ಹಿರೇಮಹಾಲಿಂಗೇಶ್ವರ ದೇಗುಲ ಕೆರೆ ಸ್ವತ್ಛತೆ
Team Udayavani, May 27, 2019, 1:38 PM IST
ಕೋಟ: ಸಾವಿರಾರು ವರ್ಷ ಇತಿಹಾಸವಿರುವ ಕೋಟ ಶ್ರೀ ಹಿರೇ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿಯಲ್ಲಿ ಹೂಳು ತುಂಬಿ ನೀರು ಕಲುಷಿತವಾಗುವ ಹಂತ ತಲುಪಿದ್ದು ಹೀಗಾಗಿ ಮೇ 26ರಂದು ಸ್ಥಳೀಯ ನೂರಾರು ಮಂದಿ ಕರಸೇವಕರು ಶ್ರಮದಾನದ ಮೂಲಕ ಇದನ್ನು ಸ್ವತ್ಛಗೊಳಿಸಿದರು.
ಈ ಸಂದರ್ಭ ಸ್ಥಳೀಯ ಹತ್ತಾರು ಸಂಘಟನೆಗಳ ಸುಮಾರು 250ಕ್ಕೂ ಹೆಚ್ಚು ಸ್ವಯಂ ಸೇವಕರು ಜಾತಿ, ಧರ್ಮ, ಪಕ್ಷ, ಸಂಘಟನೆ ಬೇಧವಿಲ್ಲದೆ ಐತಿಹಾಸಿಕ ರೀತಿಯಲ್ಲಿ ಶ್ರಮದಾನ ನಡೆಸಿ ಪುಷ್ಕರಣಿಯ ಹೂಳನ್ನು ಮೇಲೆತ್ತಿದರು.
ಸ್ಥಳೀಯ ಅಮೃತೇಶ್ವರೀ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್, ಹಿರೇ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗಣೇಶ್ ಭಟ್ ಮುಂತಾದ ಗಣ್ಯರು ನೇತೃತ್ವ ವಹಿಸಿದ್ದರು.
ಸುಮಾರು ನಲವತ್ತು ವರ್ಷದ ಹಿಂದೆ ಈ ಇತಿಹಾಸ ಪ್ರಸಿದ್ಧ ಕಲ್ಯಾಣಿಯ ಹೂಳು ತೆಗೆಯುವ ಕೆಲಸ ನಡೆದಿತ್ತು. ಇದೀಗ ಹಲವು ವರ್ಷಗಳ ಅನಂತರ ಮತ್ತೆ ಐತಿಹಾಸಿಕ ಕಾರ್ಯ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ