ಮಾರ್ಪಳ್ಳಿಡ್ “ಕಂಡೊಡೊಂಜಿ ದಿನ’
Team Udayavani, Jul 10, 2017, 3:10 AM IST
ಉಡುಪಿ: ಮಾರ್ಪಳ್ಳಿ ಶ್ರೀಮಹಾಲಿಂಗೇಶ್ವರ ಭಜನ ಮಂಡಳಿ ಆಶ್ರಯದಲ್ಲಿ “ಕಂಡೊಡೊಂಜಿ ದಿನ’ವನ್ನು ಮಾರ್ಪಳ್ಳಿ ಗರೋಡಿ ಸಮೀಪದ ಗದ್ದೆಯಲ್ಲಿ ಜು. 9ರಂದು ಆಚರಿಸಲಾಯಿತು. ವಾಲಿಬಾಲ್, ತ್ರೋಬಾಲ್, ಹಗ್ಗಜಗ್ಗಾಟ, ಹಿಮ್ಮುಖ ಓಟ ಇತ್ಯಾದಿ ಬಗೆಬಗೆಯ ಆಟಗಳನ್ನು ಆಡಿ ಊರಿನವರು ಸಂತೋಷಪಟ್ಟರು.
ಹಿರಿಯ ಕೃಷಿಕ ಕೃಷ್ಣ ನಾಯ್ಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೊರಂಗ್ರಪಾಡಿ ಸಿ.ಎ. ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಶೇಖರ ಸುವರ್ಣ, ಕಂಬಳದ ಮನೆ ಗುರಿಕಾರ ನವೀನಚಂದ್ರ ಶೆಟ್ಟಿ, ಬಡಗಬೆಟ್ಟು ಕ್ರೆಡಿಟ್ ಕೋ
ಆಪರೇಟಿವ್ ಸೊಸೈಟಿ ಪ್ರಬಂಧಕ ಶಂಕರ ದೇವಾಡಿಗ, ನಂದಗೋಕುಲ ಯುವ ಮಂಡಲದ ಅಧ್ಯಕ್ಷ ಹರೀಶ ಎಂ., ಮಹಾಲಿಂಗೇಶ್ವರ ಯಕ್ಷಗಾನ ಕಲಾ ಮಂಡಳಿ ಅಧ್ಯಕ್ಷ ಯು.ಸದಾಶಿವ ಶೆಟ್ಟಿ, ಮಹಾಲಿಂಗೇಶ್ವರ ಚಂಡೆ ಬಳಗದ ಅಧ್ಯಕ್ಷ ಪಿ.ವೇದವ್ಯಾಸ ತಂತ್ರಿ, ಗೆಳೆಯರ ಬಳಗದ ಉಪಾಧ್ಯಕ್ಷ ವಿಶ್ವಜಿತ್ ಸಾಲ್ಯಾನ್, ನಿವೃತ್ತ ಶಿಕ್ಷಕ ಕಿಟ್ಟ ಮಾಸ್ತರ್, ಅಲೆವೂರು ಗ್ರಾ.ಪಂ. ಸದಸ್ಯರಾದ ಸುಧಾಕರ ಪೂಜಾರಿ, ಪುಷ್ಪಲತಾ, ಶಾಂತಾ ನಾಯ್ಕ, ಸುಲೋಚನಾ ನಾಯ್ಕ, ನಂದಗೋಕುಲ ಮಹಿಳಾ ಮಂಡಳಿ ಅಧ್ಯಕ್ಷೆ ರಾಜಶ್ರೀ ಐತಪ್ಪ ಅಮೀನ್, ಮಹಿಳಾ ಮಂಡಳಿ ಅಧ್ಯಕ್ಷೆ ಪ್ರಮೀಳಾ ಸುರೇಶ್ ಅವರು ಅತಿಥಿಗಳಾಗಿ ಆಗಮಿಸಿದ್ದರು.
ಮಹಾಲಿಂಗೇಶ್ವರ ಭಜನ ಮಂಡಳಿ ಅಧ್ಯಕ್ಷ ಗಣೇಶ ದೇವಾಡಿಗ ಸ್ವಾಗತಿಸಿ, ವಿಜಯ ಆರ್. ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!