ಉಡುಪಿಯಲ್ಲಿ ಬೃಹತ್ ಮರ ಧರಾಶಾಹಿ
Team Udayavani, Jul 9, 2018, 7:00 AM IST
ಉಡುಪಿ: ನಗರದ ಬಾಲಕಿಯರ ಸ.ಪ.ಪೂ. ಕಾಲೇಜು ಎದುರಿನ ಬೃಹತ್ ಅಶ್ವತ್ಥ ಮರ ರವಿವಾರ ಮುಂಜಾವ ಧರೆಗುರುಳಿದೆ. ರಜೆ ಆದ್ದರಿಂದ ಮತ್ತು ಬೆಳಗ್ಗೆ 6 ಗಂಟೆಯ ಸುಮಾರಿಗೆ ಘಟನೆ ನಡೆದಿರುವುದರಿಂದ ಭಾರೀ ಅನಾಹುತವೊಂದು ತಪ್ಪಿಹೋಗಿದೆ.
ಮೊದಲು ಅಶ್ವತ್ಥ ಮರದ ಒಂದು ಭಾಗ ಮುರಿದು ಕಾಲೇಜು ಆವರಣದೊಳಗಿದ್ದ ಮಾವಿನ ಮರದ ಮೇಲೆ ಬಿದ್ದಿದೆ. ಬಳಿಕ ಮಾವಿನಮರ ಬುಡಸಮೇತ ಕಿತ್ತು ಕಟ್ಟಡಕ್ಕೆ ತೀರ ಸನಿಹದಲ್ಲೇ ನೆಲಕ್ಕುರುಳಿದೆ. ಬಳಿಕ ಅಶ್ವತ್ಥಮರವೂ ಬಲಬದಿ ರಸ್ತೆಗೆ ಉರುಳಿದೆ.
ಇತರ ದಿನಗಳಲ್ಲಿ ಕಾಲೇಜಿನಲ್ಲಿ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿರುತ್ತಿದ್ದರು. ಇಲ್ಲೇ ಶಿಕ್ಷಕರ ತರಬೇತಿ ಸಂಸ್ಥೆ (ಡಯಟ್) ಕೂಡ ಇದೆ. ಕೆಥೋಲಿಕ್ ಸೆಂಟರ್ ಕಟ್ಟಡದಿಂದ ಹರ್ಷ ಹೊಸ ಶೋರೂಂಗೆ ತೆರಳುವ ರಸ್ತೆ ಇದಾಗಿದ್ದು ವಾರದ ಇತರ ದಿನಗಳಲ್ಲಿ ದಟ್ಟನೆ ಇರುತ್ತದೆ. ರಜೆ ಇದ್ದುದರಿಂದ ಎಲ್ಲರೂ ಪಾರಾಗಿದ್ದಾರೆ.
ವಿದ್ಯುತ್ ಕಂಬಗಳಿಗೆ ಹಾನಿ
ಮರ ವಿದ್ಯುತ್ ತಂತಿಗೆ ಬಿದ್ದು ಇಲ್ಲಿನ 5 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಒಂದು ವಿದ್ಯುತ್ ಕಂಬ ಮರದ ಅಡಿ ಇದೆ. ಕಂಬಗಳನ್ನು ಪುನರ್ನೆಡುವ ಕೆಲಸವನ್ನು ಮೆಸ್ಕಾಂ ಸಿಬಂದಿ ಬೆಳಗ್ಗಿನಿಂದಲೇ ಆರಂಭಿಸಿ ಸಂಜೆಯವರೆಗೂ ನಡೆಸಿದರು. ಶಾಲೆಯ ಮುಖ್ಯ ದ್ವಾರಕ್ಕೆ ಅಡ್ಡಲಾಗಿ ಮರ ಬಿದ್ದಿರುವುದರಿಂದ ಈ ದ್ವಾರದಿಂದ ಪ್ರವೇಶ ಕಷ್ಟಸಾಧ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ