನಡೆಸಿ 2020ರ ಜ. 22ರಂದು ಶಾಸಕ ಕೆ. ರಘುಪತಿಭಟ್ ಗೌರವಾಧ್ಯಕ್ಷರಾಗಿ, ಶ್ರೀನಾಗೇಶ್ ಹೆಗ್ಡೆ ಅಧ್ಯಕ್ಷರಾಗಿ, ಕೆ. ರಾಘವೇಂದ್ರ ಕಿಣಿ ಪ್ರಧಾನ ಕಾರ್ಯದರ್ಶಿಯಾಗಿ 17 ಮಂದಿ ಸಮಿತಿ ಸದಸ್ಯ ರಿರುವ ನೂತನ ಜೀರ್ಣೋದ್ಧಾರ ಸಮಿತಿಯನ್ನು ಆರಿಸಲಾಯಿತು. ಇದರಂತೆ ರಾಜ್ಯ ಸರಕಾರ 2021ರ ಫೆ. 25ರಂದು ಸಮಿತಿ ರಚಿಸಿ ಆದೇಶ ಹೊರಡಿಸಿತ್ತು.
ಗ್ರಾಮಸ್ಥರ ಕರಸೇವೆ
ಕರಸೇವೆ ಎಲ್ಲ ದೇಗುಲಗಳಲ್ಲಿ ಸಾಮಾನ್ಯವಾಗಿ ನಡೆಯುತ್ತದೆ. ಆದರೆ ಈ ದೇಗುಲದಲ್ಲಿ ನಿರಂತರವಾಗಿ ನಡೆಯುತ್ತಿರುವುದು ವಿಶೇಷ. ಸುಬ್ರಹ್ಮಣ್ಯ ಗುಡಿ, ಸಂಪೂರ್ಣ ಸುತ್ತುಪೌಳಿಯ ಅಡಿಪಾಯ ಕಾಮಗಾರಿ, ಬೆಡ್ ಕಾಂಕ್ರಿಟೀಕರಣ, ಪಾದೆಕಲ್ಲು ಕಟ್ಟುವುದು ಸೇರಿದಂತೆ ಸಮಸ್ತ ಕೆಲಸವನ್ನು 300-400 ಗ್ರಾಮಸ್ಥರು ದಿನನಿತ್ಯ ಮಾಡಿರುವುದು ವಿಶೇಷ. ಕೋವಿಡ್ ಸಂದರ್ಭದಲ್ಲೂ ದಿನಾಲು ಸಂಜೆ 4ರಿಂದ ರಾತ್ರಿ 9ರ ತನಕ 46 ದಿನಗಳ ಕರಸೇವೆ ಮಾಡಿದ್ದಾರೆ. ಈಗಲೂ ನೂರಾರು ಭಕ್ತರು ಕರಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಬಾಡಿಗೆ ರಹಿತ ಕಲ್ಯಾಣ ಮಂಟಪ
ಡಾ| ಕಟ್ಟೆ ರವಿರಾಜ್ ವಿ. ಆಚಾರ್ಯರ ನೂತನ ವ್ಯವಸ್ಥಾಪನ ಮಂಡಳಿ ನೇತೃತ್ವದಲ್ಲಿ 10 ಸಾವಿರ ಚದರ ಅಡಿಯ ನೂತನ ಶರ್ವಾಣಿ ಕಲ್ಯಾಣ ಮಂಟಪ ನಿರ್ಮಾಣಗೊಳ್ಳುತ್ತಿದೆ. ಇದನ್ನು ವಿವಾಹ ಮತ್ತು ಇನ್ನಿತರ ಶುಭ ಸಮಾರಂಭಗಳಿಗೆ ಸಾರ್ವಜನಿಕರಿಂದ ಬಾಡಿಗೆ ಪಡೆಯದೆ ಉಚಿತವಾಗಿ ನೀಡಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ