ತಾಲೂಕು ಮಟ್ಟದ ಚೆಸ್ ಪಂದ್ಯಾಟ: ನಿಹಾಲ್ಗೆ ಪ್ರಶಸ್ತಿ
Team Udayavani, Jul 6, 2017, 3:45 AM IST
ಕುಂದಾಪುರ : ಇಲ್ಲಿನ ಕಶ್ವಿ ಚೆಸ್ ಸ್ಕೂಲ್ನಲ್ಲಿ ಜು.2ರಂದು ನಡೆದ ತಾಲೂಕು ಮಟ್ಟದ ಚೆಸ್ ಪಂದ್ಯಾಟದಲ್ಲಿ ಸ.ಹಿ.ಪ್ರಾ ಶಾಲೆ ಕಾಳಾವರದ ನಿಹಾಲ್ ಪ್ರಥಮ ಸ್ಥಾನ ಗಳಿಸಿರುತ್ತಾರೆ.
ಕಾರ್ಕಡ ಸ.ಹಿ.ಪ್ರಾ. ಶಾಲೆಯ ಕಾರ್ತಿಕ್ ದ್ವಿತೀಯ, ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ಅನಿರುದ್ಧ ತೃತೀಯ ಪ್ರಶಸ್ತಿ ಪಡೆದರೆ, 4ನೇ ಸ್ಥಾನವನ್ನು ಕುಂದಾಪುರ ಬೋರ್ಡ್ ಹೈಸ್ಕೂಲ್ನ ಶ್ರೇಯಸ್, 5ನೇ ಸ್ಥಾನವನ್ನು ಕೋಟ ಪಡುಕೆರೆಯ ನಾಗಭೂಷಣ, 6ನೇ ಸ್ಥಾನವನ್ನು ಶ್ರುತಿ, 7ನೇ ಸ್ಥಾನವನ್ನು ಸುಶಾನ್, 8ನೇ ಸ್ಥಾನವನ್ನು ಛಾಯ, 9ನೇ ಸ್ಥಾನವನ್ನು ಮಾನಸ ಹಾಗೂ 10ನೇ ಸ್ಥಾನವನ್ನು ಶ್ರೀವಾಣಿ ಪಡೆದುಕೊಂಡರು.
ವಿಶೇಷ ಬಹುಮಾನವಾಗಿ ಬಸೂÅರು ಶಾರದ ಆಂಗ್ಲ ಮಾದ್ಯಮ ಶಾಲೆಯ ಸಾನಿಕ, ಹಂಗಳೂರಿನ ಸೈಂಟ್ ಪಿಯೂಸ್ನ ಆಯ್ಯುಷ್ ಪೂಜಾರಿ ಮತ್ತು ನಿಶಾಂತ, ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್ನ ಚೈತಾಲಿ ಪಡೆದುಕೊಂಡರು. ಈ ಎಲ್ಲಾ ವಿದ್ಯಾರ್ಥಿಗಳು ಕಶ್ವಿ ಚೆಸ್ ಸ್ಕೂಲ್ ಕುಂದಾಪುರದಲ್ಲಿ ತರಬೇತಿ ಪಡೆದಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೆಂಕಟೇಶ ಆಚಾರ್ಯ ಕೋಟೇಶ್ವರ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಬಸೂÅರು ಶ್ರೀ ಶಾರದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸೂರಜ ಶೆಟ್ಟಿ, ಕಶ್ವಿ ಚೆಸ್ ಸ್ಕೂಲಿನ ತರಬೇತುದಾರ ಗುರುರಾಜ್ ಶೆಟ್ಟಿ ಉಪಸ್ಥಿತರಿದ್ದರು.
ಸಚಿನ್ ಶೆಟ್ಟಿ, ಪ್ರದೀಪ ರಾವ್ ಮತ್ತು ದೀಪಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದ್ದರು.