ಸೋರುತ್ತಿದೆ ಗಂಗೊಳ್ಳಿ ಮೀನುಗಾರಿಕೆ ಬಂದರಿನ ಕಟ್ಟಡ


Team Udayavani, Jul 6, 2018, 6:00 AM IST

0107kdpp1a.jpg

ಗಂಗೊಳ್ಳಿ: ಉಡುಪಿ ಜಿಲ್ಲೆಯ ಎರಡನೇ ಅತಿ ದೊಡ್ಡ ಮೀನುಗಾರಿಕೆ ನೆಲೆಯಾಗಿರುವ ಗಂಗೊಳ್ಳಿಯ ಮೀನುಗಾರಿಕೆ ಬಂದರಿನ ಕಟ್ಟಡದ ಶೀಟು ಹಾರಿ ಹೋಗಿ 2 ತಿಂಗಳಾಗಿದೆ. ಮಳೆಗೆ ನೀರು ಸೋರುತ್ತಿದ್ದರೂ, ಇಲಾಖೆ ಮಾತ್ರ ಇನ್ನೂ ನಿದ್ರಾವಸ್ಥೆಯಲ್ಲಿದೆ. 

ಗಂಗೊಳ್ಳಿ ಮೀನುಗಾರಿಕೆ 
ಬಂದರಿನಲ್ಲಿ  2 ಕಟ್ಟಡಗಳಿದ್ದು, ಅದನ್ನು ಬೇರೆ ಮೀನುಗಾರ ಸಂಘ ಗಳು, ಸಹಕಾರಿ ಸಂಸ್ಥೆಗಳಿಗೆ ಬಾಡಿಗೆ ನೀಡಲಾಗಿದೆ. ತಿಂಗಳಿಗೆ 12 ಸಾವಿರ ರೂ. ಮಾಸಿಕ ಬಾಡಿಗೆ ಹಾಗೂ ಪ್ರತ್ಯೇಕವಾಗಿ ವಿದ್ಯುತ್‌ ಬಿಲ್‌ನ್ನು ಸಂಗ್ರಹಿಸುತ್ತಿದೆ. ತಲಾ 9ರಂತೆ ಒಟ್ಟು 18 ಕೋಣೆಗಳನ್ನು ಬಾಡಿಗೆಗೆ ನೀಡಲಾಗಿದೆ. 

2 ತಿಂಗಳಾಯಿತು…
ಮೇ ಪ್ರಾರಂಭದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಬಂದ ಒಂದೆರಡು ಗಾಳಿ- ಮಳೆಗೆ ಇಲ್ಲಿನ ಶೀಟುಗಳು ಹಾರಿ ಹೋಗಿದ್ದು,ಕೆಲವು ಶೀಟುಗಳಿಗೆ ಹಾನಿಯಾಗಿವೆ. ಆಗಲೇ ಇದನ್ನು ಸರಿ ಮಾಡಲು ಮೀನುಗಾರಿಕೆ ಇಲಾಖೆ ಮುಂದಾಗುತ್ತಿದ್ದರೆ, ಈಗ ಈ ಸೋರುವ ಪರಿಸ್ಥಿತಿ ಬರುತ್ತಿರಲಿಲ್ಲ. ಈಗಿನ್ನು ಮಳೆಗಾಲ  ಆರಂಭಗೊಂಡಿದ್ದು, ದುರಸ್ತಿ ಮಾಡುವುದು ಅಸಾಧ್ಯ. 

ಈಗ ಮೀನುಗಾರಿಕೆ  ರಜೆ ಇರುವುದ ರಿಂದ ಅಷ್ಟೇನೂ ಸಮಸ್ಯೆ ಆಗುತ್ತಿಲ್ಲ. ಆದರೆ ಇನ್ನೊಂದು ತಿಂಗಳಲ್ಲಿ ಅಂದರೆ ಆಗಸ್ಟ್‌ ಮೊದಲ ವಾರದಲ್ಲಿ ಮತ್ತೆ ಮೀನುಗಾರಿಕೆ ಋತು ಆರಂಭವಾಗಲಿದ್ದು, ಆಗ ಮೀನುಗಾರರಿಗೆ ಸಮಸ್ಯೆಯಾಗಲಿದೆ. 

381 ಕೋ.ರೂ. ಆದಾಯ
ಕಳೆದ ಮೀನುಗಾರಿಕೆ  ಋತುವಿನಲ್ಲಿ 31,115 ಮೆಟ್ರಿಕ್‌ ಟನ್‌ ಮೀನು ಸಂಗ್ರಹ, 381 ಕೋ. ರೂ. ಆದಾಯ ಬಂದಿದೆ. ಆದರೂ ಈ ಬಂದರನ್ನು ಮೇಲ್ದರ್ಜೆಗೇರಿಸಲು ಸಂಬಂಧಪಟ್ಟ ಜನಪ್ರತಿನಿಧಿ ಗಳಾಗಿ, ಇಲಾಖೆಯಾಗಲಿ ಮುಂದಾಗುತ್ತಿಲ್ಲ. ಈ ಬಂದರಿನ ಕಟ್ಟಡಗಳ ನಿರ್ಮಾಣವಾಗಿ ಸುಮಾರು 15 ವರ್ಷಗಳು ಕಳೆದರೂ, ಇನ್ನೂ ಛಾವಣಿಗಳ ದುರಸ್ತಿ ಕಾರ್ಯ ಒಮ್ಮೆಯೂ ಆಗಿಲ್ಲ. 

 ಕಿಂಚಿತ್ತೂ ಕಾಳಜಿಯಿಲ್ಲ
ತಿಂಗಳಿಗೆ ಸಾವಿರಾರು ರೂ. ಬಾಡಿಗೆ ಪಡೆಯುತ್ತಿದ್ದರೂ, ಗಂಗೊಳ್ಳಿಯ ಬಂದರಿನ ಅಭಿವೃದ್ಧಿ ಬಗ್ಗೆ ಮೀನುಗಾರಿಕಾ ಇಲಾಖೆಗೆ ಕಿಂಚಿತ್ತೂ ಕಾಳಜಿಯಿಲ್ಲ.  ಆ ಶೀಟುಗಳಿಗೆ ಹಾನಿಯಾಗಿ ತಿಂಗಳುಗಳೇ ಕಳೆದಿವೆ. ಆದರೂ ಇನ್ನೂ ದುರಸ್ತಿ ಪಡಿಸಲು ಮುಂದಾಗುತ್ತಿಲ್ಲ. ಇಲ್ಲಿನ ಸಮಸ್ಯೆಗಳ ಕುರಿತು ಸರಕಾರದ ಗಮನಕ್ಕೂ ತರುತ್ತಿಲ್ಲ. ಆದರೆ ಮೀನುಗಾರರಿಗೆ ಮಾತ್ರ ತೊಂದರೆ ಕೊಡುತ್ತಾರೆ. 
– ರವೀಂದ್ರ ಪಟೇಲ್‌
ಮೀನುಗಾರ ಮುಖಂಡರು, ಗಂಗೊಳ್ಳಿ

ದೂರು ಕೊಟ್ಟರೂ ಪ್ರಯೋಜನವಿಲ್ಲ
ಗಂಗೊಳ್ಳಿ ಬಂದರಿನ ದುಃಸ್ಥಿತಿಯ ಬಗ್ಗೆ ಇಲಾಖೆಗೆ  ಸಾಕಷ್ಟು ಬಾರಿ ದೂರು ನೀಡಿದ್ದೇವೆ. 
-ಮೋಹನ್‌ ಖಾರ್ವಿ
ಹಸಿಮೀನು ಮಾರಾಟಗಾರರ ಸಂಘದ ಅಧ್ಯಕ್ಷ

ಇಲಾಖೆಗೆ ಪ್ರಸ್ತಾವನೆ 
ಸಲ್ಲಿಸಲಾಗಿದೆ
ಬಂದರಿನಲ್ಲಿರುವ ಕಟ್ಟಡದ ಛಾವಣಿ ದುರಸ್ತಿಗೆ ಬಂದರು ಮತ್ತು ಮೀನುಗಾರಿಕೆ  ಇಲಾಖೆಗೆ ಹಾನಿಯಾದ ಮರುದಿನವೇ ದುರಸ್ತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅವರು ಬಂದರಿನ  ಹಾನಿಯ ಪ್ರಮಾಣವನ್ನು ತಿಳಿದು, ಆ ಬಳಿಕ ಕರಡು ಸಿದ್ದಪಡಿಸಿ, ಟೆಂಡರ್‌ ಕರೆಯಬಹುದು. ಮುಂದಿನ ಮೀನುಗಾರಿಕೆ  ಋತುವಿಗೆ ಮುನ್ನ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. 
– ಅಂಜನಾದೇವಿ
ಮೀನುಗಾರಿಕಾ ಸಹಾಯಕ ನಿರ್ದೇಶಕಿ, ಗಂಗೊಳ್ಳಿ ಬಂದರು 

ಚಿತ್ರ:ಕೃಷ್ಣ ಗಂಗೊಳ್ಳಿ
– ಪ್ರಶಾಂತ್‌ ಪಾದ

ಟಾಪ್ ನ್ಯೂಸ್

car

Road Mishap: ಕಮರಿಗೆ ಉರುಳಿದ ಕಾರು… ಐದು ಮಕ್ಕಳು ಸೇರಿ ಎಂಟು ಮಂದಿ ಮೃತ್ಯು

Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ

Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

gajanur3

ತುಂಗಾ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳ… ಮತ್ತೆ ಜಲಾವೃತಗೊಂಡ ಪತ್ತೆಪೂರ್ ರಸ್ತೆ

g t devegowda

Mysore; ನಾನು ಮುಡಾದಿಂದ ಎಲ್ಲಿಯೂ ನಿವೇಶನ ಪಡೆದುಕೊಂಡಿಲ್ಲ: ಜಿ ಟಿ ದೇವೇಗೌಡ

Tragedy: ಅಂದು ರೀಲ್ಸ್ ಗಾಗಿ ಚಲಿಸುವ ರೈಲಿನಲ್ಲಿ ಹುಚ್ಚಾಟ… ಇಂದು ಈ ಯುವಕನ ಸ್ಥಿತಿ ನೋಡಿ

Tragedy: ಅಂದು ರೀಲ್ಸ್ ಗಾಗಿ ಚಲಿಸುವ ರೈಲಿನಲ್ಲಿ ಹುಚ್ಚಾಟ… ಇಂದು ಈ ಯುವಕನ ಸ್ಥಿತಿ ನೋಡಿ

Desi Swara: ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಹೇಗೆ ಬಂತು?

Desi Swara: ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಹೇಗೆ ಬಂತು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Screenshot (7) copy

Thekkatte: 5 ಗ್ರಾ.ಪಂ.ಗಳ ಕಸ ವಿಲೇವಾರಿಯೇ ದೊಡ್ಡ ಸವಾಲು!

Screenshot (3) copy

Kundapura: ಮಕ್ಕಳನ್ನು ಹೊತ್ಕೊಂಡೇ ಹೊಳೆ ದಾಟಿಸಬೇಕು!ಅಮಾಸೆಬೈಲಿನ ಕುಡಿಸಾಲು ಪರಿಸರದ ಸಮಸ್ಯೆ

Nagu; ಕಂಬಳ ಕ್ಷೇತ್ರಕ್ಕೆ ಮತ್ತೊಂದು ಆಘಾತ; ಹಲವು ಪದಕ ಗೆದ್ದಿದ್ದ ‘ನಾಗು’ ಕೋಣ ಇನ್ನಿಲ್ಲ!

Nagu; ಕಂಬಳ ಕ್ಷೇತ್ರಕ್ಕೆ ಮತ್ತೊಂದು ಆಘಾತ; ಹಲವು ಪದಕ ಗೆದ್ದಿದ್ದ ‘ನಾಗು’ ಕೋಣ ಇನ್ನಿಲ್ಲ!

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Kundapura ಮೂರು ಕಡಲಾಮೆ ರಕ್ಷಣೆ

Kundapura ಮೂರು ಕಡಲಾಮೆ ರಕ್ಷಣೆ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

car

Road Mishap: ಕಮರಿಗೆ ಉರುಳಿದ ಕಾರು… ಐದು ಮಕ್ಕಳು ಸೇರಿ ಎಂಟು ಮಂದಿ ಮೃತ್ಯು

Editorial: ಯುಪಿಎಸ್ಸಿ ಪರೀಕ್ಷಾ ಸುಧಾರಣೆ ಕ್ರಮ: ಸ್ವಾಗತಾರ್ಹ ಹೆಜ್ಜೆ

Editorial: ಯುಪಿಎಸ್ಸಿ ಪರೀಕ್ಷಾ ಸುಧಾರಣೆ ಕ್ರಮ: ಸ್ವಾಗತಾರ್ಹ ಹೆಜ್ಜೆ

Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ

Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

Screenshot (7) copy

Thekkatte: 5 ಗ್ರಾ.ಪಂ.ಗಳ ಕಸ ವಿಲೇವಾರಿಯೇ ದೊಡ್ಡ ಸವಾಲು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.