ಉಡುಪಿ: ಕುಂಜಿಬೆಟ್ಟಿನಲ್ಲಿ ರಸ್ತೆ ವಿಸ್ತರಣೆ ಕಾರ್ಯ
Team Udayavani, Oct 12, 2018, 6:00 AM IST
ಉಡುಪಿ: ಪರ್ಕಳದ ದೇವಿನಗರದಿಂದ ಕರಾವಳಿ ಜಂಕ್ಷನ್ವರೆಗಿನ 10 ಕಿ.ಮೀ. ದೀರ್ಘದ ರಾ.ಹೆ 169ಎ ರಸ್ತೆ ವಿಸ್ತರಣೆ ಯೋಜನೆಯಲ್ಲಿ ಬುಧವಾರ ಎಂಜಿಎಂ ಕಾಲೇಜಿನ ಬಳಿ ಕುಂಜಿಬೆಟ್ಟಿನಲ್ಲಿ ಕಾಮಗಾರಿ ಆರಂಭಿಸಲಾಗಿದೆ.
ಈಗಿನ ಡಾಮರು ರಸ್ತೆಯನ್ನು ತೆಗೆದು ಒಟ್ಟು 30 ಮೀ. ಅಗಲಗೊಳಿಸುವ ಕೆಲಸ ನಡೆಯುತ್ತಿದೆ. ಪ್ರತಿ 500 ಮೀ. ಉದ್ದದ ರಸ್ತೆಯನ್ನು ಮಾಡುತ್ತ ಕಾಮಗಾರಿಯನ್ನು ಮುಂದು ವರಿಸಲಾಗುವುದು. ಕಲ್ಸಂಕದಿಂದ ಮಣಿಪಾಲಕ್ಕೆ ಹೋಗಿ ಬರುವವರಿಗೆ ಅವಕಾಶ ನೀಡಲಾಗಿದೆಯಾದರೂ ವಾಹನ ನಿಬಿಡತೆ ಉಂಟಾಗದೆ ಇರಲು ಕಲ್ಸಂಕದಿಂದ ದೊಡ್ಡಣಗುಡ್ಡೆ ಮೂಲಕ ಮಣಿಪಾಲಕ್ಕೆ ತೆರಳಬಹುದು ಎಂದು ವಿನಂತಿಸಲಾಗಿದೆ.
ತೀರ್ಥಹಳ್ಳಿಯಿಂದ ಮಲ್ಪೆ ವರೆಗಿನ 90 ಕಿ.ಮೀ. ರಸ್ತೆಯನ್ನು 30 ಮೀಟರ್ ಅಗಲಗೊಳಿಸುವ ಕಾಂಕ್ರಿಟ್ ರಸ್ತೆ ಕಾಮಗಾರಿ ಇದಾಗಿದೆ. 98.46 ಕೋ. ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. 30 ಮೀ. ಅಗಲದ ರಸ್ತೆಯ ಎರಡು ಕಡೆಯ 1 ಮೀ. ರಸ್ತೆಯನ್ನು ಇತರ ಉದ್ದೇಶಕ್ಕಾಗಿ ಮೀಸಲಿಡಲಾಗಿದೆ. ಇದರಲ್ಲಿ ಪೈಪ್ಲೈನ್, ಆಪ್ಟಿಕಲ್ ಕೇಬಲ್, ಟೆಲಿಫೋನ್ ತಂತಿ ಅಳವಡಿಕೆಯಾಗಲಿದೆ. ಉಳಿದ 28 ಮೀ.ನಲ್ಲಿ 1.5 ಮೀ. ಅಗಲದ ರಸ್ತೆ ವಿಭಾಜಕ, ಎರಡು ಕಡೆಗಳಲ್ಲಿ 2 ಮೀ. ಅಗಲದ ಪಾದಚಾರಿ ಮಾರ್ಗ, 1.5 ಮೀ. ಅಗಲದ ಚರಂಡಿ, 9.5 ಮೀ. ಅಗಲದ ರಸ್ತೆ ನಿರ್ಮಾಣವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !