![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
ಉಡುಪಿಯಲ್ಲಿ ಬೃಹತ್ ಮರ ಧರಾಶಾಹಿ
Team Udayavani, Jul 9, 2018, 7:00 AM IST
![0807udsb3.jpg](https://www.udayavani.com/wp-content/uploads/2018/07/9/0807udsb3.jpg)
ಉಡುಪಿ: ನಗರದ ಬಾಲಕಿಯರ ಸ.ಪ.ಪೂ. ಕಾಲೇಜು ಎದುರಿನ ಬೃಹತ್ ಅಶ್ವತ್ಥ ಮರ ರವಿವಾರ ಮುಂಜಾವ ಧರೆಗುರುಳಿದೆ. ರಜೆ ಆದ್ದರಿಂದ ಮತ್ತು ಬೆಳಗ್ಗೆ 6 ಗಂಟೆಯ ಸುಮಾರಿಗೆ ಘಟನೆ ನಡೆದಿರುವುದರಿಂದ ಭಾರೀ ಅನಾಹುತವೊಂದು ತಪ್ಪಿಹೋಗಿದೆ.
ಮೊದಲು ಅಶ್ವತ್ಥ ಮರದ ಒಂದು ಭಾಗ ಮುರಿದು ಕಾಲೇಜು ಆವರಣದೊಳಗಿದ್ದ ಮಾವಿನ ಮರದ ಮೇಲೆ ಬಿದ್ದಿದೆ. ಬಳಿಕ ಮಾವಿನಮರ ಬುಡಸಮೇತ ಕಿತ್ತು ಕಟ್ಟಡಕ್ಕೆ ತೀರ ಸನಿಹದಲ್ಲೇ ನೆಲಕ್ಕುರುಳಿದೆ. ಬಳಿಕ ಅಶ್ವತ್ಥಮರವೂ ಬಲಬದಿ ರಸ್ತೆಗೆ ಉರುಳಿದೆ.
ಇತರ ದಿನಗಳಲ್ಲಿ ಕಾಲೇಜಿನಲ್ಲಿ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿರುತ್ತಿದ್ದರು. ಇಲ್ಲೇ ಶಿಕ್ಷಕರ ತರಬೇತಿ ಸಂಸ್ಥೆ (ಡಯಟ್) ಕೂಡ ಇದೆ. ಕೆಥೋಲಿಕ್ ಸೆಂಟರ್ ಕಟ್ಟಡದಿಂದ ಹರ್ಷ ಹೊಸ ಶೋರೂಂಗೆ ತೆರಳುವ ರಸ್ತೆ ಇದಾಗಿದ್ದು ವಾರದ ಇತರ ದಿನಗಳಲ್ಲಿ ದಟ್ಟನೆ ಇರುತ್ತದೆ. ರಜೆ ಇದ್ದುದರಿಂದ ಎಲ್ಲರೂ ಪಾರಾಗಿದ್ದಾರೆ.
ವಿದ್ಯುತ್ ಕಂಬಗಳಿಗೆ ಹಾನಿ
ಮರ ವಿದ್ಯುತ್ ತಂತಿಗೆ ಬಿದ್ದು ಇಲ್ಲಿನ 5 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಒಂದು ವಿದ್ಯುತ್ ಕಂಬ ಮರದ ಅಡಿ ಇದೆ. ಕಂಬಗಳನ್ನು ಪುನರ್ನೆಡುವ ಕೆಲಸವನ್ನು ಮೆಸ್ಕಾಂ ಸಿಬಂದಿ ಬೆಳಗ್ಗಿನಿಂದಲೇ ಆರಂಭಿಸಿ ಸಂಜೆಯವರೆಗೂ ನಡೆಸಿದರು. ಶಾಲೆಯ ಮುಖ್ಯ ದ್ವಾರಕ್ಕೆ ಅಡ್ಡಲಾಗಿ ಮರ ಬಿದ್ದಿರುವುದರಿಂದ ಈ ದ್ವಾರದಿಂದ ಪ್ರವೇಶ ಕಷ್ಟಸಾಧ್ಯವಾಗಿದೆ.
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.