ಶಿರೂರು ಟೋಲ್ ಗೇಟ್ ಆರಂಭ
ಸ್ಥಳೀಯರಿಗೆ ವಿಶೇಷ ರಿಯಾಯಿತಿ ; ಉಡುಪಿ ಜಿಲ್ಲೆಯ 3ನೇ ಟೋಲ್
Team Udayavani, Feb 13, 2020, 5:55 AM IST
ಬೈಂದೂರು: ಬಹುದಿನಗಳ ನಿರೀಕ್ಷೆಯ ಶಿರೂರು ಟೋಲ್ ಪ್ಲಾಜಾ ಫೆ. 12ರಂದು ಕಾರ್ಯಾರಂಭಿಸಿದೆ. ಶಿರೂರು-ಭಟ್ಕಳ ನಡುವೆ ಸಂಚರಿಸುವ ವಾಹನಗಳು ಇನ್ನು ಮುಂದೆ ಶುಲ್ಕ ಪಾವತಿಸಿ ತೆರಳಬೇಕಾಗಿದೆ.
ಫೆ. 9ರಂದು ಆರಂಭವಾಗಬೇಕಿದ್ದ ಟೋಲ್ ಪ್ಲಾಜಾ ಆರಂಭಕ್ಕೆ ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಯಿಂದ ತಡೆಯಾಗಿತ್ತು.
ಸ್ಥಳೀಯರಿಗೆ ರಿಯಾಯಿತಿ
ಹೆದ್ದಾರಿ ಹೋರಾಟ ಸಮಿತಿ ಸೇರಿದಂತೆ ಕಳೆದ ಹಲವು ಸಮಯದ ಹೋರಾಟಕ್ಕೆ ಕಂಪೆನಿ ಹಾಗೂ ಹೆದ್ದಾರಿ ಪ್ರಾಧಿಕಾರ ಸಮ್ಮತಿ ನೀಡಿದೆ. ಟೋಲ್ನ 5 ಕಿ.ಮೀ. ವ್ಯಾಪ್ತಿಯ ಶಿರೂರು ಹಾಗೂ ಬೆಳಕೆ ವ್ಯಾಪ್ತಿಯ ವಾಹನಗಳಿಗೆ ಟೋಲ್ ರಿಯಾಯಿತಿ ಇದೆ.
20 ಕಿ.ಮೀ. ವ್ಯಾಪ್ತಿಯ ಖಾಸಗಿ ವಾಹನಗಳಿಗೆ ತಿಂಗಳ ರಿಯಾಯಿತಿ ದರ 265 ರೂ. ಪಾಸ್ ದೊರೆಯಲಿದೆ. ಸ್ಥಳೀಯ ಶಾಲಾ ವಾಹನ ಹಾಗೂ ಉಡುಪಿ ಜಿಲ್ಲಾ ವಾಹನಗಳಿಗೆ ಶೇ. 50 ರಿಯಾಯಿತಿ ದೊರೆಯಲಿದೆ.
ಸ್ಥಳೀಯ ಶಾಸಕರು, ಸಂಸದರು, ಮಾಜಿ ಶಾಸಕರು ಕೂಡ ಟೋಲ್ ರಿಯಾಯಿತಿ ಕುರಿತು ಹಾಗೂ ಹೆದ್ದಾರಿಯ ಸಮರ್ಪಕ ಕಾಮಗಾರಿಗಾಗಿ ಪ್ರತಿಭಟನೆ ಹಾಗೂ ಹೋರಾಟ ನಡೆಸಿದ್ದರು. ಉಡುಪಿ ಜಲ್ಲೆಯ 3ನೇ ಟೋಲ್ ಪ್ಲಾಜಾ ಇದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ