ಎಸ್ಸಿಡಿಸಿಸಿ ಬ್ಯಾಂಕ್: ಸತೀಶ್ ಅವರಿಗೆ ವಿದಾಯ
Team Udayavani, Jul 5, 2018, 12:31 PM IST
ಉಡುಪಿ: ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಎಸ್.ನಿವೃತ್ತರಾದ ಹಿನ್ನೆಲೆಯಲ್ಲಿ ಬ್ಯಾಂಕಿನ ನಿವೃತ್ತ ನೌಕರರ ಸಂಘದ ವತಿಯಿಂದ ಅವರಿಗೆ ವಿದಾಯ ಸಮಾರಂಭ ಜರಗಿತು.
ಸಂಘದ ಅಧ್ಯಕ್ಷ ಕೆ.ಅಣ್ಣಯ್ಯ ಶೇರಿಗಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸತೀಶ್ ಅವರು ಬ್ಯಾಂಕಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ್ದ ಅವರಿಗೆ ಬ್ಯಾಂಕಿನ ಪ್ರಗತಿಯೊಂದೇ ಪ್ರಮುಖ ಧ್ಯೇಯವಾಗಿತ್ತು ಎಂದರು.
ಲಕ್ಷ್ಮಣಕುಮಾರ್ ಮಲ್ಲೂರು, ನಿತ್ಯಾನಂದ ಕಾರಂತ ಮಾತನಾಡಿದರು. ಬಳಿಕ ಸತೀಶ್ ಅವರನ್ನು ಗೌರವಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷ ಎಂ. ಉಗ್ಗಪ್ಪ ಶೆಟ್ಟಿ, ಪ್ರ.ಕಾರ್ಯದರ್ಶಿ ಕೆ. ರಾಮಚಂದ್ರ ಹೊಳ್ಳ, ಜತೆ ಕಾರ್ಯದರ್ಶಿ ಎನ್. ಮೋಹನ್ ಹೆಗ್ಡೆ, ಖಜಾಂಚಿ ಎಸ್. ಜಯರಾಮ ಶೆಟ್ಟಿ, ನಿರ್ದೇಶಕ ಗೋಪಾಲಕೃಷ್ಣ ಮಯ್ಯ, ದೀನನಾಥ ರೈ, ಬಿ. ಅನಂತರಾಮ ಭಟ್, ರೋಹಿಣಿ ಬಾೖ, ಸುಮಿತ್ರಾ ಎ., ಲಕ್ಷ್ಮಣ ಶೆಟ್ಟಿ, ಮಾಜಿ ವ್ಯವಸ್ಥಾಪನ ನಿರ್ದೇಶಕರಾದ ಇಂದಿರಾ ಕುಮಾರಿ, ನಾರಾಯಣ ಕಾಮತ್, ಕೆ. ದಿನಕರ್, ಗೌರವ ಆಹ್ವಾನಿತರಾದ ದೇವದಾಸ್, ಶಾಂತಾ ರಾಮ ಕಿಣಿ, ಪ್ರೇಮಾ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ