Udupi ಮತ್ಸ್ಯಾಶ್ರಯದಡಿ ಹೊಸ ಮನೆ ಬಂದಿಲ್ಲ
Team Udayavani, Dec 26, 2023, 7:15 AM IST
ಉಡುಪಿ: ವಸತಿ ರಹಿತ ಅಥವಾ ವಾಸಿಸಲು ಯೋಗ್ಯ ಮನೆ ಇಲ್ಲದ ಮೀನುಗಾರರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಇರುವ ಮತ್ಸ್ಯಾಶ್ರಯ ಯೋಜನೆಯಡಿ ಈ ಸಾಲಿನಲ್ಲಿ ಒಂದೂ ಮನೆ ಮಂಜೂರಾಗಿಲ್ಲ. ಬದಲಿಗೆ ಈ ಹಿಂದಿನ ವರ್ಷಗಳಲ್ಲಿ ಹಂಚಿಕೆಯಾಗದ ಮನೆಗಳ ಮರು ಹಂಚಿಕೆಗೆ ರಾಜ್ಯ ಸರಕಾರ ಮುಂದಾಗಿದೆ.
2006ರಲ್ಲಿ ಯೋಜನೆ ಆರಂಭಗೊಂಡಿದ್ದು, ತಾಂತ್ರಿಕ ಕಾರಣದಿಂದ ಸರಕಾರ ಮತ್ತು ಮೀನು ಗಾರಿಕೆ ಇಲಾಖೆಯು ಮತ್ಸ್ಯಾಶ್ರಯ ಯೋಜನೆಯಡಿ ವಾರ್ಷಿಕ ಬಜೆಟ್ನಲ್ಲಿ ಅನುದಾನ ಮೀಸಲಿಡಲಿಲ್ಲ. ಹಾಗಾಗಿ 2020-2021, 2021-22 ನೇ ಸಾಲಿನಲ್ಲಿ ಮನೆಯನ್ನು ಹಂಚಿಕೆ ಮಾಡಿರಲಿಲ್ಲ. 2022-23ರಲ್ಲಿ ಅವಿಭ ಜಿತ ದಕ್ಷಿಣ ಕನ್ನಡ ಜಿಲ್ಲೆ ಸಹಿತವಾಗಿ ರಾಜ್ಯಾದ್ಯಂತ 5 ಸಾವಿರ ಮನೆಗಳನ್ನು ಮಂಜೂರು ಮಾಡಲಾಗಿತ್ತು. ಅದರಲ್ಲಿ ಉಡುಪಿಗೆ 725 ಹಾಗೂ ದ.ಕ. ಜಿಲ್ಲೆಗೆ 450 ಮನೆ ಹಂಚಿಕೆ ಮಾಡಲಾಗಿತ್ತು.
ಪ್ರತೀ ವಿಧಾನಸಭಾ ಕ್ಷೇತ್ರದಿಂದಲೂ ಈ ಯೋಜನೆಯಡಿ ಮನೆಗಳಿಗೆ ಬೇಡಿಕೆಯಿದೆ. ಆದರೆ ಸರಕಾರದಿಂದ 2023-24ನೇ ಸಾಲಿಗೆ ಮನೆ ಹಂಚಿಕೆ ಮಾಡದ ಕಾರಣ ಎಲ್ಲ ಅರ್ಜಿಗಳು ಶಾಸಕರ ಕಚೇರಿ ಹಾಗೂ ಮೀನುಗಾರಿಕೆ ಇಲಾಖೆ ಯಲ್ಲೇ ಬಾಕಿಯಾಗಿವೆ.
ಮರು ಹಂಚಿಕೆ
2018 – 19ರಿಂದ 2022-23ನೇ ಸಾಲಿನವರೆಗೂ ಹಂಚಿಕೆ ಯಾಗಿರುವ / ಆಗದೆ ಉಳಿದಿರುವ ಮನೆಗಳ ಮಾಹಿತಿಯನ್ನು ಮೀನುಗಾರಿಕೆ ಇಲಾಖೆಯು ಜಿಲ್ಲಾ ಕೇಂದ್ರಗ ಳಿಂದ ಸರಕಾರ ಪಡೆಯುತ್ತಿದೆ. 2022-23ನೇ ಸಾಲಿಗೆ ಉಡುಪಿ ಜಿಲ್ಲೆಗೆ ಹಂಚಿಕೆಯಾದ 725 ಮನೆಗಳಲ್ಲಿ 325 ಮನೆ ಹಂಚಿಕೆಯಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ 450 ಮನೆಗಳಲ್ಲಿ ಸುಮಾರು 150 ಮನೆಗಳು ಹಂಚಿಕೆಯಾಗಿಲ್ಲ.
ತಾಂತ್ರಿಕ ಸಮಸ್ಯೆ
2020-21ರ ಮೊದಲು ಮೀನುಗಾರಿಕೆ ಇಲಾಖೆಯಿಂದ ಮಂಜೂರಾಗುತ್ತಿದ್ದ ಮನೆಗಳನ್ನು ಮೀನುಗಾರಿಕೆ
ಅಭಿವೃದ್ಧಿ ನಿಗಮದ ಮೂಲಕವೇ ಅನುಷ್ಠಾನ ಗೊಳಿಸಲಾಗುತ್ತಿತ್ತು. ಇದಕ್ಕಾಗಿ ಕ್ಷೇತ್ರವ್ಯಾಪ್ತಿಯಲ್ಲಿ ಶಾಸಕರ ನೇತೃತ್ವದ ಸಮಿತಿಯು ಫಲಾನುಭವಿಗಳನ್ನು ಆಯ್ಕೆ ಮಾಡುತ್ತಿತ್ತು. 2020- 21ನೇ ಸಾಲಿನಲ್ಲಿ ಮನೆ ನಿರ್ಮಾಣದ ಹೊಣೆಯನ್ನು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ವಹಿಸಿದ್ದರಿಂದ ಶಾಸಕರು ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ 2 ವರ್ಷ ಮನೆ ಹಂಚಿಕೆಯಾಗಿಲ್ಲ. 2022-23ನೇ ಸಾಲಿನಲ್ಲಿ ಮತ್ತೆ ಮೀನುಗಾರಿಕೆ ಅಭಿವೃದ್ಧಿ ನಿಗಮದ ಮೂಲಕವೇ ಮನೆ ಹಂಚಿಕೆಗೆ ಸರಕಾರ ಆದೇಶಿಸಿ, ಮನೆ ಹಂಚಿಕೆ ಮಾಡಿತ್ತು.
ಅನುದಾನವೆಷ್ಟು?
ಮತ್ಸ್ಯಾಶ್ರಯದಡಿ ಮನೆ ಪಡೆಯಲು ಅರ್ಜಿ ಸಲ್ಲಿಸಿದ ಫಲಾನುಭವಿಗಳ ಆಯ್ಕೆ ಬಳಿಕ ಇಲಾಖೆ/ ನಿಗಮದಿಂದ ಪ್ರತೀ ಫಲಾನುಭವಿ ಗಳಿಗೆ ಹಂತ ಹಂತವಾಗಿ ಅನುದಾನ ಮಂಜೂರು ಮಾಡಲಾಗುತ್ತದೆ. ಗ್ರಾಮೀಣ ಫಲಾನುಭವಿಗಳಿಗೆ 1.75 ಲಕ್ಷ ಹಾಗೂ ನಗರ ಪ್ರದೇಶ ಫಲಾನುಭವಿಗಳಿಗೆ 2 ಲಕ್ಷ ರೂ. ನೀಡಲಾಗುತ್ತದೆ. ಈ ಮೊತ್ತವನ್ನು 5 ಲಕ್ಷ ರೂ.ಗಳಿಗೆ ಏರಿಸಬೇಕು ಎಂಬ ಬೇಡಿಕೆಯೂ ಇದೆ.
ಮತ್ಸ್ಯಾಶ್ರಯ ಮನೆ ಹಂಚಿಕೆಗೆ ಇರುವ ತಾಂತ್ರಿಕ ತೊಡಕು ನಿವಾರಿಸಲಾಗಿದೆ. ಉಳಿಕೆ ಮನೆಗಳ ಮರುಹಂಚಿಕೆ ಪ್ರಕ್ರಿಯೆ ನಡೆಯುತ್ತಿದೆ.
– ಮಂಕಾಳ ವೈದ್ಯ, ಮೀನುಗಾರಿಕೆ ಮತ್ತು ಬಂದರು ಸಚಿವ
– ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!