ರೋಟರಿ ಕ್ಲಬ್ ಉಡುಪಿ: ಪದಪ್ರದಾನ ಸಮಾರಂಭ
Team Udayavani, Jul 11, 2017, 1:40 AM IST
ಉಡುಪಿ: ರೋಟರಿ ಉಡುಪಿ ಪದಪ್ರದಾನ ಸಮಾರಂಭ ಕುಂಜಿಬೆಟ್ಟುವಿನ ಎಂಜಿಎಂ ಕಾಲೇಜು ಕ್ಯಾಂಪಸ್ನಲ್ಲಿರುವ ಗೀತಾಂಜಲಿಯಲ್ಲಿ ನಡೆಯಿತು.
ಪದ ಪ್ರದಾನಾಧಿಕಾರಿ ಮಾಜಿ ರಾಜ್ಯಪಾಲ ಸದಾನಂದ ಚಾತ್ರ ಅವರು ಅಧ್ಯಕ್ಷ ರಾಮಚಂದ್ರ ಉಪಾಧ್ಯಾಯ ಅವರಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿ, ಅಂತಾರಾಷ್ಟ್ರೀಯ ರೋಟರಿ ಅಧ್ಯಕ್ಷರ ಕರೆಯಂತೆ ರೋಟರಿ ಮೇಕಿಂಗ್ ಡಿಫೆರೆ®Õ…ನಂತೆ ನಮ್ಮೆಲ್ಲ ಚಟುವಟಿಕೆಗಳು ವಿಭಿನ್ನವಾಗಿ ಮೂಡಿ ಬಂದು ಜನರನ್ನು ಮುಟ್ಟಬೇಕಿದೆ, ಅದಕ್ಕಾಗಿ ನಾವೆಲ್ಲರೂ ಕೈಜೋಡಿಸಬೇಕಾಗಿದೆ. ರೋಟರಿ ಸಂಸ್ಥೆಗಳು ಸರಕಾರದ ಸವಲತ್ತುಗಳನ್ನು ಜನರಿಗೆ ತಲಪಿಸುವ ಕಾರ್ಯ, ಬ್ಯಾಂಕುಗಳು ನೀಡುವ ಶೈಕ್ಷಣಿಕ ಸಾಲವನ್ನು ಅಗತ್ಯ ಇರುವವರಿಗೆ ಅರಿವು ಮೂಡಿಸಿ ಮುಟ್ಟಿಸುವ ಕಾರ್ಯ ಮಾಡಬೇಕೆಂದು ನೂತನ ತಂಡಕ್ಕೆ ಶುಭ ಹಾರೈಸಿದರು.
ಉಪರಾಜ್ಯಪಾಲ ಬಾಲಕೃಷ್ಣ ಮಧ್ದೋಡಿ, ಸುಬ್ರಮಣ್ಯ ಬಾಸ್ರಿ, ವಲಯ ಸೇನಾನಿ ಕೆ.ಟಿ. ನಾಯಕ್, ಜಗದೀಶ್ ಕಾಮತ್ ಉಪಸ್ಥಿತರಿದ್ದರು. ಇಂಟರ್ಯಾಕr… ಶಾಲೆಗಳ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಹಿರಿಯಡಕ ಸ.ಹಿ.ಪ್ರಾ. ಶಾಲೆಗೆ ಆಕ್ವಾಗಾರ್ಡನ್ನು ನೀಡಲಾಯಿತು. ಕಡಿಯಾಳಿ ಹಿ.ಪ್ರಾ. ಶಾಲೆಯ 21 ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು. ನಿರ್ಗಮನ ಅಧ್ಯಕ್ಷ ಡಾ| ಕೆ. ಸುರೇಶ ಶೆಣೈ ಸ್ವಾಗತಿಸಿ, ಜತೆ ಕಾರ್ಯದರ್ಶಿ ರಾಜೇಶ್ ಪಣಿಯಾಡಿ ವರದಿ ವಾಚಿಸಿದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಬಾಸ್ರಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
D.K,Udupi ಸಿಎನ್ಜಿ ಇಂಧನ ಕೊರತೆ: ಬಂಕ್ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು
Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು