ಖಾಸಗಿ ಐಟಿಐಗಳಿಗೆ ಅನುದಾನ ಸ್ಥಗಿತ ಭಾಗ್ಯ


Team Udayavani, Nov 1, 2018, 10:33 AM IST

iti.jpg

ಕುಂದಾಪುರ: ನಮ್ಮ ಸಂಸ್ಥೆಯಿಂದ ಈ ವರ್ಷ 74 ವಿದ್ಯಾರ್ಥಿಗಳು ಶಿಕ್ಷಣ ಪಡೆದು ಹೋದರು. ಈ ಪೈಕಿ 68 ಜನಕ್ಕೆ ಕೆಲಸ ದೊರೆತಿದೆ. ಎಲ್ಲರೂ ಸರಿಸುಮಾರು 12 ಸಾವಿರ ರೂ. ವೇತನ ಪಡೆಯುತ್ತಿದ್ದಾರೆ. ನನಗೋ 10 ಸಾವಿರ  ರೂ. ಸಂಬಳ. ಈ ವರ್ಷ ಸೇರಿದ ವಿದ್ಯಾರ್ಥಿಗೆ ಮುಂದಿನ ವರ್ಷ 14 ಸಾವಿರ ವೇತನವಾದರೆ ನನಗೆ 10,500 ರೂ.! ಆಗುತ್ತದೆ. ಇದು ನಮ್ಮ ಹಣೆ ಬರಹ ಎಂದು ಹಣೆಯ ಬೆವರುಜ್ಜಿ ಕೊಂಡರು ಕಳೆದ ಎಂಟು ವರ್ಷಗಳಿಂದ ಖಾಸಗಿ 
ಅನುದಾನ ರಹಿತ ಐಟಿಐಯಲ್ಲಿರುವ ಕಿರಿಯ ತರಬೇತಿ ಅಧಿಕಾರಿ(ಜೆಟಿಒ)ಯೊಬ್ಬರು.

ಐಟಿಐಗೆ ಹೆಚ್ಚಾಗಿ ಗ್ರಾಮೀಣ ಪ್ರದೇಶದ, ಆರ್ಥಿಕವಾಗಿ ಸ್ಥಿತಿವಂತರಲ್ಲದ, ಬೇಗನೇ ಉದ್ಯೋಗಕ್ಕೆ ಸೇರಬೇಕೆಂಬ ಒತ್ತಡ ಇರುವವರು ಸೇರುವುದು.1 ಕೋರ್ಸಿಗೆ 16ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಸರಕಾರಿ ಕೋಟಾದಲ್ಲಿ ತೆಗೆದುಕೊಳ್ಳುವಂತಿಲ್ಲ. ವಿದ್ಯಾರ್ಥಿಗೆ ತಲಾ 10 ಸಾವಿರ ರೂ.ಗಿಂತ ಹೆಚ್ಚು ಡೊನೇಶನ್‌ ಪಡೆಯುವಂತಿಲ್ಲ. 64 ವಿದ್ಯಾರ್ಥಿಗಳಿದ್ದರೆ 6.4 ಲಕ್ಷ ರೂ. ಸಂಸ್ಥೆಗೆ ದೊರೆತರೆ ಖರ್ಚು 25 ಲಕ್ಷ ರೂ. ಬರುತ್ತದೆ. ಇದರಿಂದಾಗಿ ರಾಜ್ಯಾದ್ಯಂತ ಐಟಿಐಗಳು ಮುಚ್ಚುತ್ತಿವೆ. ಇಷ್ಟಕ್ಕೂ ಹೀಗಾಗಲು ಕಾರಣ 2000ನೆ ಇಸವಿ ನಂತರ ಆರಂಭವಾದ ಐಟಿಐಗಳಿಗೆ ರಾಜ್ಯ ಸರಕಾರ ಅನುದಾನ ನೀಡದಿರುವುದು. 

ಥಾಮಸ್‌ ವರದಿ
ಪದವಿ ಕಾಲೇಜುಗಳಿಗೆ ವಿವಿ ಧನಸಹಾಯ ಆಯೋಗ ಇದ್ದಂತೆ ಐಟಿಐಗಳಿಗೂ ಸಿಬಂದಿ ವೇತನಕ್ಕೆ ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯಡಿ ಅನುದಾನವಿದೆ. ಐಟಿಐ ಅನುದಾನಕ್ಕೆ ಸಂಬಂಧಿಸಿ 2003ರಲ್ಲಿ ಥಾಮಸ್‌ ವರದಿಯೊಂದನ್ನು ರೂಪಿಸಲಾಗಿದ್ದು 3 ವರ್ಷ ಪೂರೈಸಲ್ಪಟ್ಟ ಅಲ್ಪಸಂಖ್ಯಾಕ ಐಟಿಐ, 5 ವರ್ಷ ಪೂರೈಸಿದ ಗ್ರಾಮೀಣ ಐಟಿಐಗಳಿಗೆ ಅನುದಾನ ಕೊಡಬಹುದು ಎಂದಿದ್ದು ಈ ಅನುದಾನ ನೀತಿಸಂಹಿತೆ 2016ರಿಂದ ಜಾರಿಯಲ್ಲಿದೆ.  

ರಾಜ್ಯದಲ್ಲಿ 200 ಸರಕಾರಿ, 196 ಖಾಸಗಿ, 1,300 ಅನುದಾನ ರಹಿತ ಐಟಿಐಗಳಿವೆ. ಈ ಪೈಕಿ 800ರಷ್ಟು ಐಟಿಐಗಳು ಅನುದಾನಕ್ಕೆ ಅರ್ಹತೆ ಪಡೆದಿವೆ. 2014ರಲ್ಲಿ ಪರಿವೀಕ್ಷಣೆ ನಡೆದಾಗ 436 ಅರ್ಹತೆ ಪಡೆದು 361 ಐಟಿಐಗಳಿಗೆ ಅನುದಾನ ಕೊಡಲು ಶಿಫಾರಸ್ಸಾಗಿತ್ತು. ದ.ಕ.ದಲ್ಲಿ 5, ಉಡುಪಿ 3, ಮುಖ್ಯಮಂತ್ರಿಗಳ ತವರು ಜಿಲ್ಲೆ ಹಾಸನದಲ್ಲಿ 68 ಅನುದಾನರಹಿತ ಐಟಿಐಗಳಿವೆ.

ಸ್ಥಗಿತ
1986ರಿಂದ ಹೋರಾಟ ನಡೆದು 1997ರಲ್ಲಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದಾಗ ಗುಜರಾತ್‌ ಸರಕಾರದಿಂದ ಅನುದಾನ ಸಂಹಿತೆ ತರಿಸಿ ಸಂಯೋಜನೆಗೊಳಪಟ್ಟು 7 ವರ್ಷ ಪೂರೈಸಿದ ಐಟಿಐಗಳಿಗೆ ಅನುದಾನ ಆರಂಭಿಸಿದರು. 2000ನೇ ಇಸವಿ ನಂತರದ ಈಗ 17 ವರ್ಷ ಪೂರೈಸಿದರೂ ಯಾವುದೇ ಐಟಿಐಗೂ ಪೂರ್ವಸೂಚನೆ ಇಲ್ಲದೇ ಅನುದಾನ ಸ್ಥಗಿತವಾಗಿದೆ. 

ಮಾಳಿಗೆ ಕೋರ್ಸು
ಸರಕಾರಿ ನಿಯಮದಂತೆ ಒಂದಷ್ಟು ಕಂಪ್ಯೂಟರ್‌, ತರಬೇತಿದಾರರು ಇದ್ದರೆ ಕಂಪ್ಯೂಟರ್‌ ಕೋರ್ಸಿನ ತರಬೇತಿ ನೀಡುವ “ಮಾಳಿಗೆ ತರಬೇತಿ’ಗೆ ಸರಕಾರ ಕೌಶಲಾಭಿವೃದ್ಧಿಗಾಗಿ ಕೌಶಲ ಕರ್ನಾಟಕ ಹೆಸರಿನಲ್ಲಿ ವಿದ್ಯಾರ್ಥಿ ಕೇಂದ್ರಿತ ಅನುದಾನ ಎಂದು ತಲಾ ವಿದ್ಯಾರ್ಥಿಗೆ 8 ಸಾವಿರ ರೂ., ಸಂಸ್ಥೆಗೆ 4 ಸಾವಿರ ರೂ. ಅನುದಾನ ನೀಡುತ್ತದೆ.
ಇದೇ ಅನುದಾನ ಖಾಸಗಿ ಐಟಿಐಗಳಿಗೂ ನೀಡುವ ಭರವಸೆಯಿದೆ. ಆದರೆ ಐಟಿಐಗಳು ನಿರಾಕರಿಸಿವೆ. ಏಕೆಂದರೆ ತೇರ್ಗಡೆಯಾದ  ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಅನುದಾನ ವಾದರೆ ಪ್ರವೇಶ/ತೇರ್ಗಡೆ ಕಡಿಮೆಯಾದರೆ ಸಿಬಂದಿ ವೇತನಕ್ಕೂ ಕಲ್ಲು.

ಇನ್ನೂ ಆಗಿಲ್ಲ
ಥಾಮಸ್‌ ವರದಿ ಪ್ರಕಾರ ವಿದ್ಯಾರ್ಥಿ ಕೇಂದ್ರಿತ ಅನುದಾನ ನೀಡಲು ಸಂಪುಟ ನಿರ್ಧರಿಸಿದೆ. ಆದರೆ ಅದನ್ನು ಮರುಪರಿಶೀಲಿಸಲು ಖಾಸಗಿ ಐಟಿಐಗಳಿಂದ ಮನವಿಗಳು ಬಂದಿದ್ದು ಇನ್ನೂ ಪ್ರತ್ಯೇಕ ನಿರ್ಣಯ ಕೈಗೊಂಡಿಲ್ಲ. 
 ಆರ್‌. ವಿ. ದೇಶಪಾಂಡೆ, ಕೌಶಲಾಭಿವೃದ್ಧಿ ಇಲಾಖೆ ಸಚಿವರು

ಅನುದಾನ ಇಲ್ಲ
ಐಟಿಐ ಕಲಿತ ಶೇ. 95 ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆಯುತ್ತಿದೆ. ಎಂಜಿನಿ ಯರಿಂಗ್‌ ಕಾಲೇಜು ಮಾಡುವಷ್ಟು ಸರಕಾರಿ ನಿಯಮದಂತೆ ಐಟಿಐ ಪ್ರಾರಂಭಿಸಿದರೂ 7 ವರ್ಷ ಪೂರೈಸಿದ್ದಕ್ಕೆ ಅನುದಾನ ಕೊಡಬೇಕೆಂಬ ನಿಯಮ ಇದ್ದರೂ ಕಳೆದ 17 ವರ್ಷಗಳಿಂದ ಅನುದಾನ ಮಾತ್ರ ಲಭ್ಯವಾಗುತ್ತಿಲ್ಲ.  
ಕೆ.ಎಸ್‌. ನವೀನ್‌ ಕುಮಾರ್‌, ರಾಜ್ಯ ಸಂಘಟನಾ ಕಾರ್ಯದರ್ಶಿ ಅನುದಾನ ರಹಿತ ಐಟಿಐಗಳ ಸಂಘಟನೆ

ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.