ಲಾರಿ-ಟೆಂಪೋ ಮಾಲಕರ ಪ್ರತಿಭಟನೆ; ಮತ ಬಹಿಷ್ಕಾರ
Team Udayavani, Apr 4, 2019, 6:30 AM IST
ಉಡುಪಿ: ಉಡುಪಿ ಜಿಲ್ಲಾ ಲಾರಿ ಮಾಲಕರ ಸಂಘದ ಕಲ್ಯಾಣಪುರ ಸಂತೆಕಕಟ್ಟೆ ವಲಯದ ವತಿಯಿಂದ ಎ. 3ರಂದು ಕಲ್ಯಾಣಪುರ ಸಂತೆಕಟ್ಟೆಯ ರಾಷ್ಟ್ರೀಯ ಹೆದ್ದಾರಿಯ ಸಮೀಪದ ಸರ್ವಿಸ್ ರಸ್ತೆಯಲ್ಲಿ ಸರಕು ಸಾಗಾಟ ಲಾರಿಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದರು.
ಮರಳು ಸಾಗಾಟಕ್ಕೆ ಅನುಮತಿ ಇಲ್ಲವಾದರೂ ಇನ್ನಿತರ ಕಟ್ಟಡ ಸಾಮಾಗ್ರಿಗಳಾದ ಕೆಂಪು ಮಣ್ಣು, ಕೆಂಪುಕಲ್ಲು, ಪಾದೆಕಲ್ಲು, ಜಲ್ಲಿಕಲ್ಲು, ಇಟ್ಟಿಗೆ, ಹಲೋಬ್ಲಾಕ್ಸ್ ಎಂ. ಸ್ಯಾಂಡ್ಗಳನ್ನು ಸಾಗಾಟಕ್ಕೆ ಅನುಮತಿ ಪಡೆದಿದ್ದರೂ ಅಧಿಕಾರಿ ವರ್ಗದವರು ಕಳೆದ ಹಲವಾರು ತಿಂಗಳಿನಿಂದ ನೀಡುತ್ತಿರುವ ಕಿರುಕುಳದಿಂದ ಬೇಸತ್ತು ಅದನ್ನು ವಿರೋಧಿಸಿ 100 ಲಾರಿ 50ರಷ್ಟು ಟೆಂಪೋ ಮಾಲಕರು ತಮ್ಮ ವಾಹನವನ್ನು ರಸ್ತೆಗೆ ಇಳಿಸದೆ ಅನಿರ್ದಿಷ್ಟ ಅವಧಿ ಮುಷ್ಕರ ನಡೆಸಲು ಆರಂಭಿಸಿದ್ದಾರೆ . ಅಲ್ಲದೆ ಎ.18ರಂದು ನಡೆಯುವ ಚುನಾವಣೆಯಲ್ಲಿ ಮತ ಬಹಿಷ್ಕಾರ ಮಾಡುವುದಾಗಿ ನಿರ್ಧರಿಸಿದ್ದಾರೆ. ಇದರಿಂದಾಗಿ 150 ಲಾರಿ, ಟೆಂಪೋ ಮಾಲಕರ ಚಾಲಕರು ಹಾಗೂ ವಾಹನಗಳಿಗೆ ತುಂಬಿಸುವವರ ಕುಟುಂಬದವರು ಬೀದಿಪಾಲಾಗುವ ಸಾಧ್ಯತೆ ಇದೆ ಎಂದು ಈ ಸಂದರ್ಭ ಪ್ರತಿಭಟನಕಾರರು ತಿಳಿಸಿದರು.
ಸಂಘದ ಉಮೇಶ ಶೆಟ್ಟಿ, ರವಿ ಪೂಜಾರಿ ಉಪ್ಪೂರು, ಲೋಕೇಶ್ ಮೆಂಡನ್, ಯಾದವ ಪೂಜಾರಿ ನಯಂಪಳ್ಳಿ, ಸುಧಾಕರ ಪೂಜಾರಿ ಮೂಡುಕುದ್ರು, ಕೃಷ್ಣ ಶೆಟ್ಟಿ, ಅಶೋಕ ಕರ್ನೇಲಿಯೋ ಅಂಬಾಗಿಲು, ಉಮೇಶ ಪೂಜಾರಿ, ಮನೋಹರ ಕುಂದರ್, ಅನಿಲ್ ಡಿ’ಸೋಜಾ, ಸಂತೋಷ ಪೂಜಾರಿ, ಎಲ್ಲ ಮಾಲಕರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!