![1-kanwar-msid](https://www.udayavani.com/wp-content/uploads/2024/07/1-kanwar-msid-415x233.jpg)
Manipal ಕೆವೈಸಿ ನೆಪದಲ್ಲಿ ಲಕ್ಷಾಂತರ ವಂಚನೆ
Team Udayavani, Dec 9, 2023, 12:19 AM IST
![Manipal ಕೆವೈಸಿ ನೆಪದಲ್ಲಿ ಲಕ್ಷಾಂತರ ವಂಚನೆ](https://www.udayavani.com/wp-content/uploads/2023/12/kyc-620x349.jpg)
ಮಣಿಪಾಲ: ಎಟಿಎಂ ಕಾರ್ಡ್ ವಿವರ ಪಡೆದು ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂ.ಎಗರಿಸಿದ ಘಟನೆ ನಡೆದಿದೆ.
ಬಾಲಗಂಗಾಧರ ಅವರು ಕೆನರಾ ಬ್ಯಾಂಕ್ನ ಕೆಜಿಎಫ್ ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದರು.
ಕೆವೈಸಿ ಅಪ್ಡೇಟ್ ನೆಪದಲ್ಲಿ ಯಾರೋ ಅಪರಿಚಿತ ವ್ಯಕ್ತಿ ಕರೆ ಮಾಡಿ ಖಾತೆಯ ವಿವರ, ಎಟಿಎಂ ಕಾರ್ಡ್ ವಿವರ ಹಾಗೂ ಇನ್ನಿತರ ವಿವರ ಕೇಳಿದ್ದ. ಆತನ ಮಾತನ್ನು ನಿಜವೆಂದು ನಂಬಿದ ಅವರು ಎಲ್ಲ ಮಾಹಿತಿಗಳನ್ನು ನೀಡಿದ್ದರು.
ಅನಂತರ ಅಪರಿಚಿತ ವ್ಯಕ್ತಿಯು ಬಾಲಗಂಗಾಧರ ಅವರ ಖಾತೆಯಿಂದ 3,47,500 ರೂ. ಆತನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
![1-kanwar-msid](https://www.udayavani.com/wp-content/uploads/2024/07/1-kanwar-msid-415x233.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.