ಚಟುವಟಿಕೆ ಆರಂಭಿಸಿದ ಪೇಜಾವರ ಶ್ರೀ
Team Udayavani, Aug 24, 2017, 6:15 AM IST
ಉಡುಪಿ: ಮಣಿಪಾಲ ಆಸ್ಪತ್ರೆಯಲ್ಲಿ ರವಿವಾರ ಹರ್ನಿಯ ಶಸ್ತ್ರಚಿಕಿತ್ಸೆಗೆ ಒಳಗಾದ ಶ್ರೀಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡು ಶ್ರೀಕೃಷ್ಣಮಠಕ್ಕೆ ಆಗಮಿಸಿದ್ದು ತಮ್ಮ ದೈನಂದಿನ ಚಟುವಟಿಕೆಗಳನ್ನು ನಿಧಾನವಾಗಿ ಮಾಡುತ್ತಿದ್ದಾರೆ.
ವೈದ್ಯರು ಮಾತಾಡಬಾರದು, ವಿಶ್ರಾಂತಿ ತೆಗೆದುಕೊಳ್ಳಬೇಕೆಂದು ಸಲಹೆ ನೀಡಿರುವುದರಿಂದ ಸಿಬಂದಿ ಶ್ರೀಗಳ ಜತೆ ಯಾರಿಗೂ ಮಾತನಾಡಲು ಅವಕಾಶ ಕೊಡುತ್ತಿಲ್ಲ. ಶ್ರೀಗಳವರನ್ನು ಭೇಟಿ ಮಾಡಲು ಜನರು ಬಂದರೂ ಕೇವಲ ಭೇಟಿಯನ್ನಷ್ಟೇ ಸಿಬಂದಿ ಮಾಡಿಸುತ್ತಿದ್ದಾರೆ. ಬಡಗುಮಾಳಿಗೆ ಪಕ್ಕದ ವಾದಿರಾಜ ಮಂದಿರದ ಕೊಠಡಿಯಲ್ಲಿ ವಸತಿಯಲ್ಲಿದ್ದಾರೆ.
ಬುಧವಾರ ಶ್ರೀಕೃಷ್ಣನಿಗೆ ಸಾಂಕೇತಿಕವಾಗಿ ಪೂಜೆ ನಡೆಸಿ ಒಂದು ಪ್ರದಕ್ಷಿಣೆಯನ್ನೂ ಬಂದರು. ನಿತ್ಯಾಹಿ°ಕಗಳನ್ನು ಪೂರ್ತಿಯಾಗಿ ನಡೆಸುತ್ತಿದ್ದಾರೆ. ಎಲ್ಲ ಪೂಜೆಗಳನ್ನು ಕಿರಿಯ ಶ್ರೀಗಳು, ಇತರ ಮಠಾಧೀಶರು ನಡೆಸುತ್ತಿದ್ದಾರೆ.