ಮಣಿಪಾಲ: ಉದಯವಾಣಿ ಕಚೇರಿಯಲ್ಲಿ ಹಿರಿಯ ನಟಿ ಹರಿಣಿಯವರಿಗೆ ಅಭಿನಂದನೆ
Team Udayavani, Apr 29, 2022, 3:16 PM IST
ಮಣಿಪಾಲ: ಸ್ವಾತಂತ್ರ್ಯ ಹೋರಾಟಗಾರ, ತುಳು ಹೋರಾಟಗಾರ ಎಸ್.ಯು. ಪಣಿಯಾಡಿಯವರ ಪುತ್ರಿ, ಚಲನಚಿತ್ರ ರಂಗದ ಹಿರಿಯ ನಟಿ ಹರಿಣಿಯವರನ್ನು ಶುಕ್ರವಾರ ಮಣಿಪಾಲದ ಉದಯವಾಣಿ ಕಚೇರಿಯಲ್ಲಿ ಅಭಿನಂದಿಸಲಾಯಿತು.
ಮಣಿಪಾಲ್ ಮೀಡಿಯ ನೆಟ್ವರ್ಕ್ ಲಿ. ಆಡಳಿತ ನಿರ್ದೇಶಕ ಮತ್ತು ಸಿಇಒ ವಿನೋದಕುಮಾರ್ ಅವರು ಶಾಲು, ಸ್ಮರಣಿಕೆ ನೀಡಿ ಹರಿಣಿಯವರನ್ನು ಅಭಿನಂದಿಸಿದರು. ಹರಿಣಿಯವರು ಕನ್ನಡ ಚಲನಚಿತ್ರದ ಯಶಸ್ವೀ ನಟಿಯಾಗಿರುವುದು ಮಾತ್ರವಲ್ಲದೆ, ಮಣಿಪಾಲದ ಪ್ರೆಸ್ ಸ್ಥಾಪನೆಗೆ ಕಾರಣರಾದ ಎಸ್.ಯು.ಪಣಿಯಾಡಿಯವರ ಪುತ್ರಿ ಎನ್ನುವುದು ಉಲ್ಲೇಖನೀಯ.
ಪಣಿಯಾಡಿಯವರು ಸ್ವಾತಂತ್ರ್ಯ ಹೋರಾಟ ಮತ್ತು ತುಳು ಭಾಷೆ ಸಂಸ್ಕೃತಿಗೆ ಕೊಟ್ಟ ಕೊಡುಗೆ ಗಮನಾರ್ಹವಾದುದು. ಹಿರಿಯ ನಟಿ ಹರಿಣಿಯವರನ್ನು ಸಮ್ಮಾನಿಸುವ ಅವಕಾಶ ಬಂದೊದಗಿರುವುದು ಅತೀ ಸಂತಸ ತಂದಿತ್ತಿದೆ ಎಂದು ವಿನೋದಕುಮಾರ್ ಹೇಳಿದರು.
ಉದಯವಾಣಿ ಪತ್ರಿಕೆಯಿಂದ ಸಂದರ್ಶನ ಮಾತ್ರವಲ್ಲದೆ, ಪ್ರೀತಿಯ ಕರೆ ನೀಡಿ ನನ್ನ ಮಾತೃಭಾಷೆಯಲ್ಲಿ ಮಾತನಾಡಲು ಅವಕಾಶ ಒದಗಿಸಿಕೊಟ್ಟಿರುವುದು ಬಹಳ ಸಂತೋಷ ತರುತ್ತಿದೆ. ನಿಮ್ಮೆಲ್ಲರ ನಡುವೆ ತುಸು ಹೊತ್ತು ಕಳೆದಿರುವುದು ನನಗೆ ಸಂತೃಪ್ತಿ ತಂದಿದೆ ಎಂದು ಹರಿಣಿ ನುಡಿದರು.
ತುಳುಕೂಟದ ವತಿಯಿಂದ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಕಾರ್ಯದರ್ಶಿ ಗಂಗಾಧರ ಕಿದಿಯೂರು ಅವರು ಹರಿಣಿಯವರನ್ನು ಸಮ್ಮಾನಿಸಿದರು. ತುಳು ಸಂಸ್ಕೃತಿಗೂ ಎಸ್.ಯು.ಪಣಿಯಾಡಿಯವರಿಗೂ ಅವಿನಾಭಾವ ಸಂಬಂಧವಿದ್ದು ತುಳುಕೂಟದಿಂದ 27 ವರ್ಷಗಳಿಂದ ಪ್ರತಿ ವರ್ಷ ಪಣಿಯಾಡಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಜೀವನದಲ್ಲಿ ಏನಾದರೂ ಒಂದು ಮಹತ್ತರ ಸಾಧನೆ ಮಾಡಬೇಕೆನ್ನುವುದಕ್ಕೆ ಪಣಿಯಾಡಿಯವರ ಜೀವನ ಸಾಧನೆಯೇ ಉದಾಹರಣೆ. ತುಳುಕೂಟದ ದಶಮಾನೋತ್ಸವಕ್ಕೆ ಹರಿಣಿಯವರ ಸಹೋದರ, ಚಲನಚಿತ್ರರಂಗದ ನಟ ವಾದಿರಾಜರು ಬಂದಿದ್ದರು. ಮುಂದಿನ ವರ್ಷ ಹರಿಣಿಯವರೂ ಬರಬೇಕು ಎಂದು ಜಯಕರ ಶೆಟ್ಟಿ ಆಶಿಸಿದರು.
‘ಉದಯವಾಣಿ’ಯ ಸ್ಥಾಪಕ ಸಂಪಾದಕೀಯ ವಿಭಾಗದ ಮುಖ್ಯಸ್ಥ ಬನ್ನಂಜೆ ರಾಮಾಚಾರ್ಯರ ಪುತ್ರ ಸರ್ವಜ್ಞ ಉಪಸ್ಥಿತರಿದ್ದರು. ಉಪಸಂಪಾದಕಿ ರಾಧಿಕಾ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
D.K,Udupi ಸಿಎನ್ಜಿ ಇಂಧನ ಕೊರತೆ: ಬಂಕ್ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು
Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ
Kundapura ಕಾರು ಡಿವೈಡರ್ ಏರಿ ಪಲ್ಟಿ; ಮೂವರಿಗೆ ಗಾಯ
MUST WATCH
ಹೊಸ ಸೇರ್ಪಡೆ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ