ಕಾಂಗ್ರೆಸ್ನಿಂದ ನೈತಿಕತೆ ಪಾಠ ಕಲಿಯಬೇಕಿಲ್ಲ: ಬಿಜೆಪಿ
Team Udayavani, Apr 13, 2017, 3:57 PM IST
ಉಡುಪಿ: ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ ಪೂಜಾರಿ ಸಚ್ಚಾರಿತ್ಯತೆವಂತರಾಗಿದ್ದು, ನಗರಸಭಾ ಸದಸ್ಯರಾಗಿ, 1 ವರ್ಷ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಯಾವುದೇ ಕಪ್ಪುಚುಕ್ಕೆ ಇಲ್ಲದೇ ಜನ ಸೇವೆ ಮಾಡಿರುತ್ತಾರೆ. ಗುಂಡಿಬೈಲು ವಾರ್ಡಿನ ವಾಚನಾಲಯದ ಬಳಿ ಅಳವಡಿಸಿದ ಇಂಟರ್ಲಾಕ್ ಕಾಮಗಾರಿಯ ಇಂಜಿನಿಯರ್ ಗಣೇಶ್ ಆಗಿದ್ದು, ಉಮೇಶ್ ನಾಯಕ್ ಗುತ್ತಿಗೆದಾರರಾಗಿದ್ದರು. ಇದರ ಸಂಪೂರ್ಣ ವಿವರ ನಗರಸಭೆಯಲ್ಲಿದ್ದು, ಮಾಹಿತಿ ಹಕ್ಕಿನ ಮೂಲಕ ಪಡೆಯಬಹುದಾಗಿದೆ.
ಕೋಯಲ್ ಕಟ್ಟಡವು ನಗರಸಭಾ ಬೈಲಾ ಪ್ರಕಾರ ಇದ್ದು 2 ಮಹಡಿ ಹೊಂದಿರುತ್ತದೆ. ಅದರಲ್ಲಿ ಒಂದು ನೆಲ ಮಹಡಿಯಲ್ಲಿ ವಾಣಿಜ್ಯ ನಂಬರ್ ಹೊಂದಿದ್ದು, 1 ತಾತ್ಕಾಲಿಕ ನಂಬ್ರ ಹೊಂದಿರುತ್ತದೆ. ದೊಡ್ಡಣಗುಡ್ಡೆಯ ಮುಖ್ಯ ರಸ್ತೆಯ ಜುಮಾದಿಕಟ್ಟೆವರೆಗೆ 45 ಲ. ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಮಾಡುವ ಯೋಜನೆಯಿತ್ತು. ಆದರೆ ಈಗ ಆ ರಸ್ತೆಯೇ ಇಲ್ಲ. ಕುದ್ರು ಕಲ್ಸಂಕ ಹತ್ತಿರದ ಬೈಲಿನಲ್ಲಿ ಸಾರ್ವಜನಿಕರ ವಿರೋಧದ ಮಧ್ಯೆ 1ಫ್ಲಾ$Âಟಿಗೆ ಯುಜಿಡಿ ಲೈನ್ ಅಳವಡಿಸಲು ಕಾರಣವೇನು?ಬಿಜೆಪಿ ಆಡಳಿತದಲ್ಲಿರುವಾಗ ಕೋಮು ಸೌಹಾರ್ದ ವೇದಿಕೆಯಡಿ ಪ್ರತೀ ವಾರ ಕ್ಷುಲ್ಲಕ ಕಾರಣ ಹಿಡಿದು ಪ್ರತಿಭಟನೆ ಮಾಡುತ್ತಿದ್ದವರು ಕಾಂಗ್ರೆಸ್ ಸರಕಾರ ಬಂದು ತಾನು ನಗರಸಭಾ ನಾಮನಿರ್ದೇಶಿತ ಸದಸ್ಯರಾದ ಕೂಡಲೇ ಉಡುಪಿಯಲ್ಲಿ ಏಕಾಏಕಿ ಕೋಮು ಸೌಹಾರ್ದ ನೆಲೆಸಿತೇ? ಎಂದು ಬಿಜೆಪಿ ನಗರ ಪ್ರ. ಕಾರ್ಯದರ್ಶಿಗಳಾದ ಉಪೇಂದ್ರ ನಾಯಕ್, ಜಗದೀಶ ಆಚಾರ್, ನಗರ ಬಿಜೆಪಿಯ ದಿನಕರ ಶೆಟ್ಟಿ ಹೆರ್ಗ, ಟಿ. ಜಿ. ಹೆಗ್ಡೆ, ದಿನಕರ ಪೂಜಾರಿ, ಡಾ| ಎಂ. ಆರ್. ಪೈ, ಗೀತಾ ಶೆಟ್ಟಿ ಪ್ರಕಟನೆಯಲ್ಲಿ ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.