ಅಪಘಾತಗಳು ನಡೆದರೂ ಪಾಠ ಕಲಿಯದ ಸವಾರರು! 


Team Udayavani, Jan 17, 2019, 1:30 AM IST

accident.png

ಕಾಪು: ಮೂಳೂರಿನಿಂದ ಕಾಪುವಿನ ವರೆಗೆ ರಾಷ್ಟ್ರೀಯ ಹೆದ್ದಾರಿ 66 ನಿತ್ಯ ಅಪಘಾತಗಳ ಸರಮಾಲೆಯೇ ನಡೆಯುತ್ತಿದ್ದು ಇದಕ್ಕೆ ಅವೈಜ್ಞಾನಿಕ ಕಾಮಗಾರಿ ಒಂದು ಕಾರಣವಾದರೆ, ಇನ್ನೊಂದು  ಚಾಲಕರ ಬೇಜವಾಬ್ದಾರಿ ಚಾಲನೆಯೂ ಕಾರಣವಾಗಿದೆ.   ಹೆದ್ದಾರಿ ನಿರ್ಮಾಣ ಸಂದರ್ಭ ಅಗಲವಾದ ಡಿವೈಡರ್‌ ನಿರ್ಮಿಸಲಾಗಿದ್ದು, ಇದರ ನಡುವೆ ಮಳೆ ನೀರು ಹರಿದು ಹೋಗಲು ಬಿಟ್ಟ  ಪ್ರದೇಶದಲ್ಲೇ  ದ್ವಿಚಕ್ರ ವಾಹನಗಳನ್ನು ತೂರಿಸುವುದರಿಂದ ಅಪಘಾತಗಳು ನಡೆಯುತ್ತಿವೆ.

ಮೂರು ವರ್ಷದಲ್ಲಿ ಐದು ಸಾವು
ಕಳೆದ ಮೂರು ವರ್ಷಗಳಲ್ಲಿ ಡಿವೈಡರ್‌ ನಡುವೆ ದ್ವಿಚಕ್ರವಾಹನಗಳು ಹಾದುಹೋಗಿ ಡಿಕ್ಕಿ ಹೊಡೆದ ಪರಿಣಾಮ 23ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, ಇದರಿಂದಾಗಿ ಐದು ಮಂದಿ ಸಾವಿಗೀಡಾಗಿದ್ದಾರೆ.

ಎಲ್ಲೆಲ್ಲಿವೆ ಡೇಂಜರಸ್‌ ಸ್ಪಾಟ್‌
ರಾ.ಹೆ. 66ರ ಉದ್ಯಾವರ ಜನತಾ ಗ್ಯಾರೇಜ್‌, ಕಟಪಾಡಿ ತೇಕಲತೋಟ, ಕಲ್ಲಾಪು ಸೇತುವೆ, ಪಾಂಗಾಳ – ಮೂಡಬೆಟ್ಟು ಕ್ರಾಸ್‌, ಉಳಿಯಾರಗೋಳಿ ಬಿಕ್ಕೋ, ಮೂಳೂರು ಬಿಲ್ಲವ ಸಂಘ, ಮೂಳೂರು ಸುನ್ನಿ ಸೆಂಟರ್‌, ಉಚ್ಚಿಲ ಸಂತೆ ಮಾರ್ಕೆಟ್‌ ಬಳಿ  ದ್ವಿಚಕ್ರ ವಾಹನಗಳನ್ನು ನುಗ್ಗಿಸಿಕೊಂಡು ಹೋಗುವ ಅಪಾಯಕಾರಿ ಸರ್ಕಸ್‌ ನಡೆಯುತ್ತಿದೆ.

ತಾವೇ ಅಥವಾ ಮತ್ತೂಬ್ಬರ ಬಲಿಗೆ ಕಾರಣರಾಗುತ್ತಿರುವ ದ್ವಿಚಕ್ರ ವಾಹನ ಸವಾರರು   ವಾಹನಗಳನ್ನು ನುಗ್ಗಿಸಿಕೊಂಡು ನೇರವಾಗಿ ಹೆದ್ದಾರಿಯನ್ನು ಪ್ರವೇಶಿಸುತ್ತಿದ್ದು, ಈ ವೇಳೆ ಹೆದ್ದಾರಿಗೆ ಬರುವ ವಾಹನಗಳನ್ನು ಅಂದಾಜಿಸುವಲ್ಲಿ ವಿಫಲರಾಗಿ ವಾಹನಗಳಿಗೆ ಢಿಕ್ಕಿ ಹೊಡೆಯುತ್ತಾರೆ.   ಅಥವಾ ಆ ವಾಹನಗಳನ್ನು ತಪ್ಪಿಸಲು ಹೋಗಿ ಸ್ವತಃ ತಾವೇ ಅಪಘಾತಕ್ಕೊಳಗಾಗುತ್ತಾರೆ.

ಡಿವೈಡರ್‌ ನಡುವೆ ದ್ವಿಚಕ್ರ ವಾಹನ ಚಲಾಯಿಸಲು ಕಾರಣವೇನು?
ರಾ.ಹೆ. 66ರ ಚತುಷ್ಪಥ ಯೋಜನೆಯ ಕಾಮಗಾರಿ ವೇಳೆ ಹೆದ್ದಾರಿ ಇಲಾಖೆ ಮತ್ತು ಕಾಮಗಾರಿಯ ಗುತ್ತಿಗೆ ಕಂಪೆನಿಯು ಸ್ಥಳೀಯರ ಬೇಡಿಕೆಯನ್ನು ಬದಿಗಿರಿಸಿ ತಮ್ಮ ಇಚ್ಛೆಯಂತೆ ಪ್ರತಿ ಒಂದೂವರೆ ಕಿ.ಮೀ. ಅಂತರದಲ್ಲಿ ಡೈವರ್ಷನ್‌ಗಳನ್ನು ತೆಗೆದುಕೊಟ್ಟಿರುವುದೇ ದ್ವಿಚಕ್ರ ವಾಹನ ಸವಾರರ ಡಿವೈಡರ್‌ ನಡುವೆ ವಾಹನಗಳನ್ನು ತೂರಿಸಿಕೊಂಡು ಹೋಗಲು ಕಾರಣವಾಗಿದೆ. 

ನೂರು ಮೀ. ಓಡಾಡುವವರು ಕೂಡ ಕನಿಷ್ಠ ಒಂದೂವರೆ ಕಿ.ಮೀ. ದೂರದಲ್ಲಿರುವ ಡೈವರ್ಶನ್‌ ಬಳಿಗೆ ತೆರಳಿದಲ್ಲಿ ಸಮಯ ಮತ್ತು ಪೆಟ್ರೋಲಿನ ಖರ್ಚು ಉಳಿಸಲು ಸಾಧ್ಯವಾಗುತ್ತದೆ ಎನ್ನುವುದು ದ್ವಿಚಕ್ರ ವಾಹನ ಸವಾರರ ಅಭಿಪ್ರಾಯವಾಗಿದೆ.

ದ್ವಿಚಕ್ರ ವಾಹನ ಸವಾರರೇ ಯೋಚಿಸಿ  
 ರಾಷ್ಟ್ರೀಯ ಹೆದ್ದಾರಿಯಲ್ಲಿ  ಯಾವುದೇ ಅಪಘತಾ ಸಂಭವಿಸಿದರೂ ಹೆಚ್ಚಾಗಿ ಸಾವು – ನೋವಿಗೆ ಗುರಿಯಾಗುವವರು ದ್ವಿಚಕ್ರ ವಾಹನ ಸವಾರರೇ ಆಗಿರುತ್ತಾರೆ. ಜತೆಗೆ ಎಷ್ಟೇ ಅಪಘಾತ  ಟ್ರಾಫಿಕ್‌ ನಿಯಮ, ಸಂಚಾರ ನಿಯಮಗಳನ್ನು ಉಲ್ಲಂಘಿಸಿಕೊಂಡು ವಾಹನ ಚಲಾಯಿಸುವುದರಲ್ಲಿ ದ್ವಿಚಕ್ರ ವಾಹನ ಸವಾರರದ್ದೇ ಮೇಲುಗೈ ಆಗಿರುತ್ತದೆ. ಸ್ವತಃ ಸವಾರರೇ ಈ ಬಗ್ಗೆ ಆಲೋಚಿಸುವ ಅಗತ್ಯವಿದೆ ಎನ್ನುವುದು ಪೊಲೀಸರ ಅಭಿಪ್ರಾಯವಾಗಿದೆ.

ಪೊಲೀಸ್‌ ಇಲಾಖೆ ಮತ್ತೆ ಎಚ್ಚರ ವಹಿಸಲಿ
ಕಾಪು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಡಿವೈಡರ್‌ ನಡುವಿನ ವಾಹನ ಸಂಚಾರದಿಂದಾಗಿ ಕಳೆದ ಮೂರು ವರ್ಷಗಳಲ್ಲಿ ಬಹಳಷ್ಟು ಅಪಘಾತಗಳು ನಡೆಯುತ್ತಿದ್ದು, ಅದನ್ನು ಮನಗಂಡು ಹಿಂದಿನ ಪೊಲೀಸ್‌ ಠಾಣಾಧಿಕಾರಿ ನಿತ್ಯಾನಂದ ಗೌಡ ಅವರು ಪೊಲೀಸ್‌ ವರಿಷ್ಠಾಧಿಕಾರಿ ಮತ್ತು ಹೆದ್ದಾರಿ ಇಲಾಖೆಗೆ ಪತ್ರ ಬರೆದು ಇಂತಹ ಕಡೆಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕಬ್ಬಿಣದ ರಾಡ್‌ಗಳನ್ನು ಅಳವಡಿಸಿ, ಕೆಲವೆಡೆ ಕಲ್ಲು ಮತ್ತು ಮಣ್ಣುಗಳನ್ನು ಹಾಕಿ ದ್ವಿಚಕ್ರ ವಾಹನ ಸವಾರರನ್ನು ತಡೆಯುವ ಪ್ರಯತ್ನ ಮಾಡಲಾಗಿತ್ತು. ಇದರಿಂದಾಗಿ ಇಂತಹ ವಾಹನ ಅಪಘಾತಗಳು ನಿಯಂತ್ರಣಕ್ಕೆ ಬಂದಿತ್ತು. ಆದರೆ ಇದೀಗ ಮತ್ತೆ ಅಂತಹ ಪ್ರವೃತ್ತಿ ಮುಂದುವರಿದಿದೆ. ಪೊಲೀಸ್‌ ಇಲಾಖೆ ಎಚ್ಚರ ವಹಿಸಲಿ.
– ಹರೀಶ್‌ ನಾಯಕ್‌, ಉದ್ಯಮಿ ಕಾಪು

ಹೆದ್ದಾರಿ ಇಲಾಖೆಗೆ ಮತ್ತೆ ಪತ್ರ ಬರೆಯಲಾಗುವುದು
ಉದ್ಯಾವರದಿಂದ ಉಚ್ಚಿಲದವರೆಗಿನ  ಹೆದಾರಿ  ಡಿವೈಡರ್‌ ನಡುವೆ ದ್ವಿಚಕ್ರ ವಾಹನಗಳನ್ನು ನುಗ್ಗಿಸುವ ಹಲವಾರು ಪ್ರದೇಶಗಳಿವೆ.  ಇಲ್ಲಿ ಹಿಂದೆ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿದ್ದ ಪರಿಣಾಮ ಪೊಲೀಸ್‌ ಇಲಾಖೆ ಹೆದ್ದಾರಿ ಇಲಾಖೆಗೆ ಪತ್ರ ಬರೆದು ಮಳೆ ನೀರು ಹರಿಯುವ ಪ್ರದೇಶಗಳಲ್ಲಿ ಬೇರೊಂದು ರೀತಿ ಕಾಮಗಾರಿಗೆ ಸೂಚನೆ ನೀಡಲಾಗಿತ್ತು. ಆದರೆ ಅದನ್ನು ಕೂಡ ಸ್ಥಳೀಯರು ತಮ್ಮ ಅನುಕೂಲಕ್ಕೆ ತಕ್ಕಂತೆ ಕಿತ್ತು ಹಾಕಿ ವಾಹನ ಚಲಾಯಿಸಿಕೊಂಡು ಹೋಗುತ್ತಿರುವುದು ದುರದೃಷ್ಟಕರವಾಗಿದೆ. ಇಂತಹ ಕಡೆಗಳಲ್ಲಿ ಮತ್ತೆ ಸಂಚಾರ ತಡೆಯುವ ಕಾಮಗಾರಿ ನಡೆಸಲು ಹೆದ್ದಾರಿ ಇಲಾಖೆಗೆ ಪತ್ರ ಬರೆದು ವಿನಂತಿಸಲಾಗುವುದು.
-ಮಹೇಶ್‌ ಪ್ರಸಾದ್‌, ಕಾಪು ಪೊಲೀಸ್‌ ವೃತ್ತ ನಿರೀಕ್ಷಕರು

-ರಾಕೇಶ್ ಕುಂಜೂರು

ಟಾಪ್ ನ್ಯೂಸ್

H. D. Kumaraswamy ಸದ್ಯದಲ್ಲೇ ರಾಜ್ಯಪಾಲರ ಭೇಟಿ

Prajwal Revanna Case ಸದ್ಯದಲ್ಲೇ ರಾಜ್ಯಪಾಲರ ಭೇಟಿ: ಕುಮಾರಸ್ವಾಮಿ

D. V. Sadananda Gowda; ಸಿ.ಡಿ. ಬಿಡುವಂಥ ನೀಚ ಕೆಲಸದಿಂದ ಒಕ್ಕಲಿಗ ನಾಯಕರಾಗುವುದಿಲ್ಲ

D. V. Sadananda Gowda; ಸಿ.ಡಿ. ಬಿಡುವಂಥ ನೀಚ ಕೆಲಸದಿಂದ ಒಕ್ಕಲಿಗ ನಾಯಕರಾಗುವುದಿಲ್ಲ

Bad weather: KKR team landed in Varanasi

Bad weather: ವಾರಾಣಸಿಯಲ್ಲಿ ಉಳಿದ ಕೆಕೆಆರ್‌ ತಂಡ

18

Benjana Padavu: ನೇಣು ಬಿಗಿದು ಆತ್ಮಹತ್ಯೆ

Encounter in Kashmir:

ಕಾಶ್ಮೀರದಲ್ಲಿ ಎನ್‌ಕೌಂಟರ್‌: ಇಬ್ಬರು ಉಗ್ರರ ಹತ್ಯೆ

17-

Bantwala: ರಾಂಗ್‌ಸೈಡಿನಲ್ಲಿ ಬಂದು ಎರಡು ಬೈಕ್‌ಗಳಿಗೆ  ಢಿಕ್ಕಿ ಹೊಡೆದ ಲಾರಿ

Man shot a Cow on head twice

Manipur; ಹಸುವಿಗೆ ಗುಂಡಿಟ್ಟು ಕೊಂದ ಕ್ರೂರಿ!: ವ್ಯಾಪಕ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-KAUP

Kaup: ಪಾಂಗಾಳದಲ್ಲಿ ಆಕಸ್ಮಿಕ ಬೆಂಕಿ: ಬೆಂಕಿ ನಂದಿಸಲು ನೆರವಾದ ತಹಶೀಲ್ದಾರ್

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Karkala ಪರಶುರಾಮ ಥೀಂ ಪಾರ್ಕ್‌ ಸಮಾಜದ್ದು: ಸುನಿಲ್‌ ಕುಮಾರ್‌

Karkala ಪರಶುರಾಮ ಥೀಂ ಪಾರ್ಕ್‌ ಸಮಾಜದ್ದು: ಸುನಿಲ್‌ ಕುಮಾರ್‌

Mangaluru, ಉಡುಪಿಯಲ್ಲಿ ಆ್ಯಂಬುಲೆನ್ಸ್‌ ಸೇವೆ ಯಥಾಸ್ಥಿತಿ

Mangaluru, ಉಡುಪಿಯಲ್ಲಿ ಆ್ಯಂಬುಲೆನ್ಸ್‌ ಸೇವೆ ಯಥಾಸ್ಥಿತಿ

Manipal ಖಾಸಗಿ ಬಸ್‌ ಮಾಲಕನಿಂದ ನಿರ್ವಾಹಕನಿಗೆ ಹಲ್ಲೆ; ದೂರು ದಾಖಲು

Manipal ಖಾಸಗಿ ಬಸ್‌ ಮಾಲಕನಿಂದ ನಿರ್ವಾಹಕನಿಗೆ ಹಲ್ಲೆ; ದೂರು ದಾಖಲು

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

H. D. Kumaraswamy ಸದ್ಯದಲ್ಲೇ ರಾಜ್ಯಪಾಲರ ಭೇಟಿ

Prajwal Revanna Case ಸದ್ಯದಲ್ಲೇ ರಾಜ್ಯಪಾಲರ ಭೇಟಿ: ಕುಮಾರಸ್ವಾಮಿ

D. V. Sadananda Gowda; ಸಿ.ಡಿ. ಬಿಡುವಂಥ ನೀಚ ಕೆಲಸದಿಂದ ಒಕ್ಕಲಿಗ ನಾಯಕರಾಗುವುದಿಲ್ಲ

D. V. Sadananda Gowda; ಸಿ.ಡಿ. ಬಿಡುವಂಥ ನೀಚ ಕೆಲಸದಿಂದ ಒಕ್ಕಲಿಗ ನಾಯಕರಾಗುವುದಿಲ್ಲ

Bad weather: KKR team landed in Varanasi

Bad weather: ವಾರಾಣಸಿಯಲ್ಲಿ ಉಳಿದ ಕೆಕೆಆರ್‌ ತಂಡ

18

Benjana Padavu: ನೇಣು ಬಿಗಿದು ಆತ್ಮಹತ್ಯೆ

Encounter in Kashmir:

ಕಾಶ್ಮೀರದಲ್ಲಿ ಎನ್‌ಕೌಂಟರ್‌: ಇಬ್ಬರು ಉಗ್ರರ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.