ಕುಂದಾಪುರ ಜೋತಿಷಿಯಿಂದ ಗೋವಾದಲ್ಲಿ ಯುವತಿಯ ಮೇಲೆ ಅತ್ಯಾಚಾರ


Team Udayavani, Oct 8, 2017, 6:00 AM IST

Rape-goa-kundapur.jpg

ಕೋಟ:  ದೇವಮಾನವ ಎಂದು ಕರೆದುಕೊಳ್ಳುತ್ತಿದ್ದ ಕುಂದಾಪುರ ಮೂಲದ ಯೋಗ ಗುರು ಹಾಗೂ  ಜೋತಿಷಿಯೊಬ್ಬ ಗೋವಾದಲ್ಲಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದು, ವಾಸ್ಕೊ ಪೊಲೀಸರು ಆತನ  ಪತ್ತೆಗಾಗಿ ಹುಟ್ಟೂರು ಕೋಟ ಪೊಲೀಸ್‌ ಠಾಣೆ ವ್ಯಾಪ್ತಿಯ ಗಾವಳಿಗೆ ಶನಿವಾರ ಭೇಟಿ ನೀಡಿ ಶೋಧ ನಡೆಸಿದ್ದಾರೆ.

ಬಿದ್ಕಲ್‌ಕಟ್ಟೆ ಸಮೀಪ ಗಾವಳಿಯ ನಿವಾಸಿ ರವಿಶಂಕರ್‌ ಈ ಪ್ರಕರಣದ ಆರೋಪಿ. ಈತ  ಈ ಹಿಂದೆ ಬೆಂಗಳೂರಿನಲ್ಲಿ ವಾಸವಾಗಿದ್ದು, ಯೋಗ, ವಾಸ್ತುಶಾಸ್ತ್ರ, ಜೋತಿಷದಲ್ಲಿ ಪಾಂಡಿತ್ಯ ಹೊಂದಿದ್ದೇನೆ ಎಂದು ಜನರನ್ನು  ನಂಬಿಸುತ್ತಿದ್ದ  ಹಾಗೂ ಸ್ವಲ್ಪ ಸಮಯದ ಹಿಂದೆ ಗೋವಾಕ್ಕೆ ತೆರಳಿ ಅನುಯಾಯಿಗಳೊಂದಿಗೆ ತನ್ನ ಚಟುವಟಿಕೆ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.

ಘಟನೆಯ ಹಿನ್ನೆಲೆ: ದೌರ್ಜನ್ಯಕ್ಕೊಳಗಾದ 19ರ ಹರೆಯದ ಯುವತಿ ಮೂಲತಃ ಮಹಾ ರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಆಕ್ರಾದವಳಾ ಗಿದ್ದು,ಪ್ರಸ್ತುತ ಗೋವಾದ ವಾಸ್ಕೊದಲ್ಲಿ ನೆಲೆಸಿದ್ದಳು. ಈಕೆಗೆ ಪರಿಚಿತನಾದ ಕರ್ನಾಟಕದ ನಿಪ್ಪಾಣಿಯ ಸಂತೋಷ್‌ ಕುಂಭಾರ್‌ ಎಂಬಾತ ತವರೂರು ಆಕ್ರಾಗೆ ಬಿಡುವುದಾಗಿ ಹೇಳಿ ವಾಹನ ಹತ್ತಿಸಿಕೊಂಡು  ಮಾರ್ಗಮಧ್ಯದಲ್ಲಿ ಆಕೆಗೆ ತಂಪು ಪಾನೀಯದಲ್ಲಿ ಮಾದಕ ದ್ರವ್ಯ ಬೆರೆಸಿ ಕುಡಿಸಿ ಗೋವಾದ ಮಪುಸಾದ ಮನೆಯೊಂದಕ್ಕೆ ಕರೆತಂದಿದ್ದ. ಇಲ್ಲಿ  ರವಿಶಂಕರ್‌  ಆಕೆಯ ಮೇಲೆ ಅತ್ಯಾಚಾರ ಎಸಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ದೂರಿದ್ದಾಳೆ. 

ಕುಂಭಾರ್‌ ಪರಿಚಿತ ಎಂಬ ವಿಶ್ವಾಸದಿಂದ ಶುಕ್ರವಾರ ಯುವತಿ ಅವನ ಜತೆಗೆ ಹುಟ್ಟೂರಿಗೆ ಕಾರಿನಲ್ಲಿ ಹೊರಟಿದ್ದಳು.ಆದರೆ ಈ ವಿಶ್ವಾಸವೇ ಅವಳಿಗೆ ಮುಳುವಾಗಿದೆ. ಮಾದಕ ದ್ರವ್ಯ  ಬೆರೆಸಿದ ತಂಪು ಪಾನೀಯ ಕುಡಿದು ಪ್ರಜ್ಞೆ ತಪ್ಪಿದ ಯುವತಿಯನ್ನು ಸಂತೋಷ್‌ ಮಪುಸಾದ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಆರೋಪಿ ರವಿಶಂಕರ್‌ ಮತ್ತು ಹಿಂಬಾಲಕ ನಿಖೀಲ್‌ ಚವಾಣ್‌ ಮೊದಲೇ ಈ ಮನೆಯಲ್ಲಿ ಇದ್ದರು. ಯುವತಿಯನ್ನು ಮನೆಯೊಳಗೆ ಬಿಟ್ಟ ಬಳಿಕ ಸಂತೋಷ್‌ ಕುಂಭಾರ್‌ ಮತ್ತು ನಿಖೀಲ್‌ ಚವಾಣ್‌ ಹೊರಗೆ ಹೋಗಿದ್ದಾರೆ. ಅನಂತರ ರವಿಶಂಕರ್‌ ಅತ್ಯಾಚಾರ ಎಸಗಿ, ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಸುಮ್ಮನೆ ಬಿಡುವು ದಿಲ್ಲ ಎಂದು ಬೆದರಿಕೆಯೊಡ್ಡಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
 
ಹುಟ್ಟೂರಿನಲ್ಲಿ  ಶೋಧ: ಈ ಕುರಿತು  ವಾಸ್ಕೊ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾ ಗಿದ್ದು, ಅಲ್ಲಿನ ಪೊಲೀಸರು ಶನಿವಾರ ಆತನ ಹುಟ್ಟೂರು ಬಿದ್ಕಲ್‌ಕಟ್ಟೆ ಸಮೀಪ ಗಾವಳಿಗೆ ಭೇಟಿ ನೀಡಿ ಶೋಧ ನಡೆಸಿದ್ದಾರೆ. ಅಲ್ಲಿ ಆರೋಪಿಯ ಕುರಿತು ಯಾವುದೇ ಮಾಹಿತಿ ಸಿಗದಿರುವುದರಿಂದ ಗೋವಾಕ್ಕೆ ವಾಪಸಾಗಿದ್ದಾರೆ ಎಂದು ತಿಳಿದು ಬಂದಿದೆ. ಜೋತಿಷಿಯ ವಿರುದ್ಧ ಅತ್ಯಾಚಾರ, ವಿಷಪ್ರಾಶನ ಮತ್ತು ಸಂತೋಷ್‌ ಕುಂಭಾರ್‌ ಹಾಗೂ ನಿಖೀಲ್‌ ಚವಾಣ್‌ ವಿರುದ್ಧ ಅತ್ಯಾಚಾರಕ್ಕೆ ಸಹಕರಿಸಿದ ಪ್ರಕರಣಗಳನ್ನು ದಾಖಲಿಸಲಾಗಿದೆ. 

ಆರೋಪಿಯನ್ನು ಹುಡುಕಿಕೊಂಡು ಬಂದಿದ್ದ ವಾಸ್ಕೊ ಪೊಲೀಸರು ರವಿಶಂಕರ್‌ನ ಆಶ್ರಮ ಹಾಗೂ  ಇತರ ಸ್ಥಳಗಳಲ್ಲಿ ಹುಡುಕಾಡಿದ್ದಾರೆ. ಆದರೆ ರವಿಶಂಕರ್‌ ಅವರ ಕೈಗೆ ಸಿಕ್ಕಿಲ್ಲ. ಕುಂಭಾರ್‌ ಮತ್ತು ಚವಾಣ್‌ರನ್ನು ಬಂಧಿಸಿರುವ ವಾಸ್ಕೊ ಪೊಲೀಸರು ಅವರಿಂದ ರವಿಶಂಕರ್‌ನ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ರವಿಶಂಕರ್‌ನ ಸುಳಿವು ಸಿಕ್ಕಿದೆ. ಆದಷ್ಟು ಬೇಗ ಅವನು ಸೆರೆಯಾಗಲಿದ್ದಾನೆ ಎಂದು ವಾಸ್ಕೊದ ಪೊಲೀಸರು ಹೇಳಿದ್ದಾರೆ. 

ಬೆಂಗಳೂರಿನಲ್ಲಿ  ದೇವಮಾನವನಾದ 
ರವಿಶಂಕರ್‌ನ ಹುಟ್ಟೂರು ಗಾವಳಿ. ಊರಲ್ಲಿರುವಾಗ ಚಿಕ್ಕಪುಟ್ಟ ಪೌರೋಹಿತ್ಯ ಮಾಡುತ್ತಿದ್ದ ರವಿಶಂಕರ್‌ ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಹೋಗಿ ದೇವಮಾನವನಾಗಿ ಬದಲಾಗಿದ್ದ. ಜೋತಿಷ, ವಾಸ್ತು ಪಂಡಿತನೆಂದು ಜನರನ್ನು ನಂಬಿಸಿದ್ದ. ಯೋಗ ಗುರು ಎಂದು ಹೇಳಿಕೊಂಡು ಯೋಗವನ್ನೂ ಕಲಿಸುತ್ತಿದ್ದ. ಬಳಿಕ ಬೆಂಗಳೂರಿನಿಂದ ವಾಸ್ಕೊಗೆ ಹೋಗಿ ಅಲ್ಲಿಯೂ ತನ್ನ ದಂಧೆಯನ್ನು ಪ್ರಾರಂಭಿಸಿದ್ದ. ವಾಸ್ಕೊದಲ್ಲಿ ಅವನಿಗೆ ಕೆಲವು  ಅನುಯಾಯಿಗಳು ಇದ್ದರು ಎನ್ನಲಾಗಿದೆ. 

ನಮ್ಮನ್ನು ಸಂಪರ್ಕಿಸಿಲ್ಲ 
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಗೋವಾ ರಾಜ್ಯದ ಪೊಲೀಸರು ಆರೋಪಿಯ ಹುಟ್ಟೂರು ಉಡುಪಿ ಜಿಲ್ಲೆಯ ಕೋಟಕ್ಕೆ ಬಂದು ಮಾಹಿತಿ ಪಡೆದಿರುವ ಬಗ್ಗೆ ಯಾವುದೇ ವಿಚಾರ ಗೊತ್ತಾಗಿಲ್ಲ. ಅವರ ತನಿಖೆಗೆ ಜಿಲ್ಲಾ ಪೊಲೀಸರ ಸಹಕಾರ ಕೋರಿದಲ್ಲಿ ಸಹಕರಿಸಲು ಸಿದ್ಧ.
– ಡಾ| ಸಂಜೀವ ಎಂ. ಪಾಟೀಲ್‌,
 ಉಡುಪಿ ಎಸ್‌ಪಿ

ಟಾಪ್ ನ್ಯೂಸ್

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.