Brahmavara ಕುದುರೆಗಳ “ರೇಸ್’ಗೆ ಗುಂಡ್ಮಿಯಲ್ಲಿ ತಡೆ!
Team Udayavani, Mar 5, 2024, 7:20 AM IST
ಕೋಟ: ಬ್ರಹ್ಮಾವರ ಬಳಿ ಆರೂರಿನ ಫಾರ್ಮ್ ವೊಂದರಿಂದ ತಪ್ಪಿಸಿಕೊಂಡು ರಾಷ್ಟ್ರೀಯ ಹೆದ್ದಾರಿ ಮೂಲಕ ಹತ್ತಾರು ಕಿ.ಮೀ. ಓಡಿದ 3 ಕುದುರೆಗಳನ್ನು ಕೊನೆಗೂ ಗುಂಡ್ಮಿಯ ಟೋಲ್ಗೇಟ್ ಬಳಿ ಹಿಡಿದು ಫಾರ್ಮ್ ನ ಮಾಲಕರಿಗೆ ಒಪ್ಪಿಸಲಾಯಿತು.
5 ಕುದುರೆಗಳು ಮಾ. 3ರಂದು ತಪ್ಪಿಸಿಕೊಂಡಿದ್ದು 2 ಸಿಕ್ಕಿದ್ದವು. ಉಳಿ ದವು ಕುಂದಾಪುರದ ಕಡೆ ಓಡು ತ್ತಿದ್ದವು. ಬ್ರಹ್ಮಾವರ ಭಾಗದವರು ಇವುಗಳ ಓಟದ ದೃಶ್ಯವನ್ನು ಸೆರೆ ಹಿಡಿ ದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.
ಕುದುರೆಗಳು ಗುಂಡ್ಮಿ ತಲುಪುತ್ತಿದ್ದಂತೆ ಶಶಿ ಪಾಂಡೇ ಶ್ವರ ಎನ್ನುವವರು ಸ್ಥಳೀಯರ ಸಹಕಾ ರದೊಂದಿಗೆ ತಡೆದರು. ಅನಂತರ ಫಾರ್ಮ್ ನ ಕೆಲಸಗಾರರು ಕರೆದೊ ಯ್ದಿದ್ದಾರೆ. ಇವು ರೇಸ್ ಕುದುರೆಗಳು ಎನ್ನಲಾಗಿದೆ.