ತೆಕ್ಕಟ್ಟೆ ಸರ್ಕಲ್: ರಸ್ತೆ ವಿಭಾಜಕದ ಮೇಲೇರಿದ ಲಾರಿ
Team Udayavani, Mar 16, 2017, 2:09 PM IST
ತೆಕ್ಕಟ್ಟೆ: ಇಲ್ಲಿನ ರಾ.ಹೆ 66 ತೆಕ್ಕಟ್ಟೆ ಸರ್ಕಲ್ನಲ್ಲಿ ಚಲಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ರಸ್ತೆ ವಿಭಾಜಕದ ಮೇಲೇರಿದ ಘಟನೆ ಮಾ.14 ರ ರಾತ್ರಿ 10:25 ರ ಸುಮಾರಿಗೆ ಸಂಭವಿಸಿದೆ.
ಕಾರ್ಕಳದಿಂದ ಕುಮಟಾದೆಡೆಗೆ ಜಲ್ಲಿಕಲ್ಲು ಸಾಗಿಸುತ್ತಿದ್ದ ಲಾರಿ ಅತೀ ವೇಗದಿಂದ ಬಂದು ರಾ.ಹೆ. 66ರಲ್ಲಿ ಅಳವಡಿಸಲಾದ ಸೋಲಾರ್ ಸಿಗ್ನಲ್ ದೀಪಕ್ಕೆ ನೇರವಾಗಿ ಢಿಕ್ಕಿ ಹೊಡೆದು ರಸ್ತೆ ವಿಭಾಜಕದ ನಡುವಿನ ತಡೆಯನ್ನು ಏರಿ ನಿಂತಿದೆ. ಘಟನೆಯ ತೀವ್ರತೆಗೆ ಲಾರಿಯ ಮುಂಭಾಗದ ಮೈನ್ ಎಕ್ಸೆಲ್ನ ಬ್ಲೇಡ್ ಸೆಟ್ಗಳೆರಡು ತುಂಡಾಗಿದ್ದು ಪರಿಣಾಮವಾಗಿ ಲಾರಿ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ತಪ್ಪಿದ ಸಂಭವನೀಯ ಅವಘಡ
ಸದಾ ಜನ ಸಂಚಾರವಿರುವ ತೆಕ್ಕಟ್ಟೆ ಪ್ರಮುಖ ಸರ್ಕಲ್ನಲ್ಲಿ ಈ ಅವಘಡ ಸಂಭವಿಸುವ ಸಂದರ್ಭದಲ್ಲಿ ಜನ ಸಂಚಾರವಿಲ್ಲದಿರುವ ಹಿನ್ನೆಲೆಯಲ್ಲಿ ಸಂಭವನೀಯ ಅವಘಡವೊಂದು ತಪ್ಪಿದಂತಾಗಿದೆ.
ರಾ.ಹೆ. 66ರಲ್ಲಿ ದಾರಿದೀಪ ಅಳವಡಿಸುವಂತೆ
ಸ್ಥಳೀಯರ ಆಗ್ರಹ
ರಾ.ಹೆ. 66 ಕುಂದಾಪುರ – ಸುರತ್ಕಲ್ ಚತುಷ#ಥ ರಸ್ತೆ ಕಾಮಗಾರಿಯ ಸಂದರ್ಭದಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಯಾವುದೇ ರೀತಿಯ ದಾರಿದೀಪ ಅಳವಡಿಸದಿರುವುದರಿಂದ ರಾತ್ರಿ ವೇಳೆಯಲ್ಲಿ ಈ ಭಾಗದಲ್ಲಿ ಮಾರ್ಗದಲ್ಲಿ ಕತ್ತಲು ಆವರಿಸಿ ಹೆದ್ದಾರಿಯಲ್ಲಿ ಸಂಚರಿಸುವವಾಹನ ಸವಾರರಿಗೆ ಗೊಂದಲ ಏರ್ಪಟ್ಟು ರಸ್ತೆ ಅವಘಡಗಳಿಗೆ ಕಾರಣವಾಗುತ್ತಿದೆ ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಸಾರ್ವಜನಿಕ ಸಮಸ್ಯೆ ತುರ್ತಾಗಿ ಸ್ಪಂದಿಸುವಂತೆ ತೆಕ್ಕಟ್ಟೆ ಬಜರಂಗ ದಳದ ಸಂಚಾಲಕ ಶ್ರೀನಾಥ್ ಶೆಟ್ಟಿ ಮೇಲ್ತಾರುಮನೆ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಗಾಯಿತ್ರಿ ಸಿದ್ದೇಶ್ವರ ಪರ ಯದುವೀರ್ ಒಡೆಯರ್ ರೋಡ್ ಶೋ
KEA ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ವಿರುದ್ದ ತನಿಖೆಗೆ ಆಗ್ರಹ
ಅನ್ಯ ರಾಜ್ಯದ ಅಪರಿಚಿತ ಶಸ್ತ್ರಧಾರಿಗಳಿಂದ ಜೀವಬೆದರಿಕೆ: ಕಾಂಗ್ರೆಸ್ ವಿಪ ಸದಸ್ಯ ಸುನೀಲಗೌಡ
Stock Market: ಆರಂಭಿಕ ವಹಿವಾಟಿನಲ್ಲಿ ಮುಗ್ಗರಿಸಿದ ಷೇರುಪೇಟೆ ಸೆನ್ಸೆಕ್ಸ್; ಭಾರೀ ನಷ್ಟ
Pendrive Case; ನಿರೀಕ್ಷಣಾ ಜಾಮೀನು ಅರ್ಜಿ ವಾಪಾಸ್ ಪಡೆದ ರೇವಣ್ಣ