ಕಾರ್ಕಳ ಉತ್ಸವ ಪ್ರತಿವರ್ಷ ನಡೆಯಲಿ: ಸಚಿವ ಆನಂದ್ ಸಿಂಗ್
Team Udayavani, Mar 19, 2022, 6:49 AM IST
ಕಾರ್ಕಳ: ಹಿಂದೂ ಸಾಮ್ರಾಜ್ಯದಲ್ಲೆ ಅತೀ ದೊಡ್ಡ ಉತ್ಸವ ವಿಜಯನಗರದ ಹಂಪಿ ಉತ್ಸವವು ಇಡೀ ರಾಜ್ಯಕ್ಕೆ ವಿಸ್ತರಿಸಿದೆ. ಅದೇ ಕಲ್ಪನೆಯಲ್ಲಿ ಕಾರ್ಕಳ ಉತ್ಸವ ಆರಂಭಿಸಿದ್ದಾರೆ. ಹಂಪಿ ಉತ್ಸವ ಮೂರು ದಿನ ನಡೆದರೆ ಸಚಿವ ಸುನಿಲ್ ಆರಂಭದಲ್ಲಿಯೇ ಹತ್ತು ದಿನ ನಡೆಸುವ ಮೂಲಕ ಎಲ್ಲರನ್ನೂ ಅಚ್ಚರಿ ಮೂಡಿಸಿದ್ದಾರೆ. ಕಾರ್ಕಳ ಉತ್ಸವ ದಸರಾ ಉತ್ಸವದಂತೆ ಪ್ರತಿ ವರ್ಷ ನಡೆಯಲಿ ಎಂದು ಜೀವಿಶಾಸ್ತ್ರ, ಪರಿಸರ, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದರು.
ಸುನಿಲ್ ಛಲಗಾರ :
ಸ್ವರಾಜ್ ಮೈದಾನದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಂಸ್ಕೃತಿ ರಕ್ಷಣೆ ನಮ್ಮ ಧರ್ಮ. ಸುನಿಲ್ ಅವರಲ್ಲಿ ಶ್ರದ್ಧೆ, ನಿಷ್ಠೆ ಇರುವುದನ್ನು ಕಂಡಿದ್ದೇನೆ. ಅವರೊಬ್ಬ ಛಲಗಾರ ಎಂದರು.
ಥೀಂ ಪಾರ್ಕ್ಗೆ 1.5 ಕೋ.ರೂ. :
ಬೈಲೂರಿನ ಪರಶುರಾಮ ಥೀಂ ಪಾರ್ಕ್ ಅಭಿವೃದ್ಧಿಗೆ 1.5 ಕೋ.ರೂ.ಗಳನ್ನು ಇದೇ ಸಂದರ್ಭ ಸಚಿವ ಆನಂದ್ ಸಿಂಗ್ ಅವರು ಘೋಷಿಸಿದರು. ಇಂಧನ ಸಚಿವ ವಿ. ಸುನಿಲ್ ಕುಮಾರ್ ಉಪಸ್ಥಿತರಿದ್ದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ| ಸಿ. ಸೋಮಶೇಖರ್, ನಿಟ್ಟೆ ಸಮೂಹ ಸಂಸ್ಥೆಗಳ ಅಧ್ಯಕ್ಷ ವಿನಯ ಹೆಗ್ಡೆ ಮಾತನಾಡಿದರು.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಪುರಸಭೆ ಅಧ್ಯಕ್ಷೆ ಸುಮಾಕೇಶವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ| ಎನ್. ಮಂಜುಳಾ, ಜಿÇÉಾಧಿಕಾರಿ ಕೂರ್ಮಾರಾವ್ ಎಂ., ಜಿ.ಪಂ. ಸಿಇಒ ಡಾ| ನವೀನ್ ಭಟ್, ಎಸ್ಪಿ ಎನ್. ವಿಷ್ಣುವರ್ಧನ್, ಅರಣ್ಯ ಇಲಾಖೆ ಅಧಿಕಾರಿ ಮನೋಜ್ ಕುಮಾರ್, ಉದ್ಯಮಿ ರಘುವೀರ್ ಶೆಟ್ಟಿ, ಕ್ಯಾ| ಗಣೇಶ್ ಕಾರ್ಣಿಕ್ ಉಪಸ್ಥಿತರಿದ್ದರು. ಸಹಾಯಕ ಕಮಿಷನರ್ ರಾಜು ಸ್ವಾಗತಿಸಿ, ಸಂಗೀತಾ ನಿರೂಪಿಸಿದರು.
ವೈಭವದ ಮೆರವಣಿಗೆ :
ಉತ್ಸವ ಮೆರವಣಿಗೆ ಅತ್ಯಂತ ವೈಭವದಿಂದ ನಡೆಯಿತು. ನಾಡಿನ ಹಾಗೂ ಹೊರರಾಜ್ಯಗಳ ಕಲಾವಿದರ ತಂಡ ಹಾಗೂ ತಾಲೂಕಿನ 34 ಗ್ರಾ.ಪಂ.ಗಳ, ಶಿಕ್ಷಣ ಸಂಸ್ಥೆಗಳ ವಿಶೇಷ
ವೇಷಭೂಷಣಗಳು ಸೇರಿ 250ಕ್ಕೂ ಹೆಚ್ಚಿನ 10 ಸಾವಿರಕ್ಕೂ ಮಿಕ್ಕಿದ ಕಲಾವಿದರ ವೇಷಭೂಷಣ ಒಳಗೊಂಡ ಮೆರವಣಿಗೆ ಬಂಡಿಮಠದಿಂದ ಸ್ವರಾಜ್ ಮೈದಾನದ ವರೆಗೆ ಸಾಗಿತು.
ಬಂಡಿಮಠದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಡೋಲು ಬಡಿದು ಚಾಲನೆನೀಡಿದರು. ಕ್ಯಾ| ಗಣೇಶ್ ಕಾರ್ಣಿಕ್, ಡಾ| ಎಂ.ಎನ್. ರಾಜೇಂದ್ರಕುಮಾರ್, ಡಾ| ಮೋಹನ ಆಳ್ವ ಅವರು ಉಪಸ್ಥಿತರಿದ್ದರು. ಕಬಡ್ಡಿ ಆಟಗಾರ ಸುಕೇಶ್ ಅವರನ್ನು ಸಮ್ಮಾನಿಸಲಾಯಿತು.
ಮಳೆಯ ಸಿಂಚನ :
ಉತ್ಸವ ಮೆರವಣಿಗೆ ಸ್ವರಾಜ್ ಮೈದಾನ ತಲುಪಿದ ತತ್ಕ್ಷಣವೇ ಮಳೆಯ ಸಿಂಚನವಾಯಿತು. ಬಿಸಿಲಿನ ತಾಪವೂ ಇದ್ದಿದ್ದರಿಂದ ಮೆರವಣಿಗೆಯಲ್ಲಿ ಸಾಗಿ ಬಂದ ಕಲಾವಿದರಿಗೆ ಮಳೆಯು ಖುಷಿ ಕೊಟ್ಟಿತ್ತಾದರೂ, ಬೃಹತ್ ವೇದಿಕೆ, ಲೈಟಿಂಗ್ಸ್ಗೆ ತೊಂದರೆಯಾಯಿತು. ಬೆಳಗ್ಗೆ ಕೃಷಿ, ಫಲಪುಷ್ಪ ಪ್ರದರ್ಶನ ಉದ್ಘಾಟನೆಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ
Bailur ಉಮಿಕ್ಕಳ ಬೆಟ್ಟದಲ್ಲಿ ಬೆಂಕಿ ಅವಘಡ; ಪರಶುರಾಮ ಥೀಮ್ಪಾರ್ಕ್ ಸುರಕ್ಷಿತ
Fraud Case ಷೇರು ಮಾರುಕಟ್ಟೆ ಹೆಸರಿನಲ್ಲಿ ಮಹಿಳೆಗೆ ವಂಚನೆ
Udupi; ಬ್ಯಾಂಕ್ ಅಧಿಕಾರಿ ಖಾತೆಯಿಂದ ಲಕ್ಷಾಂತರ ರೂ.ವರ್ಗಾವಣೆ
Agumbe Ghat; ಘನವಾಹನಗಳ ಸಂಚಾರದಿಂದ ಘಾಟಿ ಬಂದ್ ಆಗುವ ಭೀತಿ
MUST WATCH
ಹೊಸ ಸೇರ್ಪಡೆ
Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು
Maharashtra ;120 ಅಡಿ ಜಲಪಾತದಿಂದ ಹಾರಿದ ಯುವಕ ಮೃತ್ಯು: ವಿಡಿಯೋ ವೈರಲ್
HPCA; ಧರ್ಮಶಾಲಾದಲ್ಲಿ ಭಾರತದ ಮೊದಲ ಹೈಬ್ರಿಡ್ ಪಿಚ್ ಅನಾವರಣ; ಏನಿದು ಹೊಸ ಆವಿಷ್ಕಾರ?
65 ವರ್ಷದಿಂದ ದೇಶಕ್ಕೆ ಚೊಂಬು ಹಿಡಿಸಿದ್ದೆ ಕಾಂಗ್ರೆಸ್ ಸಾಧನೆ: ಹರಿಪ್ರಕಾಶ ಕೋಣೆಮನೆ
Delhi police Station: ಪೊಲೀಸ್ ಠಾಣೆ ಬಾತ್ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!