ಒಮ್ಮೆ ಅವಕಾಶ ಕೊಡಿ :ಅಮೃತ್ ಶೆಣೈ
Team Udayavani, Apr 6, 2019, 6:00 AM IST
ಉಡುಪಿ: ಸ್ವತಂತ್ರ ಅಭ್ಯರ್ಥಿ ಅಮೃತ್ ಶೆಣೈಯವರ ಪ್ರಚಾರ ವಾಹನ ಎ.5ರಂದು ಉಡುಪಿ ಕ್ಷೇತ್ರದ ವಿವಿಧೆಡೆ ಸಂಚಾರ ಮಾಡಿತು.ಈ ಸಂದರ್ಭದಲ್ಲಿ ಮತದಾರರನ್ನು ಉದ್ದೇಶಿಸಿ ಅಮೃತ್ ಶೆಣೈ ಮಾತನಾಡಿ ಸ್ವತಂತ್ರ ಅಭ್ಯರ್ಥಿ ಗೆಲ್ಲುವುದು ಅಸಾಧ್ಯ ಅಲ್ಲಾ, ಹೊಸತನವನ್ನು ಬಯಸುವುದು ಮನುಷ್ಯ ಸಹಜ ಗುಣ, ಇವತ್ತು ರಾಷ್ಟ್ರೀಯ ಪಕ್ಷಗಳ ಎರಡೂ ಅಭ್ಯರ್ಥಿಗಳಿಗೆ ಜನ ಹಲವು ಅವಕಾಶಗಳನ್ನು ಈಗಾಗಲೇ ಕೊಟ್ಟು ನೋಡಿದ್ದಾರೆ, ತಾನು ಅಧಿಕಾರದಲ್ಲಿ ಇಲ್ಲದಿದ್ದರೂ ಜನಪರ ಕೆಲಸ ಮಾಡಿಕೊಂಡು ಬಂದಿದ್ದೇನೆ, ಒಮ್ಮೆ ಅವಕಾಶ ಕೊಡಿ ಆಮೇಲೆ ನಿರ್ವಹಣೆ ನೋಡಿ ತೀರ್ಮಾನ ಮಾಡಿ ಎಂದು ಕೇಳಿಕೊಂಡರು.ಈ ಸಂದರ್ಭದಲ್ಲಿ ಕೆಲವು ಮತದಾರರು ಮರಳಿನ ಅಭಾವದ ಬಗ್ಗೆ ಪ್ರಶ್ನೆ ಮಾಡಿದರು, ಪ್ರಶ್ನೆಗೆ ಉತ್ತರಿಸಿದ ಶೆಣೈಯವರು ನನ್ನ ಮೊದಲ ಆದ್ಯತೆಯಲ್ಲಿ ಅದರ ಪರಿಹಾರಕ್ಕೆ ಸರ್ವ ಪ್ರಯತ್ನ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು.
ಡಾ. ಪಿ ವಿ ಭಂಡಾರಿ, ಶಾಜಿದ್ ಅಲಿ ಹಾಗೂ ಜಯಶ್ರೀ ಭಟ್ ಶೆಣೈ ಪರ ಪ್ರಚಾರ ಭಾಷಣ ಮಾಡಿದರು. ರಫಿಕ್,ಅನಿತಾ ,ಪುನೀತ್ ಉಪಸ್ಥಿತರಿದ್ದರು