Attur church; ಭರವಸೆ, ನಂಬಿಕೆಯ ಪ್ರಾರ್ಥನೆಗೆ ಫಲ: ಬಿಷಪ್
ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ನಾಲ್ಕನೇ ದಿನದ ಉತ್ಸವ
Team Udayavani, Jan 25, 2024, 1:37 AM IST
ಕಾರ್ಕಳ: ನಮ್ಮನ್ನು ರಕ್ಷಿಸುವ ದೇವರನ್ನು ಅನವರತ ಜ್ಞಾಪಿಸುತ್ತಿರಬೇಕು. ಭರವಸೆ ಹಾಗೂ ನಂಬಿಕೆಯಿಂದ ಕೂಡಿದ ಪ್ರಾರ್ಥನೆ ಫಲ ನೀಡುವುದು. ಜೀವನದಲ್ಲಿ ಪ್ರಾರ್ಥನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಜೆರಾಲ್ಡ್ ಐಸಾಕ್ ಲೋಬೋ ಹೇಳಿದರು.
ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ನಾಲ್ಕನೇ ದಿನದ ಬಲಿಪೂಜೆಯನ್ನು ಬುಧವಾರ ನೆರವೇರಿಸಿ ಅವರು ಪ್ರಬೋಧನೆ ನೀಡಿದರು.
ವಿದೇಶಿಗರ ಸಹಿತ ಸಹಸ್ರಾರು ಭಕ್ತರು, ಪಾಲಕ ಸಂತ ಲಾರೆನ್ಸರ ಸಮ್ಮುಖ, ಪವಾಡ ಮೂರ್ತಿಯ ಬಳಿ ಪ್ರಾರ್ಥಿಸಿ ಹರಕೆಯ ಮೋಂಬತ್ತಿ ಬೆಳಗಿಸಿದರು. ಪುಟ್ಟ ಮಕ್ಕಳನ್ನು ದಿವ್ಯ ಬಲಿಪೀಠದ ಮೇಲೆ ಕುಳ್ಳಿರಿಸಿ ಹರಕೆ ತೀರಿಸಿದರು.
ದಿನದ ಇತರ ಬಲಿಪೂಜೆಗಳನ್ನು ಮಂಗಳೂರು ಫಾದರ್ ಮುಲ್ಲರ್ ಚರ್ಚ್ನ ವಂ| ಜಾನ್ ವಾಸ್, ಗಂಗೊಳ್ಳಿಯ ವಂ| ಆಲ್ಬರ್ಟ್ ಕ್ರಾಸ್ತಾ, ಮೂಡುಬೆಳ್ಳೆಯ ವಂ| ಪ್ರದೀಪ್ ಕಡೋಜಾ, ಗುಲ್ಬರ್ಗಾದ ವಂ| ಫ್ರಾನ್ಸಿಸ್ ಮಿನೇಜಸ್, ವಂ| ರಾಬರ್ಟ್ ಕ್ರಾಸ್ತಾ, ಶಿರ್ವದ ವಂ| ಲೆಸ್ಲಿ ಡಿ’ಸೋಜಾ, ಅತ್ತೂರು ಪುಣ್ಯಕ್ಷೇತ್ರದ ವಂ| ಆಲ್ಬನ್ ಡಿ’ಸೋಜಾ, ಉಡುಪಿಯ ವಂ| ರೋಯ್ ಲೋಬೊ ಅರ್ಪಿಸಿದರು. ದಿನದ ಅಂತಿಮ ಬಲಿಪೂಜೆಯನ್ನು ರಾತ್ರಿ 10ಕ್ಕೆ ನೆರವೇರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ