ಸಾರ್ವಜನಿಕ ಶೌಚಾಲಯಕ್ಕೆ ಟ್ಯಾಂಕರ್ ನೀರು !
Team Udayavani, May 10, 2019, 6:15 AM IST
ಉಡುಪಿ: ನೀರಿನ ಬಿಸಿ ಕೇವಲ ಮನೆ, ಹೊಟೇಲ್, ಧಾರ್ಮಿಕ ಕೇಂದ್ರಗಳಿಗೆ ಮಾತ್ರವಲ್ಲದೆ ಸಾರ್ವಜನಿಕ ಶೌಚಾಲಯಕ್ಕೂ ತಟ್ಟಿದೆ.
ಸರಕಾರಿ ಕಚೇರಿ ಕೆಲಸಗಳಿಗಾಗಿ ನಗರಕ್ಕೆ ಬರುವ ಜನರು ಹಾಗೂ ಪಟ್ಟಣದ ನಿವಾಸಿಗಳು ಬಸ್ ನಿಲ್ದಾಣದಲ್ಲಿರುವ ಶೌಚಾಲಯಕ್ಕೆ ಹೋಗುವಂತಹ ಅನಿವಾರ್ಯತೆ ಬಂದಿದೆ. ಇದಲ್ಲದೆ ನೀರಿನ ಕೊರತೆಯಾಗಿರುವುದರಿಂದ ಬಸ್ ನಿಲ್ದಾಣ ಆಸುಪಾಸಿನ ಫ್ಲ್ಯಾಟ್ ನಿವಾಸಿಗಳು “ತುರ್ತು’ ಕರೆ ಬಂದರೆ ಸಾರ್ವಜನಿಕ ಶೌಚಾಲಯವನ್ನು ಹುಡುಕಿ ಹೋಗಬೇಕಾಗಿದೆ. ನಗರಸಭೆ ಸುಪರ್ದಿಯಲ್ಲಿರುವ ಶೌಚಾಲಯ ನಿರ್ವಹಣೆಕಾರರು ಅಧಿಕ ಹಣ ನೀಡಿ ಟ್ಯಾಂಕರ್ ಮೂಲಕ ನೀರು ತರಿಸಿಕೊಂಡು ನಿರ್ವಹಿಸುತ್ತಿ¨ªಾರೆ.
ಸಾರ್ವಜನಿಕ ಶೌಚಾಲಯದವರು ಹಿಂದೆ ಪಡೆಯುತ್ತಿರುವ ದರವನ್ನೇ ಈಗಲೂ ಪಡೆದುಕೊಳ್ಳುತ್ತಿ¨ªಾರೆ. ಮಣಿಪಾಲ, ಅಲೆವೂರು, ಆತ್ರಾಡಿ, ಮಲ್ಪೆ, ಸಂತೆಕಟ್ಟೆ, ಅಂಬಾಗಿಲು, ಅಂಬಲಪಾಡಿ ಸೇರಿದಂತೆ ವಿವಿಧ ಪ್ರದೇಶಗಳಿಗೆ ತೆರಳುವ ವಾಹನಗಳು ನಗರದ ಸಿಟಿ ಬಸ್ ನಿಲ್ದಾಣಕ್ಕೆ ಬಂದು ತೆರಳುತ್ತದೆ. ನಿತ್ಯ 500ಕ್ಕೂ ಹೆಚ್ಚಿನ ಮಂದಿ ಸಾರ್ವಜನಿಕ ಶೌಚಾಲಯವನ್ನು ಉಪಯೋಗಿಸುತ್ತಿ¨ªಾರೆ. ಇದೇ ರೀತಿ ಇತರ ಸಾರ್ವಜನಿಕ ಶೌಚಾಲಯದವರ ಸ್ಥಿತಿಯೂ ಹೀಗೆ ಇದೆ.
ಪ್ರತಿನಿತ್ಯ ಶೌಚಾಲಯದಿಂದ 1,500 ರೂ., ಆದಾಯ ಬರುತ್ತದೆ. 2 ಸಾವಿರ ರೂ. ನೀಡಿ ಟ್ಯಾಂಕರ್ ನೀರು ತರಿಸಿಕೊಳ್ಳುತ್ತಿದ್ದೇವೆ. ನಷ್ಟವಾದರೂ ಪರವಾಗಿಲ್ಲ ಜನರ ಸೇವೆ ಮುಖ್ಯ ಎಂದು ಶೌಚಾಲಯದ ಉಸ್ತುವಾರಿ ಅಜಯಕುಮಾರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ವ್ಯವಹಾರದಲ್ಲಿ ನಷ್ಟ: ಬಾವಿಗೆ ಹಾರಿ ಆತ್ಮಹತ್ಯೆ
Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ
ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 2 ರಂದು ಕುಬೇರ ಲಕ್ಷ್ಮಿ ಪ್ರತಿಷ್ಠಾ ವರ್ಧಂತಿ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ