Road Mishap; ಸ್ಕೂಟರ್ ಢಿಕ್ಕಿ: ಪಾದಚಾರಿಗೆ ಗಾಯ
Team Udayavani, Feb 18, 2024, 11:21 PM IST
ಮಣಿಪಾಲ: ಕೊಡವೂರಿನ ಸುರೇಶ್ ಪೂಜಾರಿ (76) ಅವರು ಫೆ. 16ರ ಸಂಜೆ ಅಲೆವೂರು ಜೋಡು ರಸ್ತೆ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಪ್ರತಿಮಾ ಅವರು ಚಲಾಯಿಸುತ್ತಿದ್ದ ಸ್ಕೂಟರ್ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಪರಿಣಾಮ ಪಾದಚಾರಿ ಸುರೇಶ್ ಅವರಿಗೆ ತಲೆ, ಮುಖ, ಬಲಗಾಲಿಗೆ ತೀವ್ರ ಗಾಯವಾಗಿದೆ. ಪ್ರತಿಮಾ ಕೂಡ ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು ಅವರಿಗೂ, ಅವರ ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿದೆ.