ಪಡುಬಿದ್ರಿ ಹೆದ್ದಾರಿ ಹೊಂಡ: ತಾತ್ಕಾಲಿಕ ದುರಸ್ತಿ
Team Udayavani, Jun 9, 2018, 6:00 AM IST
ಪಡುಬಿದ್ರಿ: ಚತುಷ್ಪಥ ಕಾಮಗಾರಿ ಮತ್ತು ಮಳೆಯಿಂದಾಗಿ ಉಂಟಾದ ಹೆದ್ದಾರಿ ಹೊಂಡಗಳನ್ನು ನಿರ್ಮಾಣ ಗುತ್ತಿಗೆ ಕಂಪೆನಿ ನವಯುಗ ತಾತ್ಕಾಲಿಕವಾಗಿ ಮುಚ್ಚಿದೆ.ಗುರುವಾರ ಇಲ್ಲಿ ಘನವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆಯಾಗಿದ್ದು, ಕಿ.ಮೀ. ದೂರಕ್ಕೂ ಮಿಕ್ಕಿ ವಾಹನಗಳು ಸಾಲುಗಟ್ಟಿ ನಿಂತದ್ದನ್ನು ಉದಯವಾಣಿ ವರದಿ ಮಾಡಿತ್ತು. ಪತ್ರಿಕಾ ವರದಿ ಹಿನ್ನೆಲೆಯಲ್ಲಿ ತಾತ್ಕಾಲಿಕ ದುರಸ್ತಿ ಕೆಲಸ ಮಾಡಲಾಗಿದೆ.
ಹೊಂಡಗಳ ಭಯ ನಿವಾರಣೆಯಾಗಿಲ್ಲ
ತಾತ್ಕಾಲಿಕ ದುರಸ್ತಿ ಮಾಡಿದ್ದರೂ ಹೊಂಡಗಳ ಭಯ ನಿವಾರಣೆಯಾಗಿಲ್ಲ. ಇಲ್ಲೆಲ್ಲೂ ಚರಂಡಿ ಇಲ್ಲದ್ದರಿಂದ ರಸ್ತೆಯಲ್ಲೇ ನೀರು ಹರಿದುಹೋಗಬೇಕಿದೆ. ಮಳೆ ನಿಂತ ಮೇಲೆ ಜಲ್ಲಿ ಮಿಕ್ಸ್ ಮೇಲೆ ಸಂಚರಿಸುವ ಸಂಕಷ್ಟವಿದೆ.
ಇನ್ನು ಹೆದ್ದಾರಿ ಸಮಸ್ಯೆಯಿಂದಾಗಿ ಅಕ್ಕಪಕ್ಕದ ಮನೆಗಳು, ಪೇಟೆಯಲ್ಲಿನ ಮಳಿಗೆಗಳಿಗೂ ನೀರು ನುಗ್ಗುವ ಭೀತಿ ಕಾಡಿದೆ.